ರಾಮದುರ್ಗದಲ್ಲಿ ಆರ್‌ಎಸ್ ಎಸ್‌ ಪಥಸಂಚಲನ

KannadaprabhaNewsNetwork |  
Published : Oct 29, 2024, 12:50 AM IST
ವಿಜಯ ದಶಮಿ ಅಂಗವಾಗಿ ರಾಮದುರ್ಗ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರು ಗಣವೇಷಧಾರಿಗಳಾಗಿ ರಾಮದುರ್ಗ ನಗರದಲ್ಲಿ ಸೋಮವಾರ ಆಕರ್ಷಕ ಪಥಸಂಚಲನ ನಡೆಸಿದರು. | Kannada Prabha

ಸಾರಾಂಶ

ವಿಜಯದಶಮಿ ಅಂಗವಾಗಿ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರು ಗಣವೇಷಧಾರಿಗಳಾಗಿ ಸೋಮವಾರ ಆಕರ್ಷಕ ಪಥಸಂಚಲನ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ವಿಜಯದಶಮಿ ಅಂಗವಾಗಿ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರು ಗಣವೇಷಧಾರಿಗಳಾಗಿ ಸೋಮವಾರ ಆಕರ್ಷಕ ಪಥಸಂಚಲನ ನಡೆಸಿದರು.

ಪಟ್ಟಣದ ಬಸವೇಶ್ವರ ಕಾಲೇಜು ಆವರಣದಿಂದ ಹೊರಟ ಗಣವೇಷಧಾರಿಗಳು ಸರ್ಕಾರಿ ಆಸ್ಪತ್ರೆಯ ಹತ್ತಿರದ ಹುತಾತ್ಮ ವೃತ್ತ, ಹಳೆಪೊಲೀಸ್ ಠಾಣೆ, ಅಂಬೇಡ್ಕರ್ ಮಾರ್ಗ ಜುನಿಪೇಠ, ಸಿದ್ಧರಾಮೇಶ್ವರ ನಗರ, ನೇಕಾರ ಪೇಟೆ, ಬನಶಂಕರಿ ದೇವಸ್ಥಾನ, ಗೊಂಬಿ ಗುಡಿ, ತೇರಬರ್ರ್ ಜುನಿಪೇಟ ರೇಣುಕಾಚಾರ್ಯ ವೃತ್ತದ ಮೂಲಕ ಬಸವ ಮಾರ್ಗದಿಂದ ಬಸವೇಶ್ವರ ಶಾಲಾ ಮೈದಾನದಲ್ಲಿ ಮುಕ್ತಾಯವಾಯಿತು.

ಸಾವಿರಾರು ಗಣವೇಷಧಾರಿ ಸ್ವಯಂ ಸೇವಕರು ಪಥಸಂಚಲನದಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ತೆರದ ವಾಹನದಲ್ಲಿ ಭಗವಾಧ್ವಜ ಮತ್ತು ಸಂಘ ಸಂಸ್ಥಾಪಕ ಭಾವಚಿತ್ರ ಇಡಲಾಗತ್ತು. ಪಥಸಂಚಲನ ಸಾಗುವ ಮಾರ್ಗದ ರಸ್ತೆಗಳಲ್ಲಿ ರಂಗೋಲಿ ಮತ್ತು ಹೂಗಳಿಂದ ಅಲಂಕರಿಸಲಾಗಿತ್ತು. ರಸ್ತೆಯುದ್ಧಕ್ಕೂ ಜನರು ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತು ಪಥಸಂಚಲನ ಬೀಳ್ಕೊಟ್ಟರು.

ಬಸವೇಶ್ವರ ಆಟದ ಮೈದಾನದಲ್ಲಿ ಬೌದ್ಧಿಕ ಸಮಾರಂಭ ಜರುಗಿತು. ಸಾವಿರಾರು ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!