ವಾಡಿಕೆಗಿಂತ ತೀರ ಕಡಿಮೆ ಪ್ರಮಾಣದಲ್ಲಿ ಮಳೆ । ರೈತರಿಗೆ ಬರ ಪರಿಹಾರಗಳನ್ನು ಒದಗಿಸುವಂತೆ ಸಿಪಿಐಎಂ ಮನವಿ
ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ, ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಬರ ಪರಿಹಾರ ಕಾಮಗಾರಿಗಳನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)(ಸಿಪಿಐಎಂ) ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಈ ವೇಳೆ ಸಿಪಿಐಎಂ ಜಲ್ಲಾಧ್ಯಕ್ಷ ಜಿ. ಸಿದ್ದಗಂಗಪ್ಪ ಮಾತನಾಡಿ, ಮುಂಗಾರು ಆರಂಭದಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ತೀರ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ಪ್ರಸ್ತುತ ಮುಂಗಾರಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿವೆ. ಬಿತ್ತನೆ ಸಮಯ ಮುಗಿಯುತ್ತಾ ಬಂದರೂ ಅಗತ್ಯ ಮಳೆ ಆಗುತ್ತಿಲ್ಲ. ಜಿಲ್ಲೆಯಲ್ಲಿ 1,26,854 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿದ್ದು, ಇದುವರೆವಿಗೆ ಕೇವಲ 1485 ಹೆಕ್ಟೇರ್ ಅಂದರೆ ಶೇ 1.17 ರಷ್ಟು ಮಾತ್ರ ಬಿತ್ತನೆಯಾಗಿದೆ. ಸಮಯ ಮೀರಿ ಬಿತ್ತನೆ ಮಾಡಿದರೂ ಬೆಳೆ ಸಫಲವಾಗುವ ಅವಕಾಶಗಳು ಕಡಿಮೆ. ಇನ್ನು ಕೊಳವೆ ಬಾವಿಗಳಲ್ಲಿ ಲಭ್ಯವಿರುವ ನೀರಿನಿಂದ ವ್ಯವಸಾಯ ಮಾಡುತ್ತಿರುವ ರೈತರ ಕಷ್ಟ ಹೇಳತೀರದು.ಡೀಸೆಲ್ ದರ ಹೆಚ್ಚಳದಿಂದಾಗಿ ಭೂಮಿ ಉಳುಮೆ ಮಾಡುವ, ರೋಟಿವೇಟರ್ ಹೊಡೆಯುವ ಟ್ರ್ಯಾಕ್ಟರ್ ಬಾಡಿಗೆಗಳು ಜಾಸ್ತಿ ಆಗಿದೆ. ಟೊಮೋಟೊ ಹಾಗೂ ಇತರೆ ತರಕಾರಿ ಬೆಳೆಗಳಿಗೆ ಬಳಸುವ ಮಲ್ಚಿಂಗ್ ಪೇಪರ್, ಟ್ರೈನ್ ದಾರಗಳ ದರಗಳು, ರಸಗೊಬ್ಬರ, ಕ್ರಿಮಿನಾಶಕ ಹಾಗೂ ಇತರೆ ಅಗತ್ಯ ಕೃಷಿ ಉಪಕರಣಗಳ ದರಗಳು ದುಪ್ಪಟ್ಟಾಗಿವೆ. ಆದರೆ ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದೇ. ಹಾಕಿದ ಬಂಡವಾಳವೂ ವಾಪಸ್ಸು ಬರದೇ ರೈತರು ಕಂಗಾಲಾಗಿದ್ದಾರೆ ಎಂದರು.
ವಾರಕ್ಕೊಮ್ಮೆ ಕಡ್ಡಾಯವಾಗಿ ಕೂಲಿ ಹಣ ಪಾವತಿ ಮಾಡಬೇಕು ಮತ್ತು ಇದುವರೆವಿಗೆ ಬಾಕಿ ಇರುವ ಕೂಲಿ ಹಣವನ್ನು ತಕ್ಷಣ ಪಾವತಿ ಮಾಡಬೇಕು. . ಪಟ್ಟಣಗಳಲ್ಲಿ ನಿರುದ್ಯೋಗ ತಡೆಯಲು ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಮಧ್ಯವರ್ತಿಗಳ ಹಾವಳಿಯಾಗಲಿ, ಗುತ್ತಿಗೆದಾರರ ಹಾವಳಿಯಾಗಲಿ ''''''''ಇರದಂತೆ ಎಚ್ಚರವಹಿಸಬೇಕು. ಬೆಲೆ ಏರಿಕೆಯಾಗದಂತೆ ಅಗತ್ಯವಸ್ತುಗಳ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಮತ್ತು ಎಲ್ಲಾ ಅರ್ಹ ಬಡವರಿಗೆ ಬಿ.ಪಿ.ಎಲ್ ಕಾರ್ಡ್ ಮುಂದುವರಿಸಿ ಅಗತ್ಯ 14 ವಸ್ತುಗಳನ್ನು ಸಬ್ಸಿಡಿ ದರದಲ್ಲಿ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸಿಕೆಬಿ-1 ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (ಸಿಪಿಐಎಂ) ಜಿಲ್ಲಾಧಿಕಾರಿ ಜಿ.ಪ್ರಭು ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.