- ಆದಾಯ ಹೆಚ್ಚಿಸಲು ಮಾಲ್ ನಿರ್ಮಾಣ, ಪಾರ್ಕ್ಗಳಿಗೆ ಪ್ರವೇಶ ಶುಲ್ಕ ನಿಗದಿ: ಮೇಯರ್ ಚಮನ್ ಸಾಬ್ ವಿವರ
- ಮೇಯರ್ ಮಂಡಿಸಿರುವುದು ಉತ್ತಮ ಜನಪರ ಬಜೆಟ್ ಎಂದು ಸ್ವಾಗತಿಸಿದ ಕಾಂಗ್ರೆಸ್ ಸದಸ್ಯರು
- - - ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಮಹಾನಗರ ಪಾಲಿಕೆ 2025- 2026ನೇ ಸಾಲಿಗೆ ₹5.16 ಕೋಟಿ ಉಳಿತಾಯ ಬಜೆಟ್ ಅನ್ನು ಮೇಯರ್ ಕೆ.ಚಮನ್ ಸಾಬ್ ಮಂಡಿಸಿದರು.
ಪಾಲಿಕೆಯಲ್ಲಿ ₹3433.11 ಲಕ್ಷ ಆರಂಭಿಕ ಶಿಲ್ಕು ಇದ್ದು, ವಾಣಿಜ್ಯ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಿಗೆ, ಅಭಿವೃದ್ಧಿ ಶಿಲ್ಕು, ಉದ್ದಿಮೆ ಪರವಾನಗಿ, ರಸ್ತೆ ಕಡಿತ ಇತರೆ ಮೂಲಗಳಿಂದ ₹21056.45 ಲಕ್ಷ ರಾಜಸ್ವ ಸ್ವೀಕೃತಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಡೇ ನಲ್ಮ್ ಯೋಜನೆ, 15ನೇ ಕೇಂದ್ರ ಹಣಕಾಸು ಆಯೋಗದ ಅನುದಾನ, ರಾಜ್ಯ ಹಣಕಾಸು ಆಯೋಗದ ಅನುದಾನ, ಎಸ್ಸಿ-ಎಸ್ಟಿ ಅನುದಾನ, ಟಿಎಸ್ಪಿ ಅನುದಾನ, ಎನ್ಸಿಎಪಿ ಹಾಗೂ ಇತರೆ ಅಸಾಮಾನ್ಯ ಜಮೆಗಳಿಂದ ಒಟ್ಟು ₹20852.97 ಲಕ್ಷ ಅಸಾಮಾನ್ಯ ಸ್ವೀಕೃತಿ ನಿರೀಕ್ಷಿಸಲಾಗಿದೆ.
ರಾಜ್ಯ ಸರ್ಕಾರ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡುವ ಯೋಜನೆ ತರುತ್ತಿರುವಂತೆ ಪಾಲಿಕೆ ವ್ಯಾಪ್ತಿಯ 14 ಸಾವಿರ ಆಸ್ತಿಗಳನ್ನು ಆಸ್ತಿ ತೆರಿಗೆ ಜಾಲಕ್ಕೆ ಒಳಪಡಿಸುವುದರಿಂದ 6000 ಲಕ್ಷ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ನೀರಿನ ಕಂದಾಯದಿಂದ ₹600 ಲಕ್ಷ, ವಾಣಿಜ್ಯ ಮಳಿಗೆಗಳಿಂದ ₹150 ಲಕ್ಷ, ವ್ಯಾಪಾರ ಪರವಾನಿಗೆಯಿಂದ ₹165 ಲಕ್ಷ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ.
ಇದೇ ಮೊದಲ ಸಲ ಕಾಸಲ್ ಶ್ರೀನಿವಾಸ ಶ್ರೇಷ್ಠಿ ಉದ್ಯಾನವನ, ಸರ್ ಎಂ.ವಿಶ್ವೇಶ್ವರಯ್ಯ ಪಾರ್ಕ್ ಒಳಗೊಂಡಂತೆ ಅನೇಕ ಪ್ರಮುಖ ಪಾರ್ಕ್ಗಳ ಅಭಿವೃದ್ಧಿಪಡಿಸಿ, ಪ್ರವೇಶ ಶುಲ್ಕ ನಿಗದಿಪಡಿಸಲು ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅಂತರ್ಜಲ ಮರುಪೂರಣ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಇಂಗುಗುಂಡಿಗಳ ನಿರ್ಮಾಣ, ಮಳೆ ನೀರು ಕೊಯ್ಲು ಯೋಜನೆಗೆ ₹50 ಲಕ್ಷ ಮೀಸಲಿಡಲಾಗಿದೆ. ಪಾಲಿಕೆ ಆಸ್ತಿ ಮತ್ತು ಅಭಿವೃದ್ಧಿ ಕಾರ್ಯಗಳ ಕರ, ದಂಡ ವಸೂಲಿ ಇತರೆ ಕಾರ್ಯಕ್ಕೆ ಡ್ರೋನ್ (ಡಿಜಿಟಲ್ ಸರ್ವೇ) ಕೈಗೊಳ್ಳಲು ಪಾಲಿಕೆ ಮುಂದಾಗಿದೆ.
ಉಪ ಮೇಯರ್ ಸೋಗಿ ಶಾಂತಕುಮಾರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಗಣೇಶ, ಉರ್ಬಾನು ಬಾನು ಪಂಡಿತ್, ಸುಧಾ ಇಟ್ಟಿಗುಡಿ ಮಂಜುನಾಥ, ಆಶಾ ಉಮೇಶ, ಕಾಂಗ್ರೆಸ್ ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಅಬ್ದುಲ್ ಲತೀಫ, ಸುರಭಿ ಎಸ್.ಶಿವಮೂರ್ತಿ, ಎಲ್.ಎಂ.ಎಚ್.ಸಾಗರ್, ಉದಯಕುಮಾರ, ಎ.ಬಿ.ರಹೀಂ ಸಾಬ್, ವಿಪಕ್ಷ ನಾಯಕ ಆರ್.ಎಲ್.ಶಿವಪ್ರಕಾಶ, ಮಾಜಿ ಮೇಯರ್ಗಳಾದ ಡಿ.ಎಸ್.ಉಮಾ ಪ್ರಕಾಶ, ಎಸ್.ಟಿ.ವೀರೇಶ, ಸದಸ್ಯರಾದ ಕೆ.ಎಂ.ವೀರೇಶ, ಮಂಜುನಾಥ ನಾಯ್ಕ, ಆರ್.ಶಿವಾನಂದ, ವೀಣಾ ನಂಜಪ್ಪ, ರೇಖಾ ಸುರೇಶ ಗಂಡುಗಾಳೆ ಇತರರು ಇದ್ದರು.
ಬಾಕ್ಸ್ * ಪರ-ವಿರೋಧ ಅಭಿಪ್ರಾಯ- ಅನುಮೋದನೆ
- - - -6ಕೆಡಿವಿಜಿ1, 2, 3, 4.ಜೆಪಿಜಿ:
ದಾವಣಗೆರೆ ಪಾಲಿಕೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷತೆ ವಹಿಸಿ, ಆಯವ್ಯಯ ವಿವರಗಳ ಮಂಡಿಸಿದರು.