ರಥಯಾತ್ರೆ ಸಾಮರಸ್ಯ, ಮೌಲ್ಯ ಬಿತ್ತುವ ಮಹೋತ್ಸವ: ಸಚಿ ಚೈತನ್ಯ ದಾಸ

KannadaprabhaNewsNetwork |  
Published : Jul 27, 2026, 01:30 AM IST
ಸೈದಾಪುರ ಪಟ್ಟಣದಲ್ಲಿ ಭಗವಾನ್ ಶ್ರೀ ಪುರಿ ಜಗನ್ನಾಥ ರಥಯಾತ್ರೆಯ ಅದ್ಧೂರಿ ಮೆರವಣಿಗೆ ಜರುಗಿತು. | Kannada Prabha

ಸಾರಾಂಶ

ದೇವರು ಪ್ರತಿಯೊಂದು ಜೀವಿಯಲ್ಲೂ ನೆಲೆಸಿದ್ದಾನೆ. ಎಲ್ಲರಲ್ಲೂ ದೇವರನ್ನು ಕಾಣುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಿಜವಾದ ಭಕ್ತಿ ಸಾಧ್ಯ. ಜಾತಿ, ಮತ, ಪಂಥಗಳ ಭೇದವನ್ನು ಮರೆತು ಪರಸ್ಪರ ಪ್ರೀತಿ, ಕರುಣೆ ಮತ್ತು ಸೇವಾ ಮನೋಭಾವದಿಂದ ಬದುಕುವುದೇ ಶ್ರೀ ಜಗನ್ನಾಥನ ಸಂದೇಶವಾಗಿದೆ ಎಂದು ಸೈದಾಪುರ ಇಸ್ಕಾನ್ ಟೆಂಪಲ್ ಅಧ್ಯಕ್ಷ ಸಚಿ ಚೈತನ್ಯ ದಾಸರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸೈದಾಪುರ

ದೇವರು ಪ್ರತಿಯೊಂದು ಜೀವಿಯಲ್ಲೂ ನೆಲೆಸಿದ್ದಾನೆ. ಎಲ್ಲರಲ್ಲೂ ದೇವರನ್ನು ಕಾಣುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ನಿಜವಾದ ಭಕ್ತಿ ಸಾಧ್ಯ. ಜಾತಿ, ಮತ, ಪಂಥಗಳ ಭೇದವನ್ನು ಮರೆತು ಪರಸ್ಪರ ಪ್ರೀತಿ, ಕರುಣೆ ಮತ್ತು ಸೇವಾ ಮನೋಭಾವದಿಂದ ಬದುಕುವುದೇ ಶ್ರೀ ಜಗನ್ನಾಥನ ಸಂದೇಶವಾಗಿದೆ ಎಂದು ಸೈದಾಪುರ ಇಸ್ಕಾನ್ ಟೆಂಪಲ್ ಅಧ್ಯಕ್ಷ ಸಚಿ ಚೈತನ್ಯ ದಾಸರು ಅಭಿಪ್ರಾಯಪಟ್ಟರು.

ಪಟ್ಟಣದ ಕೃಷ್ಣ ಬಲರಾಮ ಇಸ್ಕಾನ್ ಟೆಂಪಲ್‌ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಶ್ರೀ ಜಗನ್ನಾಥ ಸ್ವಾಮಿಯ ಪವಿತ್ರ ರಥಯಾತ್ರೆಯು ಭಾನುವಾರ ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ಸೇರಿದ ನೂರಾರು ಭಕ್ತರ ನಡುವೆ ರೈಲ್ವೇ ನಿಲ್ದಾಣದ ಹತ್ತಿರ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ರಥಯಾತ್ರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಸಮಾಜದಲ್ಲಿ ಸಾಮರಸ್ಯ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮಹೋತ್ಸವ ವಾಗಿದೆ. ಪ್ರತಿಯೊಬ್ಬರೂ ಮಾನವ ಸೇವೆಯನ್ನು ಮಾಧವ ಸೇವೆಯೆಂದು ಭಾವಿಸಿ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ-ಹವನ, ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು.

ಬಳಿಕ ಭವ್ಯವಾಗಿ ಅಲಂಕರಿಸಲಾದ ಶ್ರೀ ಜಗನ್ನಾಥ, ಬಲರಾಮ ಹಾಗೂ ಸುಭದ್ರಾ ದೇವಿಯರ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ, ವೇದಘೋಷ, ಭಜನೆ, ಸಂಕೀರ್ತನೆ ಹಾಗೂ ಜೈ ಜಗನ್ನಾಥ ಎಂಬ ಜಯಘೋಷಗಳ ನಡುವೆ ರಥಯಾತ್ರೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥಯಾತ್ರೆಯಲ್ಲಿ ಮಹಿಳೆಯರು, ಯುವಕರು, ಹಿರಿಯರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ರಥದ ಹಗ್ಗವನ್ನು ಎಳೆದು ತಮ್ಮ ಭಕ್ತಿಭಾವವನ್ನು ವ್ಯಕ್ತಪಡಿಸಿದರು. ರಥಯಾತ್ರೆಯುದ್ದಕ್ಕೂ ಭಕ್ತರು ಹೂವಿನ ಮಳೆಗರೆದು ಸ್ವಾಮಿಗೆ ಆರತಿ ಬೆಳಗಿದರು. ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಭಜನೆ, ಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಧಾರ್ಮಿಕ ವಾತಾವರಣವನ್ನು ಮತ್ತಷ್ಟು ಮೆರುಗುಗೊಳಿಸಿದರು. ಈ ಭವ್ಯ ರಥಯಾತ್ರೆಯು ಸೈದಾಪುರದಲ್ಲಿ ಭಕ್ತಿ, ಶಿಸ್ತು, ಸಾಂಸ್ಕೃತಿಕ ವೈಭವ ಮತ್ತು ಸಾಮಾಜಿಕ ಸಾಮರಸ್ಯದ ಸಂಕೇತವಾಗಿ ಮೂಡಿಬಂದಿದ್ದು, ಭಾಗವಹಿಸಿದ್ದ ಭಕ್ತರಲ್ಲಿ ಹೊಸ ಉತ್ಸಾಹ ಮತ್ತು ಆಧ್ಯಾತ್ಮಿಕ ಚೈತನ್ಯವನ್ನು ತುಂಬಿತು.

ಕೊನೆಯಲ್ಲಿ ಮಹಾಮಂಗಳಾರತಿ ನೆರವೇರಿಸಿ ನೂರಾರು ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ಈ ರಥಯಾತ್ರೆಯಲ್ಲಿ ಹಿರಿಯರು, ಯುವಕರು, ಮಹಿಳೆ ಯರು, ಮಕ್ಕಳು ಸೇರಿದಂತೆ ಇತರರಿದ್ದರು. ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ರೈಲ್ವೇ ನಿಲ್ದಾಣದಿಂದ ಜಿ.ಆರ್. ಪಾರ್ಕ್‌ವರೆಗೆ ಸ್ವಯಂ ಸೇವಕರು ಹಾಗೂ ಪೊಲೀಸ್ ಸಿಬ್ಬಂದಿ ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡದಾಳವಟ್ಟದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ
ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗುವುದು ಮುಖ್ಯ: ಸಂಸದ