ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯನಾಗಿದ್ದಾಗ, ಸಿಎಂ ಆಗಿದ್ದ ಬೊಮ್ಮಾಯಿ ಅವರು ಯಾವುದೋ ಉದ್ಯಮಪತಿಗಳಿಗೆ ಮಣಿದು ಕೆಲಸದ ವೇಳೆಯನ್ನು 8ರಿಂದ 11 ಗಂಟೆಗೇರಿಸಿದ್ದರು, ಆಗ ತಾನು ಸರ್ಕಾರದ ವಿರುದ್ಧವೇ ಮಾತನಾಡಿದ್ದೆ. ಅತಿಥಿ ಉಪನ್ಯಾಸಕ ಸಮಸ್ಯೆಯ ಬಗ್ಗೆ ತಮ್ಮದೇ ಸರ್ಕಾರವನ್ನು ಎದುರು ಹಾಕಿಕೊಂಡು ನ್ಯಾಯ ಒದಗಿಸಿದ್ದೆ. ಪೊಲೀಸ್ ಸಿಬ್ಬಂದಿ ಬಗ್ಗೆಯೂ ಹೋರಾಟ ಮಾಡಿದ್ದೆ ಎಂದರು.
ತಾವು ಬೇರೆ ಅಭ್ಯರ್ಥಿಗಳಿಗಿಂತ ಹೆಚ್ಚು ವರ್ಷ ಕಾರ್ಮಿಕಪರ ಕೆಲಸ ಮಾಡಿದ್ದೇನೆ, ಅದಕ್ಕಾಗಿ 30-35 ಮೊಕದ್ದಮೆಗಳನ್ನೂ ಎದುರಿಸಿದ್ದೇನೆ, ಮುಂದೆ ಕಾನೂನು ಹೋರಾಟಕ್ಕೂ ಸಿದ್ಧನಿದ್ದೇನೆ ಎಂದರು.* ಜಾತಿ, ಹಣ ಎಲ್ಲ ಪಕ್ಷದಲ್ಲೂ ಇದೆಎಲ್ಲಾ ಪಕ್ಷಗಳಲ್ಲಿಯೂ ನ್ಯೂನತೆ, ದೋಷ ಇದೆ. ಜಾತಿ ಬಲ, ಹಣ ಬಲ ಎಲ್ಲ ಪಕ್ಷಗಳಲ್ಲಿಯೂ ಪ್ರಭಾವ ಬೀರುತ್ತದೆ. ಆದರೆ ಪರಿಷತ್ ಚುನಾವಣೆಯಲ್ಲಿ ನೌಕರರು, ಕಾರ್ಮಿಕರು ಜಾತಿಗಿಂತ ತಮ್ಮ ಸಮಸ್ಯೆ ಪರಿಹಾರ ಮಾಡುವವರಿಗೆ ಜಾತಿ ನೋಡದೆ ಮತ ಹಾಕುತ್ತಾರೆ ಎಂದರು.
ಭಟ್ ಸ್ಪರ್ಧೆ ಬಿಜೆಪಿ ಆಂತರಿಕ ಸಮಸ್ಯೆ
ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಬಂಡಾಯವಾಗಿ ಪದವೀಧರರ ಕ್ಷೇತ್ರಕ್ಕೆ ಸ್ಪರ್ಧಿಸುತ್ತಿರುವುದು ಅವರ ಪಕ್ಷದ ಆಂತರಿಕ ಸಮಸ್ಯೆ. ಅವರು ನನ್ನ ಆತ್ಮೀಯರು, ಶಾಸಕರಾಗಿ ನನ್ನ ಪಕ್ಕದ ಕೊಠಡಿಯಲ್ಲಿದ್ದರು. ಅವರಂತೆ ಕಾಂಗ್ರೆಸ್ನಿಂದಲೂ ದಿನೇಶ್ ಅವರು ಬಂಡಾಯವಾಗಿ ಸ್ಪರ್ಧಿಸುತ್ತಿದ್ದಾರೆ, ಅವರ ಸ್ಪರ್ಧೆಯಿಂದ ತಮಗೆ ಸಮಸ್ಯೆ ಇಲ್ಲ ಎಂದು ಮಂಜುನಾಥ್ ಹೇಳಿದರು.