ಪ್ರಪಂಚಕ್ಕೆ ಸನಾತನ ಧರ್ಮದ ತಿರುಳನ್ನು ಪಸರಿಸಿದ್ದು ಸ್ವಾಮಿ ವಿವೇಕಾನಂದ

KannadaprabhaNewsNetwork |  
Published : Jun 26, 2024, 12:45 AM IST
31 | Kannada Prabha

ಸಾರಾಂಶ

ವೇದ ಉಪನಿಷತ್ತುಗಳಲ್ಲಿರುವ ನೈಜ ಆದ್ಯಾತ್ಮಿಕ ಅಂಶಗಳನ್ನು ರಾಷ್ಟ್ರಕ್ಕಲ್ಲದೆ ಇಡೀ ಪ್ರಪಂಚಕ್ಕೆ ಪರಿಚಯಿಸಿದ ವಿವೇಕಾನಂದರು,

ಕನ್ನಡಪ್ರಭ ವಾರ್ತೆ ಮೈಸೂರು

ಭಾರತೀಯ ಸನಾತನ ಆಧ್ಯಾತ್ಮಿಕ ಸಂಸ್ಕೃತಿಯನ್ನು ಇಡೀ ಪ್ರಪಂಚಕ್ಕೆ ಪಸರಿಸಿದ ದಿವ್ಯ ಚೇತನ ಸ್ವಾಮಿ ವಿವೇಕಾನಂದ ಎಂದು ವಿಮರ್ಶಕ ಡಾ. ಲೋಕೇಶ್‌ ತಿಳಿಸಿದರು.

ರಾಮಕೃಷ್ಣನಗರದ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನ ವತಿಯಿಂದ ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಯುವ ನಾಲ್ಕನೆಯ ತಿಂಗಳ ತಿಳಿವು ಕಾರ್ಯಕ್ರಮದಲ್ಲಿ ಆಧುನಿಕ ಭಾರತದ ನಿರ್ಮಾಪಕ ಸ್ವಾಮಿ ವಿವೇಕಾನಂದ ಕುರಿತು ಅವರು ಮಾತನಾಡಿದರು.

ವೇದ ಉಪನಿಷತ್ತುಗಳಲ್ಲಿರುವ ನೈಜ ಆದ್ಯಾತ್ಮಿಕ ಅಂಶಗಳನ್ನು ರಾಷ್ಟ್ರಕ್ಕಲ್ಲದೆ ಇಡೀ ಪ್ರಪಂಚಕ್ಕೆ ಪರಿಚಯಿಸಿದ ವಿವೇಕಾನಂದರು, ಹಿಂದೂ ಧರ್ಮದ ಬಗ್ಗೆ ಇದ್ದ ತಪ್ಪು ಅಭಿಪ್ರಾಯಗಳನ್ನು ನಿವಾರಿಸಿ, ಭಾರತೀಯ ಸನಾತನ ಧರ್ಮ ಹೇಗೆ ಸರ್ವ ಮಾನ್ಯ ಎಂಬ ಅಂಶವನ್ನು ಅನಾವರಣಗೊಳಿಸಿದ ಮಹಾಪುರುಷ ಎಂದರು.

ಜೀವನದಲ್ಲಿ ಶಿಸ್ತು, ಸಾಧಿಸಬೇಕೆಂಬ ಛಲ ಮತ್ತು ಸಾಮಾಜಿಕ ಕಳಕಳಿ ಮತ್ತು ಭಾರತದ ಶ್ರೇಷ್ಠತೆಯನ್ನು ಯುವಜನಾಂಗಕ್ಕೆ ಮನವರಿಕೆ ಮಾಡಿಕೊಟ್ಟು, ಯುವಜನತೆಯಲ್ಲಿ ಭವಿಷ್ಯ ಭಾರತದ ಕನಸು ಭಿತ್ತಿದ ಮಹಾಚೇತನ ಸ್ವಾಮಿ ವಿವೇಕಾನಂದರು ಎಂದು ಅವರು ಹೇಳಿದರು.

ಪ್ರಪಂಚದ ಎಲ್ಲಾ ಧರ್ಮಗಳನ್ನು ಆಳವಾಗಿ ಅಧ್ಯಯನ ಮಾಡಿದ ವಿವೇಕಾನಂದರು, ಹಿಂದೂ ಧರ್ಮದ ಆಧ್ಯಾತ್ಮಿಕತೆ, ಕ್ರೈಸ್ತ ಧರ್ಮದ ಉದಾರತೆ ಮತ್ತು ಮಾನವಿಯತೆ ಹಾಗೂ ಇಸ್ಲಾಂ ಧರ್ಮದ ದೈಹಿಕ ಒಗ್ಗಟ್ಟು ಅನುಕರಣೀಯ ಎಂಬುದನ್ನು ಇಡೀ ವಿಶ್ವಕ್ಕೆ ಸಾರಿ, ಎಲ್ಲಾ ಧರ್ಮಗಳಲ್ಲಿರುವ ಆಧ್ಯಾತ್ಮವನ್ನು ಮಾತ್ರ ತೆಗೆದುಕೊಳ್ಳಬೇಕೆಂದು ಭೋಧಿಸಿದ ಸರ್ವ ಧರ್ಮ ಪ್ರಿಯ ವಿವೇಕಾನಂದರು ಎಂದು ಅವರು ಬಣ್ಣಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಡಿ. ಮಾದೇಗೌಡ, ಕಾರ್ಯಾಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಖಜಾಂಚಿ ಬಸವಲಿಂಗಪ್ಪ, ಕಾರ್ಯದರ್ಶಿ ಕೆಂಪಲಿಂಗರಾಜು ಮೊದಲಾದವರು ಇದ್ದರು. ಉಪಾಧ್ಯಕ್ಷ ಪ್ರೊ. ಚಂದ್ರಶೇಖರ್‌ ಸ್ವಾಗತಿಸಿದರು. ಬಸವಣ್ಣ ವಂದಿಸಿದರು. ಗೋಪಿನಾಥ್ ನಿರೂಪಿಸಿದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?