ಕನ್ನಡಪ್ರಭ ವಾರ್ತೆ ಹೊಸದುರ್ಗ
ಈ ಸಂಬಂಧ ಬೆಳಗ್ಗೆ ಬೆಟ್ಟದ ಮೇಲಿರುವ ಉದ್ಭವ ಮೂರ್ತಿಗೆ ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ ಸೇರಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.
ನಂತರ ಬೆಟ್ಟದ ತಪ್ಪಲಿನಲ್ಲಿ ಶಿವನ ದೇವಾಲಯದ ಆವರಣದಲ್ಲಿ ಚಿಕ್ಕ ಹುಲ್ಲೇನಹಳ್ಳಿ ಗ್ರಾಮದಿಂದ ತರಲಾಗಿದ್ದ ರಂಗನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿವಿಧ ಹೂವು ಬಟ್ಟೆಗಳಿಂದ ಅಲಂಕೃತವಾಗಿದ್ದ ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಸಹಸ್ರಾರು ಭಕ್ತರು ಬ್ರಹ್ಮರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.ಈ ಬ್ರಹ್ಮರಥೋತ್ಸವಕ್ಕೆ ಚಿಕ್ಕ ಹುಲ್ಲೇನಹಳ್ಳಿ ಗ್ರಾಮದಲ್ಲಿರುವ ಐದಳ್ಳಿ ಗ್ರಾಮ ದೇವತೆ ಕರಿಯಮ್ಮ ದೇವಿ, ಹರೇನಹಳ್ಳಿ ಗ್ರಾಮದ ಲಕ್ಷ್ಮಿ ರಂಗನಾಥ ಸ್ವಾಮಿ, ಸಾದರಹಳ್ಳಿ ಗ್ರಾಮದ ಬೇಟೆ ರಂಗನಾಥ ಸ್ವಾಮಿ, ವೆಂಗಳಾಪುರ ಗ್ರಾಮದ ಆಂಜನೇಯ ಸ್ವಾಮಿ, ಕಡವಿಗೆರೆ ಗ್ರಾಮದ ಆದಿಶಕ್ತಿ ದೇವರುಗಳನ್ನು ಕರೆತರಲಾಗಿತ್ತು.
50ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಗ್ಗೆ ದೂಳೋತ್ಸವ ಮದ್ಯಾನ ತೆಪ್ಪೋತ್ಸವ . ರಾತ್ರಿ ಪುಷ್ಪೋತ್ಸವ, ಸರ್ಪವಾಹನೋತ್ಸವ, ಆಂಜನೇಯನೋತ್ಸವ, ಅಡ್ಡ ಪಲ್ಲಕ್ಕಿ ಉತ್ಸವ, ಶಯನೋತ್ಸವ ನಡೆಯಲಿವೆ.