ರಾಮ ಮಂದಿರ ಮಾದರಿ ಟ್ಯಾಟ್ಯೂ ಕರೆ ಯುವಕರ ಚಿತ್ತ

KannadaprabhaNewsNetwork |  
Published : Jan 22, 2024, 02:22 AM ISTUpdated : Jan 22, 2024, 04:21 PM IST
ಚಿತ್ರ:ತನ್ನ ಕೈ ಮೇಲೆ ಅಯೋಧ್ಯೆ ರಾಮಮಂದಿರದ ಟ್ಯಾಟ್ಯೂ ಹಾಕಿಸಿಕೊಂಡಿರುವ ನಗರದ ಕೆಳಗೋಟೆ ನಿವಾಸಿ ಹರೀಶ್. | Kannada Prabha

ಸಾರಾಂಶ

ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಕೋಟೆ ನಾಡು ಚಿತ್ರದುರ್ಗದಲ್ಲಿ ಯುವಕರು ರಾಮ ಮಂದಿರ ಮಾದರಿಯ ಟ್ಯಾಟ್ಯೂ ಕಡೆ ತಮ್ಮ ಚಿತ್ತ ಹಾಕಿದ್ದಾರೆ.

ಚಿತ್ರದುರ್ಗ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಕೋಟೆ ನಾಡು ಚಿತ್ರದುರ್ಗದಲ್ಲಿ ಯುವಕರು ರಾಮ ಮಂದಿರ ಮಾದರಿಯ ಟ್ಯಾಟ್ಯೂ ಕಡೆ ತಮ್ಮ ಚಿತ್ತ ಹಾಕಿದ್ದಾರೆ.

ನಗರದ ಕೆಳಗೋಟೆ ನಿವಾಸಿ ಯುವಕ ಹರೀಶ್‌ ತನ್ನ ಕೈಮೇಲೆ ರಾಮ ಮಂದಿರದ ಟ್ಯಾಟ್ಯೂ ಹಾಕಿಸಿಕೊಂಡು ತನ್ನ ಶ್ರದ್ಧೆಯನ್ನು ಮೆರೆದಿದ್ದಾನೆ. 

ಜೊತೆಗೆ ತನ್ನ ಎದೆಯ ಮೇಲೆ ಶ್ರೀರಾಮ ತನ್ನ ನೆಚ್ಚಿನ ಭಂಟ ಆಂಜನೇಯನನ್ನು ತಬ್ಬಿಕೊಂಡಿರುವ ಟ್ಯಾಟ್ಯೂ ಹಾಕಿಸಿಕೊಂಡಿದ್ದಾನೆ. 

ಟ್ಯಾಟ್ಯೂ ಕಲಾವಿದ ಮಣಿ ಇಂತಹ ಮಾದರಿಯ ಚಿತ್ರಗಳನ್ನು ಈಗಾಗಲೇ ಮೂವರು ಯುವಕರಿಗೆ ಹಾಕಿರುವುದಾಗಿ ಹೇಳಿದ್ದಾರೆ. ರಾಮಮಂದಿರ ನಿರ್ಮಾಣದ ಹಿಂದೆ ಹಲವರ ಶ್ರಮ ಇದೆ. 

ಇದು ಹಿಂದೂಗಳ ಹೆಮ್ಮೆಯ ದಿನ. ರಾಮಮಂದಿರಕ್ಕಾಗಿ ಹೋರಾಟ ಮಾಡಿದವರ ಸೇವೆಯ ಮುಂದೆ ನಮ್ಮದೇನೂ ಇಲ್ಲ. ಆದ್ದರಿಂದ ನನ್ನ ಶ್ರದ್ಧೆಯ ಅಂಗವಾಗಿ ಟ್ಯಾಟ್ಯೂ ಹಾಕಿಸಿಕೊಂಡಿದ್ದೇನೆ ಎನ್ನುತ್ತಾರೆ ಹರೀಶ್.‌

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ