ಬ್ಯಾಡಗಿ: ಪಟ್ಟಣದಲ್ಲಿ ಮಾ. 1ರಿಂದ 7 ರ ವರೆಗೆ ಜರುಗುವ ಗ್ರಾಮದೇವತೆ ಜಾತ್ರಾ ಮಹೋತ್ಸವದ ವೇಳೆ ಪಟ್ಟಣದಲ್ಲಿ ಫ್ಲೆಕ್ಸ್, ಬ್ಯಾನರ್ ಕಟ್ಟಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ತಾಲೂಕು ಮುದ್ರಣಕಾರರ ಸಂಘದ ಸದಸ್ಯರು ಮಾಜಿ ಶಾಸಕ ಹಾಗೂ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾಲತೇಶ ಚೊಕ್ಕನಗೌಡ್ರ, ಲೋಹಿತ ಹೆಡಿಯಾಲ, ಉದಯ ಚೌದರಿ, ನೂರಅಹ್ಮದ್ ಮುಗದೂರು, ಸುಭಾಸ ಪಾಟೀಲ, ಸಚಿನ್ ಪಾಟೀಲ ಇತರರಿದ್ದರು.
ಶಾಸಕರಿಂದ ಪರಿಹಾರ ಚೆಕ್ ವಿತರಣೆಬ್ಯಾಡಗಿ: ದುರ್ಘಟನೆಗಳು ಯಾರನ್ನೂ ಎಂದಿಗೂ ಹೇಳಿಕೇಳಿ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಕುಟುಂಬಗಳಿಗೆ ಸರ್ಕಾರ ಅಗತ್ಯವಿರುವ ಆರ್ಥಿಕ ನೆರವು ನೀಡಲಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಬ್ಯಾಡಗಿ ಮತಕ್ಷೇತ್ರದ ಕೂನಬೇವು ಗ್ರಾಮದಲ್ಲಿ ವಿದ್ಯುತ್ ಅವಘಡದಲ್ಲಿ ಗಾಯಗೊಂಡಿದ್ದ ಮಾಲತೇಶ ಗುಡ್ಡಪ್ಪ ಹಲವಾಗಲು ಅವರಿಗೆ ಹೆಸ್ಕಾಂ ವತಿಯಿಂದ ನೀಡಿದ ₹2.50 ಲಕ್ಷ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ಆಕಸ್ಮಿಕ ಅವಘಡಗಳು ನಮ್ಮನ್ನು ಬೆಂಬಿಡದೇ ಬೆನ್ನುಹತ್ತಿವೆ ಎಂದರೂ ತಪ್ಪಿಲ್ಲ. ನಿತ್ಯವೂ ಒಂದಿಲ್ಲೊಂದು ಕಡೆ ಇಂತಹ ದೃಶ್ಯಗಳನ್ನು ನೋಡುತ್ತಿದ್ದೇವೆ. ಅದರಲ್ಲೂ ರೈತರು, ಕುರಿಗಾರರು, ದನಗಾಹಿಗಳು ಸೇರಿದಂತೆ ಕೂಲಿ ಕಾರ್ಮಿಕರು ಅನಿವಾರ್ಯವಾಗಿ ಇಂತಹ ಅವಘಡಗಳನ್ನು ಎದುರಿಸಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಫಿರೋಜ್ಶಾ ಸೋಮನಕಟ್ಟಿ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಕೂನಬೇವು ಗ್ರಾಪಂ ಉಪಾಧ್ಯಕ್ಷ ಮೈಲಾರೆಪ್ಪ ಮಾಳಗುಡ್ಡಪ್ಪನವರ, ಮುಖಂಡರಾದ ಬೀರಣ್ಣ ಬಣಕಾರ, ನಾಗರಾಜ ಆನವೇರಿ, ಮಲ್ಲಪ್ಪ ದೇಸಾಯಿ, ಡಿ.ಎಚ್. ಬುಡ್ಡನಗೌಡ್ರ, ಶಿವಪುತ್ರಪ್ಪ ಅಗಡಿ, ಶಿವಕುಮಾರ ಪಾಟೀಲ, ದುರ್ಗೇಶ ಗೋಣೆಮ್ಮನವರ, ಮುನ್ನಾ ಎರೆಶೀಮಿ, ಸುರೇಶ ಪೂಜಾರ ಸೇರಿದಂತೆ ಇತರರಿದ್ದರು.