ಕಂದಾಯ ವಸೂಲಾತಿ ಆಂದೋಲನ

KannadaprabhaNewsNetwork |  
Published : Oct 08, 2023, 12:00 AM IST
7 ಬೀರೂರು1ಬೀರೂರಿನಲ್ಲಿ ಶನಿವಾರ ಪುರಸಭೆ ಅಧಿಕಾರಿಗಳು ವಾಣಿಜ್ಯ ಮಳಿಗೆಗಳಿಂದ ಕಂದಾಯ ವಸೂಲಿ ಮಾಡಿದರು | Kannada Prabha

ಸಾರಾಂಶ

ಕಂದಾಯ ವಸೂಲಾತಿ ಆಂದೋಲನ

ಬೀರೂರು: ಪುರಸಭಾ ವ್ಯಾಪ್ತಿಯ ಮನೆ, ನೀರಿನ ಕಂದಾಯ ಮತ್ತು ಪುರಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆ ಮತ್ತು ಉದ್ದಿಮೆ ಪರವಾನಗಿ ಬಾಕಿ ವಸೂಲಾತಿ ಆಂದೋಲನವನ್ನು ಅ.21ರವರೆಗೆ ಹಮ್ಮಿಕೊಳ್ಳಲಾಗಿದ್ದು, ಕಂದಾಯ ಬಾಕಿ ಇರುವ ಖಾತೆದಾರರು ತುರ್ತಾಗಿ ಪಾವತಿಸುವಂತೆ ಪುರಸಭೆ ಪ್ರಕಟಣೆ ಕೋರಿದೆ. ಕಂದಾಯ ವಸೂಲಿಗೆ ಪುರಸಭೆ ಸಿಬ್ಬಂದಿ ಮನೆ ಮತ್ತು ಅಂಗಡಿಗಳ ಬಾಗಿಲಿಗೆ ಬರುತ್ತಿದ್ದು ಸಾರ್ವಜನಿಕರು ಮತ್ತು ಅಂಗಡಿ ಮಾಲೀಕರು ತೆರಿಗೆ ಪಾವತಿಸಿ ಸಹಕರಿಸಬೇಕು. ನೀರಿನ ಕರ ಹೆಚ್ಚು ಬಾಕಿ ಇದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಿ ಮುಂದಿನ ಕ್ರಮ ಕೈಗೊಳ್ಳ ಲಾಗುವುದು ಎಂದು ಪುರಸಭೆ ವ್ಯವಸ್ಥಾಪಕ ಪ್ರಕಾಶ್ ತಿಳಿಸಿದ್ದಾರೆ. ಕಂದಾಯ ವಸೂಲಾತಿ ಆಂದೋಲನದಲ್ಲಿ ಶನಿವಾರ ವಾಣಿಜ್ಯ ಮಳಿಗೆಗಳ ಬಾಕಿ ವಸೂಲಿಗೆ ಅಧಿಕಾರಿ ಗಳು ಮುಂದಾದರು, ಪುರಸಭೆ ಕಂದಾಯ ಅಧಿಕಾರಿ ಶಿಲ್ಪಾ, ಸ್ವರೂಪರಾಣಿ, ಗಿರಿರಾಜ್, ಕರಿಯಪ್ಪ ಸೇರಿದಂತೆ ಸಿಬ್ಬಂದಿ ಇದ್ದರು. 7 ಬೀರೂರು1 ಬೀರೂರಿನಲ್ಲಿ ಶನಿವಾರ ಪುರಸಭೆ ಅಧಿಕಾರಿಗಳು ವಾಣಿಜ್ಯ ಮಳಿಗೆಗಳಿಂದ ಕಂದಾಯ ವಸೂಲಿ ಮಾಡಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ