ಹೊಸಪೇಟೆ: ಶ್ರೀ ರಾಮನವಮಿ ಪ್ರಯುಕ್ತ ನಗರದ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶ್ರೀರಾಮ ಹಾಗೂ ಆಂಜನೇಯ ದೇಗುಲಗಳಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಪೂಜೆಗಳು ಜರುಗಿತು. ಜತೆಗೆ ಎಲ್ಲೆಲ್ಲೂ ಶ್ರೀ ರಾಮನಾಮ ಜಪ ಮೊಳಗಿತು.
ಬೆಳಗ್ಗೆಯಿಂದ ಶ್ರೀರಾಮ ಹಾಗೂ ಆಂಜನೇಯ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದವು. ಇನ್ನು ಪುರಾತನ ಪ್ರಸಿದ್ಧ ಶ್ರೀ ಮಾಲ್ಯವಂತ ಶ್ರೀರಘುನಾಥ ದೇವಾಲಯದಲ್ಲಿ ಹೋಮ, ಹವನ ನೆರವೇರಿತು. ಸಂಜೆ ಶ್ರೀರಾಮನ ಬ್ರಹ್ಮರಥೋತ್ಸವ ನಡೆಯಿತು. ಇನ್ನೂ ಮರಿಯಮ್ಮನಹಳ್ಳಿಯ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ನೂತನ ಜೋಡಿ ರಥೋತ್ಸವ ಸಕಲ ಭಕ್ತರ ಸಮುಖದಲ್ಲಿ ರಥೋತ್ಸವ ನಡೆಯಿತು.
ನಗರದ ದೇಗುಲಗಳ ಬಳಿ ಕೇಸರಿ ಬಾವುಟಗಳು ಗಮನ ಸೆಳೆದವು. ಹಿಂದೆಂದಿಗಿಂತಲೂ ಈ ಬಾರಿ ನಗರದ ಎಲ್ಲೆಡೆ ಕೇಸರಿ ಬಾವುಟಗಳು ಹಾರಾಡಿದವು, ಶ್ರೀರಾಮ ಭಕ್ತರು ಕೇಸರಿ ಪೇಟ ಧರಿಸಿ ಗಮನ ಸೆಳೆದರು. ನಗರದ ರಾಣಿಪೇಟೆಯಲ್ಲಿ ನಡೆದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು ಕೂಡ ಭಾಗಿಯಾಗಿದ್ದರು.ಹರಪನಹಳ್ಳಿಯಲ್ಲಿ ವೈಭವದ ರಾಮನವಮಿ ಉತ್ಸವ:
ಸಂಜೆ ಸೆಕ್ಸೋಫೋನ್ ವಾದನ ಕಾರ್ಯಕ್ರಮ ಜರುಗಿತು. ಸವಿತಾ ಸಮಾಜದ ಅಧ್ಯಕ್ಷ ಸಂತೋಷ ಲಕ್ಷ್ಮೀಪುರಂ, ಉಪಾಧ್ಯಕ್ಷ ಎಚ್. ಸಂತೋಷ, ಕಾರ್ಯದರ್ಶಿ ಸುನೀತಾ, ಖಜಾಂಚಿ ವೆಂಕಟಸ್ವಾಮಿ ಹಾಗೂ ಮುಖಂಡರಾದ ಮಾನಪಾಡು ವೆಂಕಟೇಶ, ಆನಂದ, ಸಾಯಿಪ್ರಸಾದ್, ನರಸಿಂಹಲು, ಎನ್. ಶಂಕರ ಇತರರು ಉಪಸ್ಥಿತರಿದ್ದರು.