ಲೋಕಕಲ್ಯಾಣಾರ್ಥ ಸಹಸ್ರ ಚಂಡಿಕಾಯಾಗ

KannadaprabhaNewsNetwork |  
Published : May 08, 2025, 12:31 AM IST
ಸಹಸ್ರ ಚಂಡಿಕಾಯಾಗ | Kannada Prabha

ಸಾರಾಂಶ

ಎಸ್‌ಎಸ್‌ಕೆ ಪಂಚ ಟ್ರಸ್ಟ್‌ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ನ​ಡೆ​ಯು​ತ್ತಿ​ರುವ ಈ ಧಾ​ರ್ಮಿಕ ಕಾ​ರ್ಯ​ಕ್ರ​ಮ​ದ​ಲ್ಲಿ ಬೆ​ಳಗ್ಗೆ 6ಕ್ಕೆ ಪ​ವ​ಮಾ​ನ​ಹೋಮ, ಕೂ​ಷ್ಮಾಂಡ​ ಹೋಮ ಅ​ದ್ಧೂ​ರಿ​ಯಾಗಿ ನ​ಡೆ​ಯಿ​ತು. ಸಂಜೆ 5ಕ್ಕೆ ಸು​ದ​ರ್ಶನ ಹೋಮ, ವಿ​ಷ್ಣು​ಸ​ಹ​ಸ್ರ​ನಾಮ ಪಾ​ರಾ​ಯಣ, ಪಂಜಿನ ಬೆ​ಳ​ಕಿ​ನಲ್ಲಿ ವಿ​ಷ್ಣು​ ಪೂಜೆ, ಮಂಡ​ಲ​ಪೂಜೆ ಮತ್ತು ಪ್ರ​ವ​ಚನ ಕಾರ್ಯಕ್ರಮ ನಡೆಯಿತು.

ಹು​ಬ್ಬ​ಳ್ಳಿ: ನ​ಗ​ರದ ದಾಜಿಬಾನಪೇಟದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಸಹಸ್ರ ಚಂಡಿಕಾಯಾಗದ ಐ​ದ​ನೇ ದಿನ ಬು​ಧವಾರ ವಿ​ವಿಧ ಧಾ​ರ್ಮಿಕ ಕಾ​ರ್ಯ​ಕ್ರ​ಮ​ಗಳು ವಿ​ಜೃಂಭ​ಣೆ​ಯಿಂದ ನಡೆ​ದ​ವು.

ಎಸ್‌ಎಸ್‌ಕೆ ಪಂಚ ಟ್ರಸ್ಟ್‌ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ನ​ಡೆ​ಯು​ತ್ತಿ​ರುವ ಈ ಧಾ​ರ್ಮಿಕ ಕಾ​ರ್ಯ​ಕ್ರ​ಮ​ದ​ಲ್ಲಿ ಬೆ​ಳಗ್ಗೆ 6ಕ್ಕೆ ಪ​ವ​ಮಾ​ನ​ಹೋಮ, ಕೂ​ಷ್ಮಾಂಡ​ ಹೋಮ ಅ​ದ್ಧೂ​ರಿ​ಯಾಗಿ ನ​ಡೆ​ಯಿ​ತು. ಸಂಜೆ 5ಕ್ಕೆ ಸು​ದ​ರ್ಶನ ಹೋಮ, ವಿ​ಷ್ಣು​ಸ​ಹ​ಸ್ರ​ನಾಮ ಪಾ​ರಾ​ಯಣ, ಪಂಜಿನ ಬೆ​ಳ​ಕಿ​ನಲ್ಲಿ ವಿ​ಷ್ಣು​ ಪೂಜೆ, ಮಂಡ​ಲ​ಪೂಜೆ ಮತ್ತು ಪ್ರ​ವ​ಚನ ಕಾರ್ಯಕ್ರಮ ನಡೆಯಿತು.

ಸಹಸ್ರ ಚಂಡಿಕಾಯಾಗದ ಪೂಜಾ ಕಾರ್ಯಗಳ ನೇತೃತ್ವ ವಹಿಸಿರುವ ಬೆಂಗಳೂರಿನ ವೇದಬ್ರಹ್ಮ ಶ್ರೀ ಚಂದ್ರೇಶ ಶರ್ಮಾ, ಹುಬ್ಬಳ್ಳಿಯ ವೇದಬ್ರಹ್ಮ ಶ್ರೀ ರವೀಂದ್ರಾಚಾರ್ಯ ಅವರನ್ನೊಳಗೊಂಡ 100 ಪುರೋಹಿತರಿಂದ 1 ಸಾವಿರ ಸಂಖ್ಯೆ ಶ್ರೀ ದುರ್ಗಾಸಪ್ತಶತೀ ಪಾರಾಯಣದ ಸಂಖ್ಯಾ ಪರಿಪೂರ್ತಿಗಾಗಿ ಪಾರಾಯಣವು 3ನೇ ದಿ​ನ​ವು ಮುಂದುವರಿಯಿತು.

ಶ್ರೀ​ದೇ​ವಿಗೆ ನಿತ್ಯ ಬೆ​ಳಗ್ಗೆ ಪಂಚಾ​ಮೃತ ಅ​ಭಿ​ಷೇಕ, ಮ​ಹಾ​ಭಿ​ಷೇಕ, ವಿ​ಶೇಷ ಅ​ಲಂಕಾರ, ವಿ​ಶೇಷ ನೈ​ವೇದ್ಯ, ಮ​ಹಾ​ಮಂಗ​ಳಾ​ರತಿ, ದೇ​ವಿಯ ಸಾ​ನ್ನಿಧ್ಯ ವೃ​ದ್ಧಿಗೆ ಕಲಾ ಹೋ​ಮಾ​ದಿ​ಗಳು ನ​ಡೆ​ದವು. ಸಂಪೂರ್ಣ ಚ​ತು​ರ್ವೇದ ಪಾ​ರಾ​ಯಣ, ಮಾ​ರ್ಕಂಡೇಯ ಪು​ರಾಣ ಪಾ​ರಾ​ಯ​ಣ ನ​ಡೆ​ಯಿತು. ನಂತರ 250 ದಂಪ​ತಿ​ಗ​ಳಿಂದ ಸಂಕಲ್ಪ ಪೂಜೆ ನ​ಡೆ​ಯಿತು. ಸಾ​ವಿ​ರಾರು ಜನ ಭ​ಕ್ತರು ಭಾ​ಗ​ವ​ಹಿ​ಸಿದ್ದು ವಿ​ಶೇ​ಷ​ವಾ​ಗಿ​ತ್ತು.

ಸ​ಮಾ​ರಂಭ​ದಲ್ಲಿ ಎಸ್‌ಎಸ್‌ಕೆ ಪಂಚ ಟ್ರಸ್ಟ್‌ ಕಮೀಟಿ ಗೌರವ ಕಾರ್ಯದರ್ಶಿ ಭಾಸ್ಕರ ಎನ್‌. ಜಿತೂರಿ, ಜಾಯಿಂಟ್‌ ಚೀಫ್‌ ಟ್ರಸ್ಟಿ ನೀಲಕಂಠ ಜಡಿ, ಚೀಫ್‌ ಟ್ರಸ್ಟಿ ತಾರಾಸಾ ದೋಂಗಡಿ, ಕೋಶಾಧಿಕಾರಿ ಅಶೋಕ ಕೆ. ಕಲಬುರ್ಗಿ, ಟ್ರಸ್ಟಿಗಳಾದ ನಾಗೇಂದ್ರ ಹಬೀಬ, ಅಶೋಕ ಪವಾರ ಹಾಗೂ ಪಂಚಾಯಿತಿ ಘಟಕದ ಹಿರಿಯರು, ಯುವಕರು, ಮಹಿಳಾ ಮಂಡಳ ಸದಸ್ಯರು ಭಾ​ಗ​ವ​ಹಿ​ಸಿ​ದ್ದ​ರು.

ಇಂದಿನ ಕಾರ್ಯಕ್ರಮ: ಮೇ 8ರಂದು ಬೆ​ಳಗ್ಗೆ 6ಕ್ಕೆ ಶ್ರೀ​ರು​ದ್ರ​ಪಾ​ರಾ​ಯಣ, ಶ್ರೀ​ರುದ್ರ ಏ​ಕಾ​ದಶಿ ಹೋಮ ಸಂಜೆ 5ಕ್ಕೆ ಶ್ರೀ ದು​ರ್ಗಾ​ದೇವಿ ದೇ​ವ​ಸ್ಥಾ​ನದ ಹಿಂದಿನ ಶಾ​ಲೆಯ ಆ​ವ​ರ​ಣ​ದಲ್ಲಿ ಶ್ರೀ ಸ​ಹ​ಸ್ರ​ಚಂಡಿಕಾ ಯಾ​ಗದ ಕ​ಲಶ ಸ್ಥಾ​ಪನೆ, ಮಂಡ​ಲಾ​ರಾ​ಧನೆ, ಅ​ಷ್ಟಾ​ವ​ಧಾನ ಸೇವೆ, ಹೋಮ ತ​ಯಾರಿ ನ​ಡೆ​ಯ​ಲಿದೆ. ಸಂಜೆ 6ರಿಂದ ರಾತ್ರಿ 8ರ​ ವ​ರೆಗೆ ಪಂಜಿನ ಬೆ​ಳ​ಕಿ​ನಲ್ಲಿ ಉ​ಯ್ಯಾ​ಲೆ​ಯ​ಲ್ಲಿ​ರುವ ಅ​ಮ್ಮ​ನ​ವರ ಪೂಜೆ, ಮಂಡ​ಲ​ಪೂಜೆ ಮತ್ತು ಗು​ರು​ವೃಂದ​ದ​ವ​ರಿಂದ ವಿ​ಶೇಷ ಪ್ರ​ವ​ಚನ ನ​ಡೆ​ಯ​ಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌