ಕನ್ನಡಪ್ರಭ ವಾರ್ತೆ ಕಲಬುರಗಿ
ಹೀಗಾಗಿ ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಮಾರುಕಟ್ಟೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ಮಾಡಿದ ಗಣಪ ಹಾಗೂ ಮೃತ್ತಿಕೆಯ ಗಣಪನ ನಡುವೆ ಭಾರಿ ಪೈಪೋಟಿ ಕಂಡಿದೆ.
ಸೂಪರ್ ಮಾರ್ಕೆಟ್, ಬಸ್ ನಿಲ್ದಾಣ, ರಾಮ ಮಂದಿರ ವೃತ್ತ, ಗಂಜ್, ಜೇವರ್ಗಿ ಕಾಲೋನಿ ಸೇರಿದಂತೆ ಹಲವೆಡೆ ಮೃತ್ತಿಕೆ ಹಾಗೂ ಪಿಓಪಿ ಗಣಪನ ಮೂರ್ತಿಗಳ ಮಾರಾಟ ಭರಟೆಯಿಂದ ಸಾಗಿದೆ. ಇಲ್ಲೆಲ್ಲಾ ವರ್ತಕರು ಗಣಪನ ಪೂಜಾ ಸಾಮಗ್ರಿ, ಗರಿಕೆ, ಉತ್ತರಾಣಿ ಸೇರಿದಂತೆ ಆಧುನಿಕ ಸಾಮಗ್ರಿಗಳು, ಅಲಂಕಾರದ ಸಾಮಗ್ರಿಗಳೆಲ್ಲವನ್ನೂ ಮಾರಾಟಕ್ಕಿಟ್ಟಿದ್ದಾರೆ.ನೂತನ ವಿದ್ಯಾಲಯದಲ್ಲಿ ಅಲ್ಲಿನ ಕಲಾ ವಿಭಾಗದಿಂದ ಮಣ್ಣಿನ ಗಣಪನನ್ನು ಸಿದ್ಧಪಡಿಸಲಾಗಿದ್ದು ಮಾರಾಟಕ್ಕಿಡಲಾಗಿದೆ. ಇಲ್ಲಿಯೂ ಜನ ಮೃತ್ತಿಕೆ ಗಣಪನ ಖರೀದಿಗೆ ಮುಂದಾಗಿದ್ದಾರೆ. ಇಲ್ಲಿನ ಉಪನ್ಯಾಸಕರಾದ ನಾಗರಾಜ್ ಕುಲಕರ್ಣಿ, ಜಿತೇಂದ್ರ ಕೋಥಳೀಕರ್ ಮುಂದಾಳತ್ವದಲ್ಲಿ ಮಣ್ಣಿನ ಗಣಪನ ನಿರ್ಮಾಣವಾಗಿದ್ದು ಇದಕ್ಕಾಗಿ ಕಲಾ ವಿಭಾಗದ ವಿದ್ಯಾರ್ಥಿಗಳನ್ನೂ ಬಲಸಲಾಗಿದೆ.
ರಾಜ್ಯಾದ್ಯಂತ ಪಿ.ಓ.ಪಿ. ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ತಯಾರಿಸುವುದಾಗಲಿ/ ಮಾರಾಟ ಮಾಡುವುದಾಗಲಿ/ ಸಂಗ್ರಹ ಮಾಡುವುದಾಗಲಿ/ ಸಾಗಾಣಿಕೆ ಮಾಡುವುದಾಗಲಿ ಇತ್ಯಾದಿಗಳನ್ನು ಪರಿಸರಕ್ಕೆ ಮಾರಕವೆಂದು ರಾಜ್ಯ ಸರ್ಕಾರವು ಈಗಾಗಲೇ ನಿಷೇಧಿಸಿದೆ.
ಜೇಡಿ ಮಣ್ಣಿನಿಂದ ತಯಾರಿಸಿದ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳು ಕಲಬುರಗಿಯ ಅನೇಕ ಸ್ವದೇಶಿ ಮಳಿಗೆಗಳಲ್ಲಿಯೂ ಲಭ್ಯವಿದ್ದು ಜನ ಇಲ್ಲಿಯೂ ಖರೀದಿಗೆ ಮುಂದಾಗಿದ್ದಾರೆ.