ವೀರಶೈವ ಭವನಕ್ಕೆ ₹೧೦ ಲಕ್ಷ: ಶರಣಕುಮಾರ ಮೋದಿ

KannadaprabhaNewsNetwork |  
Published : Sep 30, 2024, 01:19 AM IST
ಚಿತ್ತಾಪುರ ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಮತ್ತು ಸನ್ಮಾನ ಸಮಾರಂಭವನ್ನು ಕಂಬಳೇಶ್ವರ ಸಂಸ್ಥಾನದ ಶ್ರೀ ಸೊಮಶೇಖರ ಶಿವಾಚಾರ್ಯರು ಹಾಗೂ ರಾವೂರ ಸಿದ್ದಲಿಂಗಶ್ವರ ಸಂಸ್ಥಾನದ ಸಿದ್ದಲಿಂಗ ಮಹಾಸ್ವಾಮಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಾಜದಲ್ಲಿ ರಾಜಕೀಯ ಬೆರೆಸುವ ಕೆಲಸ ಯಾರು ಮಾಡಬಾರದು. ನಾವು ಸಂಘಟಿತರಾಗಿ ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಸದೃಢರನ್ನಾಗಿ ಮಾಡೋಣ ಎಂದು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ರಾಜ್ಯದಲ್ಲಿ ಅತೀ ದೊಡ್ಡ ಸಮಾಜವಾಗಿರುವ ವೀರಶೈವ ಲಿಂಗಾಯತ ಸಮಾಜವು ಸಂಘಟನೆಯ ಕೊರತೆಯಿಂದ ರಾಜಕೀಯವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದೇವೆ. ಅದಕ್ಕಾಗಿ ಸಮಾಜ ಸಂಘಟನೆಯಲ್ಲಿ ಯಾವುದೇ ಸಮಯದಲ್ಲಾಗಲಿ ರಾಜಕೀಯ ಬೆರೆಸುವ ಕೆಲಸವನ್ನು ಯಾರು ಮಾಡಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಶರಣಕುಮಾರ ಮೊದಿ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಮತ್ತು ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ನಾವು ಸಂಘಟಿತರಾಗಿ ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಸದೃಢರನ್ನಾಗಿ ಮಾಡೋಣ. ಸಂಘಟನೆಯ ಸಮಯದಲ್ಲಿ ಬರುವ ಟೀಕೆಗಳನ್ನು ಹೊಗಳಿಕೆ ಎಂದು ತಿಳಿದು ಅವರ ಮಾರ್ಗದರ್ಶನದಲ್ಲಿ ನಮ್ಮ ಸಮಾಜವನ್ನು ಸಧೃಡವನ್ನಾಗಿ ಮಾಡೋಣ ಇದಕ್ಕೆ ಎಲ್ಲರ ಸಹಕಾರ ಅತಿ ಅವಶ್ಯವಾಗಿದೆ ಎಂದರು.

ವೀರಶೈವ ಲಿಂಗಾಯತ ಸಮಾಜದ ಕಡು ಬಡತನ ಹೊಂದಿರುವ ಮಕ್ಕಳಿಗಾಗಿ ಹಾಸ್ಟೆಲ್ ವ್ಯವಸ್ಥೆಯನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಿದ್ದು, ಇದನ್ನು ತಾಲೂಕು ಮಟ್ಟದಲ್ಲಿಯೂ ವೀರಶೈವ ಭವನ ನಿರ್ಮಾಣಕ್ಕೆ ಮುಂದಾದಲ್ಲಿ ಇದಕ್ಕೆ ಜಿಲ್ಲಾ ಸಂಘದ ವತಿಯಿಂದ ರು.೧೦ ಲಕ್ಷ ಅನುದಾನ ನೀಡುವ ಭರವಸೆಯನ್ನು ಸಭೆಯಲ್ಲಿ ಘೋಷಿಸಿದರು.

ಮುಖಂಡರಾದ ನಾಗರೆಡ್ಡಿ ಪಾಟೀಲ್ ಕರದಾಳ, ಸೊಮಶೇಖ ಪಾಟೀಲ್ ಬೆಳಗುಂಪಾ, ಚಂದ್ರಶೇಖರ ಅವಂಟಿ ಮಾತನಾಡಿದರು.

ತಾಲೂಕು ಅಧ್ಯಕ್ಷ ನಾಗರಾಜ ಬಂಕಲಗಾ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಿದ್ದಲಿಂಗೇಶ್ವರ ಸಂಸ್ಥಾನದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಶಿವಶಂಕರ ಮಠ ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಸಿದ್ದೇಶ್ವರ ಹಿರೆಮಠ ಹಲಕರ್ಟಿಯ ಶ್ರೀ ರಾಜಶೇಖರ ಶಿವಾಚಾರ್ಯರು, ಮುಖಂಡರಾದ ಲಿಂಗಾರೆಡ್ಡಿ ಭಾಸರೆಡ್ಡಿ, ವಿಶ್ವನಾಥ ಪಾಟೀಲ್ ಹೆಬ್ಬಾಳ, ಶಶಿಕಾಂತ ಪಾಟೀಲ್ ಬೆಳಗುಂಪಾ, ಶರಣಬಸಪ್ಪ ಕೊಬಾಳ, ರಾಜಶೇಖರ ಸಿರಿ, ಸಂತೊಷ ಪಾಟೀಲ್, ಗೌರಿ ಚಿಂತಕೊಟಿ, ಸೊಮಶೇಖರ ಹಿರೆಮಠ, ಶರಣು ಪಾಟೀಲ್, ರಾಜಶೇಖರ ನೀಲಂಗಿ, ಸಿದ್ದು ಅಂಗಡಿ, ಚಂದ್ರಶೇಖರ ಕರ್ಜಗಿ, ಚನ್ನಪ್ಪ ಪಾಟೀಲ್, ಸಿದ್ದುಗೌಡ ಅಫಜಲಪುರಕರ್ ವೇದಿಕೆಯಲ್ಲಿದ್ದರು.

ಅಂಬರೀಶ ಸುಲೇಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಣ್ಣ ಚಾಳಿಕಾರ ಸ್ವಾಗತಿಸಿದರು. ವೀರೇಶ ಮಕಾಪ ನಿರೂಪಿಸಿದರು, ಆನಂದ ಪಾಟೀಲ್ ನರಿಬೋಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!