ಪಿತೃವಾಕ್ಯ ಪಾಲಕನಾಗಿ, ಏಕಪತ್ನಿ ವ್ರತಸ್ಥನಾಗಿ ಎಲ್ಲರೂ ಪೂಜಿಸುವ ಆರಾಧ್ಯದೈವ. ರಾಮನಾಮ ಪಠಣೆ ಪಾಯಸದಷ್ಟೇ ಸಿಹಿಯಾಗಿದ್ದು, ಮಕ್ಕಳಿಗೆ ಇಂತಹ ಅದರ್ಶ ಪುರುಷೋತ್ತಮರ ಚರಿತ್ರೆ ತಿಳಿ ಹೇಳುವ ಕೆಲಸವಾದಲ್ಲಿ ನಮ್ಮ ನಾಡು ರಾಮ ರಾಜ್ಯವಾಗಲಿದೆ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಆದರ್ಶವೇ ಬದುಕಾಗಿಸಿಕೊಂಡು ಬದುಕಿದ ಮರ್ಯಾದ ಪುರುಷೋತ್ತಮ ರಾಮನ ನಾಮಸ್ಮರಣೆಯಿಂದ ಮಾನಸಿಕ ಕ್ಲೇಶ ಕಳೆದು ಸನ್ನಡತೆಯ ವ್ಯಕ್ತಿತ್ವ, ನೆಮ್ಮದಿಯ ಬದುಕು ಕಾಣಬಹುದು ಎಂದು ವೇದ ಬ್ರಹ್ಮ ಶ್ರೀ ಅನಿಲ್ಶಾಸ್ತ್ರಿ ಹೇಳಿದರು.
ಪಟ್ಟಣದ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಮನವಮಿಯ 9ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ರಾಮ ಒಂದು ಅದ್ಭುತ ಶಕ್ತಿ. ಸನಾತನ ಹಿಂದೂ ಧರ್ಮದಲ್ಲಿ ರಾಮನಿಗೆ ವಿಶೇಷ ಸ್ಥಾನವಿದೆ ಎಂದರು.
ಪಿತೃವಾಕ್ಯ ಪಾಲಕನಾಗಿ, ಏಕಪತ್ನಿ ವ್ರತಸ್ಥನಾಗಿ ಎಲ್ಲರೂ ಪೂಜಿಸುವ ಆರಾಧ್ಯದೈವ. ರಾಮನಾಮ ಪಠಣೆ ಪಾಯಸದಷ್ಟೇ ಸಿಹಿಯಾಗಿದ್ದು, ಮಕ್ಕಳಿಗೆ ಇಂತಹ ಅದರ್ಶ ಪುರುಷೋತ್ತಮರ ಚರಿತ್ರೆ ತಿಳಿ ಹೇಳುವ ಕೆಲಸವಾದಲ್ಲಿ ನಮ್ಮ ನಾಡು ರಾಮ ರಾಜ್ಯವಾಗಲಿದೆ ಎಂದರು.
ಎಲ್ಲರ ಮನಸ್ಸಿನಲ್ಲಿ ಪ್ರೀತಿಯಿಂದ ನೆಲೆಯೂರಿರುವ ರಾಮನ ಸ್ಮರಣೆಯಿಂದ ಬಹುತೇಕ ಸಂಕಷ್ಟ ದೂರವಾಗಲಿದೆ. ಇಂಡೋನೇಷಿಯಾ ಮತ್ತಿತರ ರಾಷ್ಟ್ರಗಳಲ್ಲಿ ರಾಮನಿಗೆ ವಿಶೇಷ ಸ್ಥಾನಮಾನ ಇರುವುದು ನಮ್ಮ ಸನಾತನ ಸಂಸ್ಕೃತಿಯ ಹಿರಿಮೆ. ಇಂತಹ ಧರ್ಮ, ಆಚರಣೆಗಳನ್ನು ಗೌರವಿಸುವ ಕೆಲಸ ಮನದಾಳದಿಂದ ಎಲ್ಲರಲ್ಲೂ ಮೂಡಬೇಕಿದೆ ಎಂದು ನುಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.