ಪುನರ್ವಸತಿ ಶಿಕ್ಷೆಯಲ್ಲ, ಭರವಸೆಯ ಮಾರ್ಗ

KannadaprabhaNewsNetwork |  
Published : Jun 28, 2025, 12:18 AM IST
27ಡಿಡಬ್ಲೂಡಿ11ಡಿಮ್ಹಾನ್ಸ್ , ಆಹಾರ ಮತ್ತು ಆಡಳಿತ, ರಸಾಯನಶಾಸ್ತ್ರಜ್ಞರು ಮತ್ತು ಔಷಧ ವ್ಯಾಪಾರಿಗಳ ಸಂಘ ಜಂಟಿಯಾಗಿ ಆಯೋಜಿಸಿದ್ದ ಮಾದಕ ವಸ್ತುಗಳ ವಿರೋಧಿ ದಿನವನ್ನು ಉದ್ಘಾಟಿಸಲಾಯಿತು.   | Kannada Prabha

ಸಾರಾಂಶ

ಯಾರಾದರೂ ಮಾದಕ ವಸ್ತುಗಳ ಬಳಕೆಗೆ ಬಲಿಯಾಗಬಹುದು. ಮಾದಕ ವಸ್ತುಗಳ ಬಳಕೆಯಲ್ಲಿ ತಕ್ಷಣದ ಆನಂದ ಪಡೆಯಲು ಪ್ರಾರಂಭಿಸುತ್ತಾರೆ. ನಂತರ ವ್ಯಕ್ತಿಯ ಏಕಾಗ್ರತೆ ಕಡಿಮೆಯಾಗುತ್ತದೆ

ಧಾರವಾಡ: ವ್ಯಸನ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೆ ಚಿಕಿತ್ಸೆ ಮತ್ತು ಚೇತರಿಕೆ ಯಾವಾಗಲೂ ಸಾಧ್ಯ. ಪುನರ್ವಸತಿ ಶಿಕ್ಷೆಯಲ್ಲ, ಅದು ಭರವಸೆಯ ಮಾರ್ಗವಾಗಿದೆ ಎಂದು ಡಿಮಾನ್ಸ್‌ ನಿರ್ದೇಶಕ ಡಾ. ಅರುಣಕುಮಾರ ಸಿ., ಹೇಳಿದರು.

ಇಲ್ಲಿಯ ಡಿಮ್ಹಾನ್ಸ್, ಆಹಾರ ಮತ್ತು ಆಡಳಿತ,ರಸಾಯನಶಾಸ್ತ್ರಜ್ಞರು ಮತ್ತು ಔಷಧ ವ್ಯಾಪಾರಿಗಳ ಸಂಘ ಜಂಟಿಯಾಗಿ ಆಯೋಜಿಸಿದ್ದ ಮಾದಕ ವಸ್ತುಗಳ ವಿರೋಧಿ ದಿನದಲ್ಲಿ ಮಾತನಾಡಿ, ಸಮಾಜ ಆರೋಗ್ಯಕರವಾಗಿರಬೇಕಾದರೆ ಮಾದಕ ವಸ್ತುಗಳ ವ್ಯಸನ ಮುಕ್ತ ಸಮಾಜ ಇರಬೇಕು. ಮಾದಕ ವಸ್ತುಗಳ ಸೇವನೆಯು ವ್ಯಕ್ತಿಗಳ ಆರೋಗ್ಯಕ್ಕೆ ಯಾವಾಗಲೂ ಹಾನಿಕಾರ. ಹೀಗಿದ್ದರೂ ಕೂಡಾ ಯುವಕರನ್ನು ಒಳಗೊಂಡಂತೆ ವ್ಯಕ್ತಿಗಳು ಮಾದಕ ವಸ್ತುಗಳಿಗೆ ಅಂಟಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ಅಥವಾ ಮಾದಕ ದ್ರವ್ಯಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಮಾದಕ ವಸ್ತುಗಳು ವಿಭಿನ್ನ ಜನರಲ್ಲಿದೆ. ಅದು ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಯುವಕರು,ವೃತ್ತಿಪರರೂ ಆಗಿರಬಹುದು.ಯಾರಾದರೂ ಮಾದಕ ವಸ್ತುಗಳ ಬಳಕೆಗೆ ಬಲಿಯಾಗಬಹುದು. ಮಾದಕ ವಸ್ತುಗಳ ಬಳಕೆಯಲ್ಲಿ ತಕ್ಷಣದ ಆನಂದ ಪಡೆಯಲು ಪ್ರಾರಂಭಿಸುತ್ತಾರೆ. ನಂತರ ವ್ಯಕ್ತಿಯ ಏಕಾಗ್ರತೆ ಕಡಿಮೆಯಾಗುತ್ತದೆ, ಗೊಂದಲ ಉಂಟಾಗುತ್ತದೆ, ಕುಟುಂಬ ಸಂಬಂಧಗಳು, ಕೆಲಸದ ಕಾರ್ಯಕ್ಷಮತೆ ಸಹ ಕಡಿಮೆಯಾಗುತ್ತದೆ ಎಂದರು.

ವ್ಯಸನ ನಿವಾರಣಾ ಘಟಕದ ಮುಖ್ಯಸ್ಥ ಡಾ.ಮಹೇಶ್‌ಮಹದೇವಯ್ಯ, ಮಾದಕ ವಸ್ತುಗಳ ಸೇವನೆ ಮತ್ತು ಅದರಿಂದ ಆಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ವ್ಯಸನ ಹೊಂದಿರುವವರು ಚೇತರಿಸಿಕೊಳ್ಳುತ್ತಿದ್ದಂತೆ ಅವರಿಗೆ ಸಹಾನುಭೂತಿ, ಕಾಳಜಿ ಮತ್ತು ಜವಾಬ್ದಾರಿಯುತ ಬೆಂಬಲ ಕುಟುಂಬಸ್ಥರು ಹಾಗೂ ಸಮಾಜ ತೋರಿಸಬೇಕು ಎಂದರು.

ಡಿಮ್ಹಾನ್ಸ್ ಮುಖ್ಯ ಆಡಳಿತಾಧಿಕಾರಿ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ, ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ ನಾಯಕ್, ಉಪ ಔಷಧ ನಿಯಂತ್ರಕ ಅಜಯ್ ಮುದುಗಲ್ ಇದ್ದರು. ಮನೋವೈದ್ಯಕೀಯ ಕಾರ್ಯಕರ್ತ ಅಶೋಕ್‌ ಕೋರಿ ನಿರೂಪಿಸಿದರು. ಸುಮಾರು 250ಕ್ಕೂ ಹೆಚ್ಚು ಜನರು ಇದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್