ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ಚಡಚಣದ ಇಸ್ಮಾಯಿಲ್ ಗುಲಾಬಸಾಬ ಶೇಖ(29), ಚಡಚಣದ ಜಾಫರ್ ತಂದೆ ಲಾಲಸಾಬ ಮಸಳಿ(36) ಇವರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಸೋಲಾಪೂರದಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ ಎಂದರು.
ಭಾನುವಾರ ಚಡಚಣ ಪಟ್ಟಣಕ್ಕೆ ಅಶೋಕ ಹೊರಡಲು ಸಿದ್ಧವಾಗಿ ಮನೆ ಬಳಿ ನಿಂತಿದ್ದಾಗ ದಾಳಿ ಮಾಡಲಾಗಿದೆ. ಈ ವೇಳೆ ಬೆನ್ನಿಗೆ ಗುಂಡು ತಾಕೀದ್ದು ವಿಪರೀತ ರಕ್ತಸ್ರಾವವಾಗಿ ಅಶೋಕ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಆರೋಪಿತರು ಹಿಂದಿನ ವೈಷಮ್ಯದಿಂದ ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಆರೋಪಿತರ ಕಡೆಯಿಂದ ಒಂದು ಕಂಟ್ರಿ ಪಿಸ್ತೂಲ್ ಹಾಗೂ 3 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನುಳಿದ ಆರೋಪಿತರನ್ನು ಬಂಧಿಸಲಾಗುವುದು. ಪ್ರಕರಣದ ತನಿಖೆ ಮುಂದುವರೆದಿದೆ. ಕೊಲೆ ಹಾಗೂ ಇತರೆ ಪ್ರಕರಣಗಳಲ್ಲಿ ಶಿಕ್ಷೆಯಾಗಿ ಜೈಲು ಸೇರಿದ್ದ ಅಶೋಕ ಕೆಲ ದಿನಗಳ ಹಿಂದಷ್ಟೇ ಪೆರೋಲ್ ಮೇಲೆ ಹೊರಬಂದಿದ್ದ ಎಂದು ಮಾಹಿತಿ ನೀಡಿದರು. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಪಿ.ಎಸ್.ಐ ಸಂಜಯ ಕಲ್ಲೂರ, ಪಿಎಸ್ಐ ಎಸ್.ವಿ.ಗೊಳಸಂಗಿ, ಪೊಲೀಸ್ ಅಧಿಕಾರಿಗಳಾದ ರಂಗೂ ರಾಠೋಡ, ಎಂ.ಎನ್. ಹೊನ್ನಾಕಟ್ಟಿ, ಎಂ.ಜಿ ಪವಾರ, ಆರ್.ಎಚ್.ಡೊಣಗಿ, ಮಲ್ಲು ದ್ಯಾಮಗೋಳ, ಶೇಖರ ಲಮಾಣಿ, ಎಸ್.ಜೆ.ನಾವಿ, ಎ.ಆರ್.ಮಕಾನದಾರ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಶ್ಲಾಘನೀಯ ಎಂದರು.ಈ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷ ಶಂಕರ ಮರಿಹಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ, ಹಟ್ಟಿಇದ್ದರು.