ಯಲಬುರ್ಗಾ: ರಂಗಭೂಮಿ ಕಲೆಗೆ ಸಹಜಾ ನಾಟಕೋತ್ಸವ ತನ್ನದೇ ಆದ ಕೊಡುಗೆ ನೀಡಿದೆ ಎಂದು ರಂಗಭೂಮಿ ಹಿರಿಯ ಕಲಾವಿದ ತೇಜನಗೌಡ ಪೊಲೀಸ್ ಪಾಟೀಲ್ ಹೇಳಿದರು.
ಕೊಪ್ಪಳದ ಸಹಜಾ ಟ್ರಸ್ಟ್, ಶಿರಗೇರಿ ಧಾತ್ರಿರಂಗ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾದ ಶಿವಶರಣ ಹರಳಯ್ಯ ಭಕ್ತಿ ಪ್ರಧಾನ ನಾಟಕ ಹಾಗೂ ಸಂಸಾರದಲ್ಲಿ ಸನಿದಪ ನಾಟಕಗಳು ಸಮಾಜ ಸುಧಾರಣೆ ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು.
ಮಕ್ಕಳ್ಳಿಯ ಶಿವಾನಂದ ಮಠದ ಶ್ರೀಶಿವಾನಂದ ಸ್ವಾಮೀಜಿ ಮಾತನಾಡಿ, ಸಹಜಾ ಟ್ರಸ್ಟ್ ರಂಗಭೂಮಿಗೆ ಸಲ್ಲಿಸುತ್ತಿರುವ ಸೇವೆ ಅನನ್ಯ. ಈ ಸಂಸ್ಥೆಗೆ ಇನ್ನಷ್ಟು ನೆರವು ಅತ್ಯಗತ್ಯವಾಗಿದೆ ಎಂದು ಹೇಳಿದರು.ಇದೆ ವೇಳೆ ಸತತ ಮೂವತ್ತು ವರ್ಷಗಳ ಕಾಲ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ತೇಜನಗೌಡ ಪೊಲೀಸ್ ಪಾಟೀಲ್, ಪ್ರಭುಗೌಡ ಪೊಲೀಸ್ ಪಾಟೀಲ್, ರಂಗನಗೌಡ ಮಾಲಿಪಾಟೀಲ್, ಯಮನೂರಪ್ಪ ಕಂಬಳಿ, ಮಲ್ಲನಗೌಡ ಪೊಲೀಸ್ ಪಾಟೀಲ್, ಶ್ರೀಕಾಂತಗೌಡ ಮಾಲಿಪಾಟೀಲ್, ಲೋಕೇಶ ನಾಯ್ಕ ಅವರಿಗೆ ಸಹಜಾ ಟ್ರಸ್ಟ್ ವತಿಯಿಂದ ಸಹಜ ರಂಗಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭ ಸಹಜಾ ಟ್ರಸ್ಟ್ ಕಾರ್ಯದರ್ಶಿ ಶೀಲಾ ಹಾಲ್ಕುರಿಕೆ, ಸ್ಥಳೀಯ ಕಲಾವಿದ ವೀರೇಶ ನಾಯಕ, ಪರಮೇಶಗೌಡ್ರ, ಟಾಕನಗೌಡ ಮಾಲಿಪಾಟೀಲ್, ಹನಮಂತಪ್ಪ ತಳವಾರ್, ಫಕೀರಗೌಡ ಮಾಲಿಪಾಟೀಲ್, ಕಾಳೇಶ ಕಮ್ಮಾರ, ವೆಂಕೋಬ ನಾಯ್ಕ, ಯಮನೂರಪ್ಪ ತಳವಾರ, ಶಿವನಗೌಡ ಮಾಲಿಪಾಟೀಲ್, ಹನುಮಗೌಡ ಮಾಲಿಪಾಟೀಲ್, ಹನುಮಂತಪ್ಪ ಕಮ್ಮಾರ, ಗುನ್ನೆಪ್ಪ ಚನ್ನದಾಸರ ಸೇರಿದಂತೆ ಮತ್ತಿತರರು ಇದ್ದರು.