ಉತ್ತಮ ಸಮಾಜ ನಿರ್ಮಾಣಕ್ಕೆ ಕವಿಗಳ ಪಾತ್ರ ಪ್ರಮುಖ

KannadaprabhaNewsNetwork |  
Published : Oct 27, 2025, 12:15 AM IST
ಪೋಟೊ26ಕೆಪಿಎಲ್3:‌ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಫಿರ್ ದೋಸ್ ಸಾಂಸ್ಕೃತಿಕ ಕ್ರೀಡಾ ಹಾಗೂ ತರಬೇತಿ ಸಂಸ್ಥೆ ಮತ್ತು ಕರ್ನಾಟಕ ಉರ್ದು ಅಕಾಡೆಮಿ ಸಹಯೋಗದಲ್ಲಿ ಅಖಿಲ ಭಾರತ ಕವಿ ಸಮ್ಮೇಳನ ಹಾಗೂ ಉರ್ದು ಮುಷಾಯರಾ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಉರ್ದು ಭಾಷೆ ಕೂಡ ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದ ಭಾಷೆಯಾಗಿದ್ದು, ನಮ್ಮ ಕನ್ನಡ ಹಿಂದಿ ಮತ್ತು ದೇಶದ ಇತರ ಭಾಷೆಯಂತೆ ಅತ್ಯಂತ ಸೊಗಸಾದ ಭಾಷೆಯಾಗಿದೆ

ಕೊಪ್ಪಳ: ನಗರದ ಸಾಹಿತ್ಯ ಭವನದಲ್ಲಿ ಫಿರ್ ದೋಸ್ ಸಾಂಸ್ಕೃತಿಕ ಕ್ರೀಡಾ ಹಾಗೂ ತರಬೇತಿ ಸಂಸ್ಥೆ ಮತ್ತು ಕರ್ನಾಟಕ ಉರ್ದು ಅಕಾಡೆಮಿ ಸಹಯೋಗದಲ್ಲಿ ಅಖಿಲ ಭಾರತ ಕವಿ ಸಮ್ಮೇಳನ ಹಾಗೂ ಉರ್ದು ಮುಷಾಯರಾ ಕಾರ್ಯಕ್ರಮ ನಡೆಯಿತು.

ಹಿರಿಯ ಸಾಹಿತಿ ಹೋರಾಟಗಾರ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಕವಿ ಮತ್ತು ಸಾಹಿತಿಗಳ ಪಾತ್ರ ಪ್ರಮುಖವಾಗಿದೆ. ಉತ್ತಮ ಸಮಾಜ ನಿರ್ಮಾಣಗೊಳ್ಳುವಲ್ಲಿ ಕವಿ ಮತ್ತು ಸಾಹಿತಿಗಳ ಕೊಡುಗೆ ಅಪಾರವಾಗಿದೆ ಎಂದರು.

ಉರ್ದು ಭಾಷೆ ಕೂಡ ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದ ಭಾಷೆಯಾಗಿದ್ದು, ನಮ್ಮ ಕನ್ನಡ ಹಿಂದಿ ಮತ್ತು ದೇಶದ ಇತರ ಭಾಷೆಯಂತೆ ಅತ್ಯಂತ ಸೊಗಸಾದ ಭಾಷೆಯಾಗಿದೆ ಉರ್ದು ಕವಿಗಳು ಹಿಂದಿ ಮತ್ತು ಕನ್ನಡ ಕವಿ ಒಳಗೊಂಡಂತೆ ಉತ್ತಮ ಕವಿ ಸಮ್ಮೇಳನ ಮಾಡುತ್ತಾ ಬಂದಿದ್ದಾರೆ. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಪರಸ್ಪರ ಅನುಭವ ಹಂಚಿಕೊಳ್ಳಲು ಭಾಷೆ ಅತ್ಯಂತ ಮಹತ್ವವಾಗಿದೆ. ಉರ್ದು ಭಾಷೆ ನಮ್ಮ ದೇಶದ ಭಾಷೆ ಇದು ಎಲ್ಲರೂ ಮಾತಾಡುವಂತಹ ಸಿಹಿ ಭಾಷೆ ಎಲ್ಲರಿಗೂ ಪ್ರಿಯವಾದ ಭಾಷೆ ಕೂಡ ಹೌದು ಎಂದು ಹೇಳಿದರು.

ಸೈಯದ್ ಫೌಂಡೇಶನ್ ಅಧ್ಯಕ್ಷ ಡಾ. ಕೆ.ಎಂ. ಸೈಯದ ಮಾತನಾಡಿ, ಕನ್ನಡ ಉರ್ದು ಹಿಂದಿ ಎಲ್ಲ ಭಾಷೆಗಳಿಗೆ ಜನ ಪ್ರೀತಿಸುತ್ತಾರೆ. ಜನರ ಅಭಿರುಚಿಗೆ ತಕ್ಕಂತೆ ಪ್ರತಿ ವರ್ಷ ಇಲ್ಲಿ ಬೃಹತ್ ಕವಿ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರಿಗೆ ಸಂತಸ ಉಂಟು ಮಾಡಿದೆ ಎಂದರು.

ಧರ್ಮಗುರು ಮೌಲಾನ ಮೊಹಮ್ಮದ್ ಮುಸ್ತಫಾ ಕಮಾಲ್ ಪಾಷಾ ಖಾದ್ರಿ ತಸ್ಕಿನ ಮಾತನಾಡಿ, ಕವನ ವಾಚನ ಕಾರ್ಯಕ್ರಮಗಳಿಂದ ಪರಸ್ಪರ ರಾಷ್ಟ್ರೀಯ ಭಾವೈಕ್ಯತೆ ಬೆಳೆಯುತ್ತದೆ, ಸಮಾಜಕ್ಕೆ ಉತ್ತಮ ಸಂದೇಶ ಇಂತಹ ಕಾರ್ಯಕ್ರಮದಿಂದ ಬರುತ್ತದೆ. ಇಂತಹ ಕಾರ್ಯಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ. ಪಾಷಾ, ಆಸಿಫ್ ಕರ್ಕಿಹಳ್ಳಿ, ಎಂ.ತಾಹಿರ ಅಲಿ ಜಾಫರ್ ಖಾನ್, ರಫೀ ಕೋತ್ವಾಲ್, ಶಫೀಕ್ ದಾಗ್ದಾರ್, ಮೊಹಮ್ಮದ್ ಜಿಲಾನ್ ಕೀಲ್ಲೇದಾರ್, ಚಾಂದ್ ಪಾಷಾ ಕೀಲ್ಲೇದಾರ್, ಸಾವಿತ್ರಿ ಮುಜುಮ್ದಾರ್, ಜೇಬಾ ತಬಸ್ಸುಮ್, ಮಾನ್ವಿ ಪಾಷಾ, ಹುಸೇನ್ ಪೀರಾ ಮುಜಾವರ್ , ಶಮಿಮುನ್ನಿಸ ಬೇಗಂ ಹುನಗುಂದ, ಹಬೀಬ್ ಖಾನ್, ಸೈಯದ್ ಇಮಾಮ್ ಹುಸೇನ್ ಸಿಂದೋಗಿ, ದಾವುದ್‌ ಹುನಗುಂದ , ಸಿರಾಜ್ ಲಾಟಿ ರಿಯಾಜ್, ಅಹಮದ್ ಸಿದ್ದೀಕ್, ಹುಸೇನ್ ಕರ್ಕಿಹಳ್ಳಿ, ಅಬ್ದುಲ್ ಅಜೀಜ್ ಮಾನ್ವಿಕರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕವಿಗಳಾದ ಶಕೀಲ್ ಆಜ್ಮಿ ಮುಂಬೈ, ನದೀಮ್ ಶಾದ್ ದೇವಬಂಧ, ಸುರೇಂದರ್ ಸಿಂಗ್ ಶಜರ್, ಅಬರಾರ ಕಾಶಿಫ್ ಅಮರಾವತಿ, ಅನಾ ದೆಹಲ್ವಿ ದೆಹಲಿ, ಹಾಮಿದ ಭೂಸಾವಲ್ಲಿ, ಚಾಚಾ ಪಾಲoಪುರಿ ತೆಲಂಗಾಣ, ಚಾಂದನಿ ಪಾಂಡೆ ಕಾನ್ಪುರ್, ಸಿರಾಜ್ ಸೋಲಾಪುರಿ ಮುಂಬೈ, ಸುಹಾನಾ ನಾಜ್ ಮುಂಬೈ, ವಿನೀತ್ ಶಂಕರ್ ಪುಣೆ, ರಾಧಿಕಾ ಮಿತ್ತಲ್ ದೆಹಲಿ, ಮಡ್ಡಿ ಕ್ರಸ್ಟಿ ಪುಣೆ, ಹಾಗೂ ರಾಯಚೂರಿನ ಡಾ. ಇಫ್ತೆ ಕಾರ್ ಶಕೀಲ್, ಮತ್ತು ಅನ್ವರ್ ಹುಸೇನ್, ವಿಜಾರತ್ ಅಲಿ ತಾಯರ್, ಸುರೇಂದರ್ ಸಿಂಗ್ ಶಜರ್ , ಮೊಹಮ್ಮದ್ ಬದಿಯುದ್ದೀನ್ ಅಹಮದ್ ನವೀದ, ರಫೀಕ್ ಅಹ್ಮದ್, ಮೊಹಮ್ಮದ್ ಬದಿಯುದ್ದಿನ್ ಸೇರಿದಂತೆ ಅನೇಕರು ಇದ್ದರು.

ಇತ್ತೀಚಿಗಷ್ಟೇ ಡಾಕ್ಟರೇಟ್ ಪದವಿ ಪಡೆದ ಡಾ, ಕೆಎಂ ಸೈಯದಗೆ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ
ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?