ಆರ್‌ಎಸ್‌ಎಸ್‌ನಿಂದ ಗೃಹ ಸಂಪರ್ಕ ಅಭಿಯಾನ

KannadaprabhaNewsNetwork |  
Published : Nov 19, 2025, 01:30 AM IST
ನವಲಗುಂದ ತಾಲೂಕಿನ ಮೊರಬ ಗ್ರಾಮದ ಶ್ರೀ ಸಾಯಿಬಾಬಾ ಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೃಹ ಸಂಪರ್ಕ ಅಭಿಯಾನದ ಮನೆ ಮನೆ ಕರಪತ್ರ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಸಂಘವು ಸಮಾಜ ಪರಿವರ್ತನೆಗಾಗಿ ಪಂಚ ಪರಿವರ್ತನೆ ಸೂತ್ರಗಳನ್ನು ಇಟ್ಟುಕೊಂಡು ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪರಿಸರ, ಪ್ರಕೃತಿ ಮಾತೆಯ ರಕ್ಷಣೆಗೆ ಶ್ರಮಿಸುತ್ತಿದೆ.

ನವಲಗುಂದ:

ತಾಲೂಕಿನ ಮೊರಬ ಗ್ರಾಮದ ಶ್ರೀಸಾಯಿ ಮಂದಿರದಲ್ಲಿ ಈಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಮೊರಬ ಹೋಬಳಿ ಮಟ್ಟದ ಗೃಹ ಸಂಪರ್ಕ ಅಭಿಯಾನದ ಅಂಗವಾಗಿ ಅಭಿಯಾನದ ಕರಪತ್ರ ಹಾಗೂ ಭಾರತ ಮಾತೆಯ ಭಾವಚಿತ್ರ ಬಿಡುಗಡೆಗೊಳಿಸಲಾಯಿತು.

ಸಂಘವು ಸಮಾಜ ಪರಿವರ್ತನೆಗಾಗಿ ಪಂಚ ಪರಿವರ್ತನೆ ಸೂತ್ರಗಳನ್ನು ಇಟ್ಟುಕೊಂಡು ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪರಿಸರ, ಪ್ರಕೃತಿ ಮಾತೆಯ ರಕ್ಷಣೆಗೆ ಶ್ರಮಿಸುತ್ತಿದೆ ಎಂದು ಹೇಳಿದ ಸ್ವಯಂ ಸೇವಕರು, ಜಾತಿ-ಭೇದ ದೂರ ಸರಿಸಿ ಸಾಮರಸ್ಯದ ಸಮಾಜ ಹಾಗೂ ಕುಟುಂಬ ಪ್ರಬೋಧನ, ಸಂಸ್ಕಾರ ಬಲಪಡಿಸುವ ಮೂಲಕ ಸುಂದರ ಭಾರತ ಕಟ್ಟೋಣ ಎಂದು ಜಾಗೃತಿ ಮೂಡಿಸಿದರು.

ಸ್ವದೇಶಿ ಭಾವ, ಸ್ವದೇಶಿ ಉಡುಗೆ ತೊಡುಗೆ, ಸ್ವಾವಲಂಬಿ ಭಾರತಕ್ಕೆ ಕೊಡುಗೆ, ನಾಗರಿಕ ಕರ್ತವ್ಯ, ಸಾರ್ವಜನಿಕ ನಿಯಮ ಪಾಲನೆ ಸಹಜ ಸ್ವಭಾವವಾಗಲಿ ಎಂಬ ಉದ್ದೇಶದಿಂದ ಸಂಘವು ಗೃಹಸಂಪರ್ಕ ಅಭಿಯಾನ ಕೈಗೊಂಡಿದೆ ಎಂದು ಪ್ರಮುಖರು ವಿವರಿಸಿದರು.

ಸಂಘದ ಪ್ರಮುಖರಾದ ಹೆಬ್ಬಳ್ಳಿಯ ವೇದವ್ಯಾಸ ದೇಶಪಾಂಡೆ, ಸಂಘದ ಪ್ರೊ. ನಿಂಗಪ್ಪ ಮಡಿವಾಳರ, ಬಿಜೆಪಿ ಮಂಡಳ ಅಧ್ಯಕ್ಷ ಗಂಗಪ್ಪ ಮನಮಿ ಸೇರಿದಂತೆ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ