)
ಬೆಂಗಳೂರು/ನವದೆಹಲಿ
ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲೂ ಇ.ಡಿ.ಗಳ ದಾಳಿ ನಡೆದಿದೆ. ಕರ್ನಾಟಕದಲ್ಲಿ ಪ್ರಕರಣದ ಪ್ರಮುಖ ಆರೋಪಿ ಪೊಟ್ಟಿ ಉನ್ನಿಕೃಷ್ಣನ್ ಅವರ ಬೆಂಗಳೂರಿನಲ್ಲಿರುವ ಶ್ರೀರಾಂಪುರದಲ್ಲಿರುವ ಮನೆ, ಆಭರಣಕಾರ ಗೋವರ್ಧನ್ ಎಂಬುವವರ ಬಳ್ಳಾರಿ ಮನೆ, ಚಿನ್ನಾಭರಣ ಮಳಿಗೆಯಾದ ರೊದ್ದಂ ಜ್ಯುವೆಲರ್ಸ್ ಮೇಲೂ ದಾಳಿ ನಡೆದಿದೆ. ಸುಮಾರು 10 ಮಂದಿ ಅಧಿಕಾರಿಗಳ ತಂಡ ದಾಖಲೆಗಳು ಮತ್ತು ಹಣಕಾಸು ವ್ಯವಹಾರಗಳ ಶೋಧ ಕಾರ್ಯ ನಡೆಸಿದೆ.
ಇನ್ನು ಕೇರಳದಲ್ಲಿ ತಿರುವನಂತಪುರದ ಪುಳಿಮುಟ್ಟುನಲ್ಲಿರುವ ಉನ್ನಿಕೃಷ್ಣನ್ ಪೊಟ್ಟಿ ಮನೆ, ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಮುಖ್ಯ ಕಚೇರಿ, ಟಿಡಿಬಿ ಮಾಜಿ ಅಧ್ಯಕ್ಷ ಎ.ಪದ್ಮಕುಮಾರ್ ಅವರ ಮನೆ, ಪೆಟ್ಟಾದಲ್ಲಿರುವ ಮಾಜಿ ಟಿಡಿಬಿ ಆಯುಕ್ತ, ಅಧ್ಯಕ್ಷ ಎನ್.ವಾಸು ಅವರ ಮನೆ ಸೇರಿ ಹಲವು ಅಧಿಕಾರಿಗಳು, ತಮಿಳುನಾಡಿನ ಚೆನ್ನೈನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್ನ ಪಂಕಜ್ ಭಂಡಾರಿ ಅವರ ಮನೆಗಳ ಮೇಲೂ ದಾಳಿ ನಡೆಸಿ, ಮಾಹಿತಿ ಕಲೆಹಾಕಲಾಗಿದೆ. ಒಟ್ಟು 100ಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.2019ರಲ್ಲಿ ನಡೆದಿದ್ದ ಈ ಕಳವು ಪ್ರಕರಣಕ್ಕೆ ಸಂಬಂಧಿಸಿ ಇ.ಡಿ.ಯು ಜ.9ರಂದು ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿತ್ತು. ಈ ಪ್ರಕರಣವನ್ನು ಕೇರಳ ಹೈಕೋರ್ಟ್ ಮೇಲುಸ್ತುವಾರಿಯಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ.