ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1925ರಲ್ಲಿ ಆರಂಭವಾಗಿರುವ ಆರ್ಎಸ್ಎಸ್ ಕಾನೂನು ಬಿಟ್ಟು ಯಾವುದೇ ಕೆಲಸ ಮಾಡಿಲ್ಲ. ಸಾಕಷ್ಟು ಬಾರಿ ಆರ್ಎಸ್ಎಸ್ ಮೇಲೆ ಹಲವು ಕೇಸುಗಳಾದಾಗಲೂ ಅದು ಕಾನೂನು ಮೂಲಕ ಹೋರಾಟ ಮಾಡಿ ಗೆದ್ದಿದೆ. ಇದೀಗ ಮತ್ತೆ ಆರ್ಎಸ್ಎಸ್ ಬಗ್ಗೆ ಕೇಳುವ ಕಾಂಗ್ರೆಸ್ ನಾಯಕರಿಗೆ ಸೋಲುವ ಪ್ರಶ್ನೆಯೇ ಇಲ್ಲ. ಗೃಹ ಸಚಿವ ಪ್ರಿಯಾಂಕ ಖರ್ಗೆ ಆರ್ಎಸ್ಎಸ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಗೃಹ ಸಚಿವರಾಗಿರುವ ಖರ್ಗೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಳೆದ 100 ವರ್ಷಗಳಿಂದಲೂ ಕಿರಿಕಿರಿ ಮಾಡಿತ್ತಿರುವ ಕಾಂಗ್ರೆಸ್ನವರೇ ಸೋತು ಆರ್ಎಸ್ಎಸ್ ಬಗ್ಗೆ ಅಭಿಮಾನ ತೋರಿಸಿದ್ದಾರೆ. ಪ್ರಿಯಾಂಕ ಖರ್ಗೆ ಅವರಿಗೆ ಆರ್ಎಸ್ಎಸ್ಗೆ ಏನು ಮಾಡಲು ಆಗುವುದಿಲ್ಲ. ಹಾಗಾಗಿ ಇವರು ಆ ವಿಚಾರ ಬಿಟ್ಟು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಆದರೆ, ಅದನ್ನೇ ಅಪಾರ್ಥವಾಗಿ ಕಲ್ಪಿಸಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರದಲ್ಲೂ ಮಂತ್ರಿಗಳಾದ ಜಿಗಜಿಣಗಿಯವರು ಖರ್ಗೆ ಬಗ್ಗೆ ಕೇಡು ಮಾತನಾಡಿಲ್ಲ. ಹಾಗಾಗಿ ಯಾರೂ ಸಹ ಸಂಸದರ ಬಗ್ಗೆ ಕೇವಲವಾಗಿ ಮಾತನಾಡಬಾರದು ಎಂದು ವಿನಂತಿಸಿದರು.ಮುಖಂಡ ಚಿದಾನಂದ ಚಲವಾದಿ ಮಾತನಾಡಿ, ಜಿಗಜಿಣಗಿಯವರು ಖರ್ಗೆ ಕುಟುಂಬದ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ದಲಿತ ಸಮಾಜದಲ್ಲಿ ಖರ್ಗೆ ಹಾಗೂ ಜಿಗಜಿಣಗಿಯವರು ಎರಡು ಕಣ್ಣುಗಳಿದ್ದಂತೆ. ರಾಜ್ಯದ ಸಿಎಂ ಅವರು ಸದನದಲ್ಲಿ ಸಂಘದ ಗೀತೆ ಹೇಳುತ್ತಾರೆ. ನೀನು ಯಾಕೆ ಅದರ ಬಗ್ಗೆ ಮಾತನಾಡುತ್ತಿಯಾ ಎಂದು ಖರ್ಗೆಗೆ ಬುದ್ದಿಮಾತು ಹೇಳಿದ್ದಾರೆ. ಇದರ ಉದ್ದೇಶ ಕೊಟ್ಟ ಖಾತೆಯಲ್ಲಿ ಚೆನ್ನಾಗಿ ಆಡಳಿತ ನಡೆಸಿ ಹೆಸರು ಮಾಡು ಎಂದು. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೆ ಮೊದಲು ನಾನು ಸಂತಸಪಡುತ್ತೇನೆ ಎಂದಿರುವ ಜಿಗಜಿಣಗಿಯವರ ಬಗ್ಗೆ ಅನರ್ಥ ಅಥವಾ ಅಪಾರ್ಥ ಕಲ್ಪಿಸಬಾರದು. ಕೆಲವು ದಲಿತ ಸಂಘಟನೆಗಳು ಜಿಗಜಿಣಗಿ ಅವರ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದು, ಹಾಗೆ ಮಾತನಾಡಬಾರದು. ಈ ವಿಷಯ ಬೆಳೆಸದೆ ಇಲ್ಲಿಗೆ ಮುಕ್ತಾಯಗೊಳಿಸಬೇಕು ಎಂದು ದಲಿತಪರ ಸಂಘಟನೆಗಳಲ್ಲಿ ಕೋರಿದರು.
ಗೋಷ್ಠಿಯಲ್ಲಿ ಮುಖಂಡರಾದ ಈರಣ್ಣ ರಾವೂರ, ವಿಜಯ ಜೋಶಿ, ಲಿಂಗಪ್ಪ ಅಂಗಡಿ ಇದ್ದರು.
- ಗುರುಲಿಂಗಪ್ಪ ಅಂಗಡಿ ಬಿಜೆಪಿ ಜಿಲ್ಲಾಧ್ಯಕ್ಷ