ನರಗುಂದ: ರಾಶಿ ಕಂಪನಿಯವರು ಈ ಭಾಗದ ರೈತರ ಜಮೀನುಗಳಿಗೆ ಅನುಗುಣವಾಗಿ ಹೊಸ ಹತ್ತಿ ಬೀಜಗಳನ್ನು ಮಾರುಕಟ್ಟೆಗೆ ತಂದಿದ್ದು, ರೈತರು ಈ ಬೀಜ ಬಿತ್ತನೆ ಮಾಡಿ ಹೆಚ್ಚಿನ ಇಳುವರಿ ತೆಗೆಯಲು ಸಾಧ್ಯವಿದೆ ಎಂದು ಕಂಪನಿಯು ಟೆರಿಟರಿ ಮ್ಯಾನೇಜರ್ ಶರತ ಭೋರಶೆಟ್ಟರ್ ಹೇಳಿದರು.
ರಾಶಿ ಮ್ಯಾಕ್ಸ್ 929 ಎಚ್ಡಿಪಿಎಸ್ ವಿಧಾನದ ಪ್ರಮುಖ ಲಕ್ಷಣಗಳು ಅತಿ ಬೇಗನೆ ಕಟಾವಿಗೆ ಬರುವುದು. ರಸ ಹೀರುವ ಕೀಟಗಳಿಗೆ ಸಹಿಷ್ಣುತೆ ಹೊಂದಿದೆ. ರಾಸಿ ಮ್ಯಾಕ್ಸ್ 929 ಎಚ್.ಡಿ.ಪಿ.ಎಸ್. ವಿಧಾನವು ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಎಕರೆಗೆ ಹೆಚ್ಚಿನ ಸಂಖ್ಯೆಯ ಸಸ್ಯಗಳಿರುತ್ತವೆ. ಈ ವಿಧಾನವು ಲಭ್ಯವಿರುವ ಭೂಮಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವುದನ್ನು ಖಚಿತಪಡಿಸುತ್ತದೆ. ರೈತರು ತಮ್ಮ ಸಾಗುವಳಿ ಪ್ರದೇಶವನ್ನು ಹೆಚ್ಚಿಸಿ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಅನುವು ಮಾಡಿಕೊಡುತ್ತದೆ ಎಂದರು.
ಶಿವಪ್ಪ ಬೋಳಶೆಟ್ಟಿ, ಬೀಜ ವಿತರಕ ಮಹೇಶ ಟ್ರೇಡರ್ಸ್ ಮಾಲೀಕ ರಮೇಶಗೌಡರ ಕರಕನಗೌಡ್ರ, ತಾಲೂಕು ಸಿಇಒ ನವೀನ ಯಳ್ಳೂರ, ಫೀಲ್ಡ್ ವರ್ಕರ್ ದೇವರಾಜ, ಪ್ರಕಾಶ ಹಳೇಮನಿ, ವಿಠ್ಠಲ ತಿಮ್ಮರೆಡ್ಡಿ, ಚನ್ನಬಸಪ್ಪ ಉಪಸ್ಥಿತರಿದ್ದರು.