ಕನ್ನಡಪ್ರಭ ವಾರ್ತೆ, ಕೊಪ್ಪ
ಮಲೆನಾಡು ಜಾನಪದ ಸ್ಪರ್ಧೆ ಅಂಗವಾಗಿ ಹಲುಮಕ್ಕಿ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಲೆನಾಡ ಜಾನಪದ ಕಲಾ ವೈಭವದಲ್ಲಿ ಮಾತನಾಡಿ ಯುವ ಪೀಳಿಗೆ ಜಾನಪದ ಕಲೆಯತ್ತ ಆಸಕ್ತಿ ತೋರುತ್ತಿರುವುದು ಅತ್ಯಂತ ಸಂತಸ ಹಾಗೂ ಆಶಾದಾಯಕ ಬೆಳವಣಿಗೆ ಎಂದರು. ಜಾನಪದ ಕಲೆಗಳು ಕೇವಲ ಮನರಂಜನೆಗಾಗಿ ಹುಟ್ಟಿದವುಗಳಲ್ಲ. ಅವು ನಮ್ಮ ಪೂರ್ವ ಜರ ಜೀವನಶೈಲಿ, ಮೌಲ್ಯ, ಸಂಸ್ಕೃತಿ, ನಂಬಿಕೆ ಹಾಗೂ ಸಮಾಜದ ಇತಿಹಾಸ. ಮುಂದಿನ ತಲೆಮಾರಿಗೆ ತಲುಪಿಸುವ ಅಮೂಲ್ಯ ನಿಧಿಯಾಗಿವೆ ಎಂದು ಹೇಳಿದರು.
ಮಲೆನಾಡಿನ ಜಾನಪದ ಗೀತೆಗಳು ಇಲ್ಲಿನ ಪ್ರಕೃತಿ ಸೌಂದರ್ಯ, ಕೃಷಿ ಸಂಸ್ಕೃತಿ, ಗ್ರಾಮೀಣ ಬದುಕು ಹಾಗೂ ಜನರ ಭಾವನೆ ಪ್ರತಿಬಿಂಬಿಸುತ್ತವೆ. ಕೋಲಾಟದಂತಹ ಜನಪದ ನೃತ್ಯ ಸಹಕಾರ, ಸಾಮರಸ್ಯ ಹಾಗೂ ಸಮುದಾಯದ ಏಕತೆ ಸಂದೇಶ ಸಾರಿದರೆ ಭಾವಗೀತೆಗಳು ಕನ್ನಡ ಸಾಹಿತ್ಯದ ಸೊಗಡನ್ನು ಜನಮಾನಸಕ್ಕೆ ತಲುಪಿಸುತ್ತವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕುಂಚೂರು ರತ್ನಾಕರ,ಕಾರ್ಯಕ್ರಮ ಉದ್ಘಾಟಿಸಿದ್ದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕಳಸಪ್ಪ ಅವರನ್ನು ಸುಧಾಕರ್ ಶೆಟ್ಟಿ ಅಭಿನಂದಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದ ಅಮ್ಮ ಫೌಂಡೇಶನ್ ತಾಲೂಕು ವಿಭಾಗದ ಮುಖ್ಯಸ್ಥ ಸತೀಶ್, ಮನೋಜ್ ರಮೇಶ್ ಹಾಗೂ ಶೇಖರ್ ಪೂಜಾರಿ ಅವರ ಸೇವೆ ಶ್ಲಾಘಿಸಿದರು.