ದೇವನಹಳ್ಳಿ: ಗ್ರಾಮೀಣ ಭಾಗದಲ್ಲಿ ಗುಡಿ ಕೈಗಾರಿಕೆಗಳನ್ನು ಪ್ರಾರಂಭಿಸಿ ಅವಶ್ಯಕ ವಸ್ತುಗಳನ್ನು ತಯಾರಿಸಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಸಂಘದ ಆರ್.ಜಯರಾಮ್ ಮಾತನಾಡಿ, ಸಹಕಾರ ಸಂಘದ ಖಾದಿ ಭವನದ 2ನೇ ಅಂತಸ್ತಿನ ಶಂಕುಸ್ಥಾಪನೆ ಆಗಿದೆ. ಅನೇಕರ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಪ್ರತಿಯೊಂದು ಸಮುದಾಯದ ಕುಲಕಸಬಿಗೂ ಅವರವರ ಕೆಲಸಗಳಿಗೆ ಹಲವಾರು ಕಾರ್ಯಯೋಜನೆಗಳಿದ್ದು ಸದುಪಯೋಗ ಪಡಿಸಿಕೊಳ್ಳಬೇಕು. ಖಾದಿ ಬೋರ್ಡ್ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರಿಗೆ ಕಡಿಮೆ ಬಡ್ದಿ ದರದಲ್ಲಿ ದೊರೆಯುತ್ತಿದ್ದು ಸದ್ಬಳಸಿಕೊಳ್ಳಬೇಕು ಎಂದರು.
ಗ್ರಾಮೋದ್ಯೋಗ ಕಸಬುದಾರರ ಕೈಗಾರಿಕಾ ವಿವಿಧೋದ್ದೇಶ ಸಹಕಾರ ಸಂಘದ ಸಿಇಒ ಎಚ್.ಎನ್.ಶ್ರೀನಿವಾಸಮೂರ್ತಿ ಆಯವ್ಯಯ ಮಂಡಿಸಿದರು.ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಎಸ್ ರವಿ, ಬಯಪ ಅಧ್ಯಕ್ಷ ಶಾಂತಕುಮಾರ್, ಬಮೂಲ್ ನಿರ್ದೇಶಕ ಎಸ್.ಪಿ.ಮುನಿರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ್, ಮುಖಂಡರಾದ ಲಕ್ಷ್ಮೀ ನಾರಾಯಣಪ್ಪ, ಪ್ರಸನ್ನ ಕುಮಾರ್, ಲೋಕೇಶ್, ಕೆ.ಸಿ.ಮಂಜುನಾಥ್, ದಿನ್ನೂರು ವೆಂಕಟೇಶ್, ಬೂದಿಗೆರೆ ಶ್ರೀನಿವಾಸಗೌಡ, ಖಾದಿ ಬೋರ್ಡ್ ಉಪಾಧ್ಯಕ್ಷೆ ಮಂಜುಳಾಮೋಹನ್, ನಿರ್ದೇಶಕರಾದ ಪಟಾಲಪ್ಪ, ಎಂ.ಶ್ರೀನಿವಾಸ್, ಆರ್. ಲಕ್ಷ್ಮಣಮೂರ್ತಿ, ಎಸ್.ನಾಗೇಗೌಡ, ಡಿ. ಮುನಿರಾಜು, ಬಿ.ಎಲ್.ರಘು, ಸುಮಂತ್, ನಾರಾಯಣಸ್ವಾಮಿ, ರಾಧಾ, ಮುನಿರಾಜು, ಕೈಗಾರಿಕಾ ವಿಸ್ತರಣಾಧಿಕಾರಿ ಶ್ರೀನಿವಾಸಮೂರ್ತಿ ಇತರರಿದ್ದರು.
೨೫ ದೇವನಹಳ್ಳಿ ಚಿತ್ರಸುದ್ದಿ:೦೧ದೇವನಹಳ್ಳಿ ತಾಲೂಕು ಗ್ರಾಮೋದ್ಯೋಗ ಕಸುಬುದಾರರ ಕೈಗಾರಿಕಾ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಖಾದಿ ಭವನದ 2ನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸಚಿವ ಕೆ.ಹೆಚ್ ಮುನಿಯಪ್ಪ ಶಂಕುಸ್ಥಾಪನೆ ನೆರವೇರಿಸಿದರು.