)
ವಿಶ್ವದಾದ್ಯಂತ ರಾಮಭಕ್ತರಿಗೆ ಆಘಾತ । ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ
ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ ಘಟನೆ ವಿಶ್ವದಾದ್ಯಂತ ಇರೋ ರಾಮಭಕ್ತರಿಗೆ ಆಘಾತ ತಂದಿದೆ. ಈ ಲೂಟಿ ಕೂಡ ದೊಡ್ಡ ಎಚ್ಚರಿಕೆ ಗಂಟೆ. ಈ ಕೃತ್ಯದಲ್ಲಿ ಯಾರೇ ಇದ್ದರೂ ಉಗ್ರವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬರ್ ಧ್ವಂಸ ಮಾಡಿದ ಜಾಗದಲ್ಲಿ ಅಯೋಧ್ಯೆಯ ಭವ್ಯವಾದ ರಾಮಮಂದಿರ ಕಟ್ಟಲಾಗಿದೆ. ಸರ್ಕಾರದ ಹಣವಿಲ್ಲದೇ, ಭಕ್ತರ ಹಣದಿಂದ ರಾಮಮಂದಿರ ಕಟ್ಟಲಾಯಿತು. ಈಗ ಕಳೆದ 6 ತಿಂಗಳ ಹಿಂದೆ ದೇವಾಲಯದ ಸಿಸಿಟಿವಿ ಹಾಳು ಮಾಡಿ 200 ಬೆಳ್ಳಿಯ ಇಟ್ಟಿಗೆ, ಬಂಗಾರದ ಆಭರಣಗಳನ್ನು ದೋಚಿರುವುದು ಆಶ್ಚರ್ಯ ಮತ್ತು ನೋವು ತಂದಿದೆ ಎಂದರು.ರಾಮಮಂದಿರವನ್ನು ಕಟ್ಟುವುದನ್ನು ವಿರೋಧಿಸುತ್ತಿರುವ ಕೂಗು ಈಗ ಜೋರಾಗಿದೆ. ಈ ವಿಚಾರವನ್ನು ಬಿಜೆಪಿ, ಆರ್ಎಸ್ಎಸ್ ಅನ್ನು ಮಧ್ಯೆ ತಂದು ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಅಲ್ಲಿ ಆಡಳಿತ ಮಂಡಳಿಯು ಜವಬ್ದಾರಿ ತೆಗೆದುಕೊಂಡು ಇದನ್ನು ಬೇಧಿಸಬೇಕಿದೆ. ಇಲ್ಲದಿದ್ದರೆ ಪುಣ್ಯ ಕ್ಷೇತ್ರದ ಬಗ್ಗೆ ಇರುವ ಗೌರವ ಕಡಿಮೆ ಆಗಲಿದೆ. ಈ ಪ್ರಕರಣದಲ್ಲಿ ಅಯೋಧ್ಯೆಯ ದೇವಾಲಯದ ಟ್ರಸ್ಟಿಗಳೇ ಇದ್ದರೂ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ಟೀಕಾಕಾರರಿಗೆ ಈ ಮೂಲಕ ಉತ್ತರ ನೀಡಲಿ ಎಂದರು.
ಬಾಕ್ಸ್...
ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ಎಂಎಲ್ಸಿ ಚುನಾವಣೆಯ ಅಡ್ಡಮತದಾನದ ಕುರಿತು ನಾನು ಮಾತನಾಡಿದ್ದೆ. ಈ ವೇಳೆ ಬಿ.ಸಿ. ಪಾಟೀಲ್, ಅಥವಾ ಶಿವರಾಂ ಹೆಬ್ಬಾರ್ ಅವರ ಹೆಸರನ್ನು ನಾನು ಎಲ್ಲೂ ಪ್ರಸ್ತಾಪಿಸಿಲ್ಲ. ಆದರೆ, ಕೆಲವರು ನನ್ನ ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ರಾಜಕೀಯ ಮಾಡುತ್ತಿದ್ದಾರೆ. ಅಂದು ಆ ಶಾಸಕರು ಬಂದಿದ್ದಕ್ಕೇ ಬಿಜೆಪಿ ಅಧಿಕಾರಕ್ಕೆ ಬಂದಿತು ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ, ಅವರ್ಯಾರೂ ಪಕ್ಷ ಕಟ್ಟುವ ಉದ್ದೇಶದಿಂದ ಬಿಜೆಪಿಗೆ ಬಂದಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
-----
ಎನ್ಸಿಇಆರ್ಟಿಯ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಸಿದ್ದಾರೆ. ಇದು ಈಗ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದೆ. ಈ ದೇಶದ ಜನ ಅದಕ್ಕೆ ಬೆಂಬಲ ಕೊಡುವುದಿಲ್ಲ. ಇಲ್ಲಿ ಕಂಸನ ವಂಶಸ್ಥರೂ ಇದ್ದಾರೆ. ಹಿಂದೂ ಧರ್ಮದ ಬಗ್ಗೆ ಆಕ್ರಮಣ ಇದೇ ಮೊದಲಲ್ಲ. ಕೃಷ್ಣ ರಾಮನ ಬಗ್ಗೆ ಟೀಕೆ ಮಾಡುವವರು ಈ ದೇಶದಲ್ಲಿದ್ದಾರೆ.
----------------