ಹುಬ್ಬಳ್ಳಿ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡಿರುವ ತೀರ್ಮಾನವನ್ನು ಸ್ವಾಗತಿಸಿ ಶುಕ್ರವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಇಲ್ಲಿನ ಅಂಬೇಡ್ಕರ ವೃತ್ತಕ್ಕೆ ಆಗಮಿಸಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲಕುಮಾರ್ ಪಾಟೀಲ, ಕೆಪಿಸಿಸಿ ಸದಸ್ಯ ಹಾಗೂ ಸೇವಾದಳದ ಅಧ್ಯಕ್ಷ ಡಿ.ಎಂ. ದೊಡ್ಡಮನಿ, ಪಾಲಿಕೆ ವಿಪಕ್ಷ ನಾಯಕಿ ಸುವರ್ಣ ಕಲಕುಂಟ್ಲ, ಸಂತೀಲಕುಮಾರ, ಇಕ್ಬಾಲ್ ನವಲೂರ, ಪ್ರಕಾಶ್ ಕುರಹಟ್ಟಿ, ಪುಂಡಲೀಕ ಛಲವಾದಿ, ಭೀಮರಾಯ ರಾಯಾಪೂರ, ಅಲ್ತಾಫ ಕಿತ್ತೂರು, ಸಂತೋಷ ಚಲವಾದಿ, ರಾಜು ಮುಷ್ಟಿಪಲ್ಲಿ, ರವಿ ಕಲ್ಯಾಣಿ, ಶ್ರೀಧರ ದೊಡ್ಡಮನಿ, ಸಾಗರ ಹಿರೇಮನಿ, ಪ್ರಕಾಶ್ ಜಾಧವ, ವೀರಣ್ಣ ನೀರಲಗಿ, ಶಾರುಖ್ ಮುಲ್ಲಾ, ಗಿರೀಶ್ ಮುಗಬಸ್ತ, ಕಲಾವತಿ ಸೇರಿದಂತೆ ಹಲವರಿದ್ದರು.