ಹೊನ್ನಾಳಿ: ತಾಲೂಕು ಕೃಷಿಕ ಸಮಾಜ ನೂತನ ಅಧ್ಯಕ್ಷರಾಗಿ ಚಿಕ್ಕಹಾಲಿವಾಣ ಗ್ರಾಮದ ಎಲ್. ರುದ್ರಾನಾಯ್ಕ ಅವಿರೋಧ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಮಾ ಅವರು ರುದ್ರಾನಾಯ್ಕ ಅವರು ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಇದೇ ಸಂದರ್ಭ ಉಪಾಧ್ಯಕ್ಷರಾಗಿ ಜಿ. ಶಿವನಗೌಡ ಬೀರಗೊಂಡನಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ ನರಸಗೊಂಡನಹಳ್ಳಿ, ಖಜಾಂಚಿಯಾಗಿ ಕೆ.ಫಾಲಾಕ್ಷಪ್ಪ ದಿಡಗೂರು, ಜಿಲ್ಲಾ ಪ್ರತಿನಿಧಿಯಾಗಿ ಬಸವನಗೌಡ ಕುಂದೂರು ಹಾಗೂ ತಾಲೂಕು ಕೃಷಿಕ ಸಮಾಜದ ಸದಸ್ಯರಾಗಿ ಎಚ್.ಲಿಂಗಯ್ಯ ಹೊನ್ನಾಳಿ, ಮಂಜಪ್ಪ ಬಿದರಗಡ್ಡೆ, ಹಾಲೇಶಪ್ಪ ಕುಂದೂರು, ದುರುಗಪ್ಪ ಚಿಕ್ಕಹಾಲಿವಾಣ, ಶಿವಕುಮಾರ್ ಕುಂದೂರು, ಪುಷ್ಪಲತಾ ಅರಕೆರೆ, ಗೌರಮ್ಮ, ಸಚಿನ್, ಆಂಜನೇಯ, ಸುರೇಶ ನಾಯ್ಕ ಆಯ್ಕೆಯಾದರು. ನೂತನ ಅಧ್ಯಕ್ಷರು ಮತ್ತು ಎಲ್ಲ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಪ್ರತಿಮಾ, ಹಾಗೂ ಕೃಷಿ ಅಧಿಕಾರಿ ಸವಿತಾ ಉಪಸ್ಥಿತರಿದ್ದರು.
- - - -31ಎಚ್.ಎಲ್.ಐ1:ಹೊನ್ನಾಳಿ ತಾಲೂಕು ಕೃಷಿಕ ಸಮಾಜ ಅಧ್ಯಕ್ಷರಾಗಿ ಆಯ್ಕೆಯಾದ ಎಲ್.ರುದ್ರನಾಯ್ಕ ಅವರನ್ನು ಅಭಿನಂದಿಸಲಾಯಿತು.