ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಸಂಕ್ಲೀಪುರ ಗ್ರಾಮದಲ್ಲಿ ಪುರವರ್ಗ ಮಠದ ದೊಡ್ಡ ವೀರೇಶ್ವರ ಸ್ವಾಮೀಜಿ ೭೦ನೇ ಪುಣ್ಯ ಸಂಸ್ಮರಣೋತ್ಸವ, ಶಿವದೀಕ್ಷೆ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ ಅನಾದಿ ಕಾಲದಿಂದಲೂ ಮಠ, ಮಂದಿರಗಳು, ಮಾನವನ ಬದುಕು ನಂದನವನವನ್ನಾಗಿ ರೂಪಿಸಿವೆ. ತಂದೆ, ತಾಯಿ, ಗುರು ಮತ್ತು ಭೂಮಿಯ ಗೌರವದಿಂದ ಕಾಣುವರೋ ಅವರಿಗೆ ಮಾತ್ರ ಮುಕ್ತಿ ದೊರಕಲಿದೆ ಎಂದರು.
ಹಿಂದೆ ರಾಗ, ದ್ವೇಷ, ಅಸೂಯೆಗಳು ದೂರವಾಗಿದ್ದವು ಅದರಲ್ಲಿ ಮಠ, ದೇವಾಲಯಗಳ ಪಾತ್ರ ಪ್ರಮುಖವಾಗಿದ್ದವು. ಪ್ರಸ್ತುತ ದುರಾಚಾರ, ದ್ವೇಷ, ಅಶಾಂತಿ, ಕೊಲೆ, ಸುಲಿಗೆ, ವಾಮಮಾರ್ಗ, ದುರ್ವಿಚಾರಗಳು ಸಮಾಜದಲ್ಲಿ ತಾಂಡವವಾಡುತ್ತಿದ್ದು, ಸ್ವಾರ್ಥ ಹೆಚ್ಚಾಗಿದೆ, ನೆಮ್ಮದಿಯಿಲ್ಲದಾಗಿದೆ, ದುಡಿದ ಹಣವೆಲ್ಲಾ ನ್ಯಾಯಾಲಯ, ವಕೀಲರಿಗೆ ಹಾಕುವುದಾಗಿದೆ ಎಂದರು.ರಾಮಘಟ್ಟ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಮಲ್ಲನಾಯ್ಕನಹಳ್ಳಿ, ಬನ್ನಿಕೋಡು, ಕೆಂಗಲಹಳ್ಳಿ ಗ್ರಾಮದಲ್ಲಿ ಪುರವರ್ಗ ಮಠದ ನಿವೇಶನ ಇದೆ. ಪ್ರತಿ ವರ್ಷ ಮಾಘ ಮಾಸದ ಸಂಕ್ಲೀಪುರ ಗ್ರಾಮದಲ್ಲಿ ಧಾರ್ಮಿಕ ಸಭೆ, ಸಾಮೂಹಿಕ ವಿವಾಹ ನೆರವೇರಲಿದೆ. ಸಂಕ್ಲೀಪುರ ಗ್ರಾಮದ ದೊಡ್ಡವೀರೇಶ್ವರ ಸ್ವಾಮೀಜಿ ಹೆಸರಿನ ಸಮುದಾಯ ಭವನಕ್ಕೆ ಮಠದಿಂದ ಒಂದು ಲಕ್ಷ ರುಪಾಯಿ ನೀಡುವುದಾಗಿ ಭರವಸೆ ನೀಡಿದರು.