ಕನ್ನಡಪ್ರಭ ವಾರ್ತೆ ಆಲಮಟ್ಟಿ
ಈ ಕುರಿತು ನೀರಾವರಿ ನಿಗಮದ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿರುವ ಅವರು, ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳು ಹಾಗೂ ಆಲಮಟ್ಟಿ ಎಡ ಮತ್ತು ಬಲದಂಡೆಯ ಲಿಫ್ಟ್ ನೀರಾವರಿ ಯೋಜನೆಗಳನ್ನು ಕೂಡಲೇ ಕಾರ್ಯಾರಂಭಗೊಳಿಸುವಂತೆ ಸೂಚಿಸಿದ್ದಾರೆ.
ಮನವಿ ಬಳಿಕ ಮಾತನಾಡಿದ ಬೆಳ್ಳುಬ್ಬಿ, ಮಳೆಯ ಕೊರತೆಯಿಂದ ರೈತರು ಹಾಕಿರುವ ಬೆಳೆಗಳು ಒಣಗುವ ಹಂತ ತಲುಪಿವೆ. ಬೆಳೆ ನಷ್ಟದ ಜೊತೆಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೀವ್ರ ಸಮಸ್ಯೆಯಾಗುವ ಆತಂಕವಿದೆ. ಮಹಾಪೂರದ ನೀರು ಲಭ್ಯವಾದ ಕೂಡಲೇ ಯಾವುದೇ ವಿಳಂಬ ಮಾಡದೆ ಈ ಯೋಜನೆಗಳಿಗೆ ನೀರು ಹರಿಸಿ ರೈತರ ಬೆಳೆಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.ಉಗ್ರ ಹೋರಾಟದ ಎಚ್ಚರಿಕೆ:
ಈ ಸಂದರ್ಭದಲ್ಲಿ ರಮೇಶ ಆಲಮಟ್ಟಿ, ಚಂದ್ರಸೇನ ದೇಸಾಯಿ, ಮುತ್ತು ಕಾಜಗಾರ, ಸಂತೋಷ ಕಡಿ, ಬಸವರಾಜ ಸಾತಿಹಾಳ, ಶರಣು ಮುರನಾಳ, ಶ್ರೀಶೈಲ ಓಡಗಲ್, ಬಸವರಾಜ ಪೂಜಾರಿ, ಸಿದ್ದು ಗಣಿ, ಯಲಗೂರದಪ್ಪ ವಗ್ಗರ, ವಿಠ್ಠಲ ವಗ್ಗರ, ಸಂಗಪ್ಪ ಏಳಗಂಟಿ ಸೇರಿದಂತೆ ಹಲವರು ಇದ್ದರು.