ಗಜೇಂದ್ರಗಡ: ಕಿತ್ತೂರ ರಾಣಿ ಚೆನ್ನಮ್ಮ, ರಾಯಣ್ಣನ ಇತಿಹಾಸವನ್ನು ಎಲ್ಲೊ ಒಂದು ಒಡೆ ಮುಚ್ಚಿಡುವ ಕಾರ್ಯವಾಗುತ್ತಿದೆ. ಆದರೆ ರಾಯಣ್ಣ, ಬಸವಣ್ಣ ಹಾಗೂ ಚೆನ್ನಮ್ಮನ ಇತಿಹಾಸ ಸೂರ್ಯನ ಕಿರಣಗಳಿದ್ದಂತೆ ಅದನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣನವರ ೧೯೩ನೇ ಹುತಾತ್ಮ ದಿನ, ಕರ್ನಾಟಕ ಸುವರ್ಣ ಸಂಭ್ರಮ ಹಾಗೂ ಜನಪದ ಸಂಜೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಹೋರಾಟ ಅವಿಸ್ಮರಣೀಯ. ಅವರ ದೇಶಪ್ರೇಮ ಹಾಗೂ ನಾಡಿನ ಅಭಿಮಾನವನ್ನು ಯುವ ಸಮೂಹ ಮೈಗೂಡಿಸಿಕೊಂಡು ಸದೃಢ ದೇಶ ನಿರ್ಮಾಣಕ್ಕೆ ಮುಂದಾಗೋಣ ಎಂದ ಅವರು, ಎಚ್.ಎಸ್.ಸೋಂಪುರ ಹೋರಾಟದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್.ಸೋಂಪುರ ಮಾತನಾಡಿದರು.
ಈ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೌರವ ಪುರಸ್ಕಾರ ಬಳಿಕ ಗುರುರಾಜ ಹೊಸಕೋಟೆ ಹಾಗೂ ಸಾದ್ವೀನಿ ಅವರ ತಂಡದಿಂದ ಜನಪದ ಸಂಜೆ ಮತ್ತು ಗಾನಲಹರಿ ಕಾರ್ಯಕ್ರಮ ನಡೆಯಿತು.ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ, ಕನಕಗುರುಪೀಠ, ಬಾದಿಮನಾಳ ಶಾಖಾಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಮುಖಂಡರಾದ ವಿ.ಆರ್.ಗುಡಿಸಾಗರ, ಹನಮಂತಪ್ಪ ಅಬ್ಬಿಗೇರಿ, ವೀರಣ್ಣ ಶೆಟ್ಟರ, ಶಿವರಾಜ ಘೋರ್ಪಡೆ, ಮಂಜುಳಾ ರೇವಡಿ, ಅಮರೇಶ ಗಾಣಿಗೇರ, ಶರಣಪ್ಪ ರೇವಡಿ, ಹಸನಸಾಬ ತಟಗಾರ, ಶಶಿಧರ ಹೂಗಾರ, ವೆಂಕಟೇಶ ಮುದಗಲ್ಲ, ಶರಣಪ್ಪ ರೇವಡಿ, ಅರ್ಜುನ ರಾಠೋಡ, ಬಸವರಾಜ ಶೀಲವಂತರ, ಎ.ಡಿ.ಕೋಲಕಾರ ಸೇರಿ ಇತರರು ಇದ್ದರು.