- ಪೊಲೀಸ್ ಇಲಾಖೆಯಿಂದ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ: ಕರಿಯಪ್ಪ ಆರೋಪ
- ಮಗನ ಮೇಲೆ ಹಲ್ಲೆ ಕುರಿತ ಸಿಸಿ ಕ್ಯಾಮೆರಾ ದೃಶ್ಯಗಳು ತಮಗೆ ದೊರೆತಿದ್ದರೂ ಸ್ಪಂದಿಸುತ್ತಿಲ್ಲ - ರಾಹುಲ್ ಎಂಬಾತ ಪವನ್ ಜತೆ ಜಗಳ ಮಾಡಿಕೊಂಡು, ವೈಮನಸ್ಸು ಬೆಳೆಸಿಕೊಂಡಿದ್ದ
- ಮತ್ಸರದಿಂದ ಪವನ್ನನ್ನು ರಾಹುಲ್ ಕೊಲೆ ಮಾಡಿರುವ ಅನುಮಾನ: ಪೋಷಕರು- - -
ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿಕೊಂಡು ಲಕ್ಷಾಂತರ ಫಾಲೋವರ್ಸ್ ಹೊಂದಿದ್ದ ತಮ್ಮ ಮಗ ಮಾ.5ರಂದು ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದು, ಇದನ್ನು ಪುಷ್ಠೀಕರಿಸಲು ಸಿಸಿ ಕ್ಯಾಮೆರಾ ಫುಟೇಜ್ ಸಾಕ್ಷಿಗಳಿವೆ. ಆದರೂ, ಪ್ರಕರಣ ಮುಚ್ಚಿ ಹಾಕುವ ಕೆಲಸ ಪೊಲೀಸ್ ಇಲಾಖೆಯಿಂದ ಆಗುತ್ತಿದೆ ಎಂದು ಮೃತ ಪವನ್ ತಂದೆ ತರಗಾರ ಕೆಲಸ ಮಾಡುವ ಕರಿಯಪ್ಪ ಆರೋಪಿಸಿದರು.
ನಾಲ್ವರು ಮಕ್ಕಳಲ್ಲಿ ಇಬ್ಬರು ಹೆಣ್ಣುಮಕ್ಕಳು ಹಿರಿಯರು. ಇಬ್ಬರು ಗಂಡುಮಕ್ಕಳಲ್ಲಿ ಪವನ್ ಹಿರಿಯ. ಪವನ್ ಜೊತೆಗೆ ರಾಹುಲ್ ಎಂಬಾತ ಜಗಳ ಮಾಡಿಕೊಂಡು, ವೈಮನಸ್ಸು ಬೆಳೆಸಿಕೊಂಡಿದ್ದ. ತಮ್ಮ ಮಗ ಬೆಳೆಯಬಾರದೆಂಬ ಮತ್ಸರದಿಂದ ಆತನೇ ತಮ್ಮ ಮಗನನ್ನು ಕೊಲೆ ಮಾಡಿರುವ ಅನುಮಾನವಿದೆ. ತಮ್ಮ ಮಗನಿಗೆ ಮಾ.5ರ ಸಂಜೆ ಕರೆ ಮಾಡಿ, ಕರೆಸಿಕೊಂಡು ರಾತ್ರಿ 12.30ಕ್ಕೆ ಇತರೆ ಐವರೊಂದಿಗೆ ಸೇರಿ, ಹಲ್ಲೆ ಮಾಡಿದ್ದಾರೆ. ಅನಂತರ ಪವನ್ ಸಾವನ್ನಪ್ಪಿದ್ದಾನೆ. ಆದರೆ, ಪವನ್ ಅಪಘಾತದಲ್ಲಿ ಗಾಯಗೊಂಡಿದ್ದಾನೆ ಎಂದು ಬಿಂಬಿಸಲು ಖಾಸಗಿ ಆಸ್ಪತ್ರೆಗೂ ದಾಖಲು ಮಾಡಿದ್ದಾರೆ. ಆದರೆ, ಮಗನ ಬೈಕ್ ಮುಂಭಾಗವಷ್ಟೇ ಅಲ್ಲ, ಹಿಂಭಾಗವೂ ನುಜ್ಜುಗುಜ್ಜಾಗಿದೆ. ಇದನ್ನು ನೋಡಿದಾಗಲೇ ಪವನ್ ಅಪಘಾತದ ಸತ್ತಿಲ್ಲವೆಂಬ ಅನುಮಾನ ನಮಗೆ ಕಾಡಿತ್ತು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟೀ ಅಂಗಡಿ ನಡೆಸುವ ತಾಯಿ ಪುಷ್ಪಾ, ಸಂಬಂಧಿಗಳಾದ ಗೌರಮ್ಮ, ಸಿದ್ದಣ್ಣ, ನಿಂಗಣ್ಣ ಇತರರು ಇದ್ದರು.
-20ಕೆಡಿವಿಜಿ4, 5.ಜೆಪಿಜಿ: