ಮಾನವೀಯ ಸಂಬಂಧ ಬೆಳೆಯುವಲ್ಲಿ ರೋಟರಿ ಸಂಸ್ಥೆ ಉತ್ತಮ ವೇದಿಕೆ

KannadaprabhaNewsNetwork |  
Published : Jul 22, 2025, 01:15 AM IST
ಪೊಟೋ ಪೈಲ್ : 21ಬಿಕೆಲ್4 | Kannada Prabha

ಸಾರಾಂಶ

ಬದಲಾಗಿ ಸೇವಾ ಮನೋಭಾವ, ಬದ್ಧತೆ ಹಾಗೂ ಒಗ್ಗಟ್ಟು ಇದರ ಮೂಲ ಅಂಶಗಳಾಗಿವೆ

ಭಟ್ಕಳ: ಇಲ್ಲಿನ ನವಾಯತ್ ಕಾಲೋನಿಯಲ್ಲಿ ನಡೆದ ರೋಟರಿ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಶಾಕೀರ್ ಹುಸೇನ್ ಹಾಗೂ ಕಾರ್ಯದರ್ಶಿಯಾಗಿ ಮಿಸ್ಟಾ ಉಲ್ ಹಕ್ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೋಟರಿಯನ್ ನಾಸೀರ್ ಬೋರ್ಸದ್ವಾಲಾ ಮಾತನಾಡಿ, ಇಂದಿನ ವ್ಯಾಪಾರಮಯ ಸಮಾಜದಲ್ಲಿ ಮಾನವೀಯ ಸಂಬಂಧಗಳು ಹೆಚ್ಚು ಹೆಚ್ಚು ಬೆಳೆಯುವಲ್ಲಿ ರೋಟರಿ ಸಂಸ್ಥೆಯು ಉತ್ತಮ ವೇದಿಕೆಯಾಗಿದೆ ಎಂದರು.

ಅಸಿಸ್ಟೆಂಟ್ ಗವರ್ನರ್ ಮಹೇಶ ಕಲ್ಯಾಣಪುರ ರೋಟರಿ ಸಂಘಟನೆಯು ಕೇವಲ ಕಾರ್ಯಕ್ರಮಗಳಿಗಾಗಿ ಅಲ್ಲ, ಬದಲಾಗಿ ಸೇವಾ ಮನೋಭಾವ, ಬದ್ಧತೆ ಹಾಗೂ ಒಗ್ಗಟ್ಟು ಇದರ ಮೂಲ ಅಂಶಗಳಾಗಿವೆ ಎಂದರು.

ಡಾ.ಸವಿತಾ ಕಾಮತ್, ಇಷ್ತಿಯಾಕ್ ಹಸನ್, ಡಾ.ಝಹೀರ್ ಕೋಲಾ, ಜಲಾಲುದ್ದೀನ್ ಕಾಸರಗೋಡು, ರಾಜೇಶ್ ನಾಯಕ್, ಎಸ್.ಎಂ. ಖಾನ್, ನಜೀರ್ ಕಾಶೀಮ್‌ಜಿ ಮೊದಲಾದವರು ಉಪಸ್ಥಿತರಿದ್ದರು.

ಡಾ. ಗೌರೀಶ್ ಪಡುಕೋಣೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಉತ್ತಮ ಸೇವೆ ನೀಡಿದ ಶುಶ್ರೂಕಿಯರು ಹಾಗೂ ವಾಹನ ತರಬೇತುದಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಭಟ್ಕಳ ರೋಟರಿ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಶುಶ್ರೂಷಕಿ ಅರ್ಚನಾ ಅವರನ್ನು ಸನ್ಮಾನಿಸಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು