ಕನ್ನಡಪ್ರಭ ವಾರ್ತೆ ಶಹಾಪುರ
ಶಹಾಪುರದಲ್ಲಿ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ, ಭಾನುವಾರ ಸಮೀಪದ ಭೀಮರಾಯನಗುಡಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕನ್ನಡಪರ ಹಾಗೂ ಸರಕಾರಿ ಮತ್ತು ಸರಕಾರೇತರ ಸಂಘ-ಸಂಸ್ಥೆಗಳ ಸಭೆಯಲ್ಲಿ ಅವರು ಮಾತನಾಡಿದರು.
ಉಪನ್ಯಾಸಕ ಅಂಬ್ಲಯ್ಯ ಸೈದಾಪುರ ಮಾತನಾಡಿ, ಸಮ್ಮೇಳನದಲ್ಲಿ ಕನ್ನಡದ ವರ್ತಮಾನದ ಬಿಕ್ಕಟ್ಟುಗಳು ಎಂಬ ಗೋಷ್ಠಿ ಏರ್ಪಡಿಸಬೇಕು ಎಂದರು. ಡಾ. ಗೋವಿಂದರಾಜ ಆಲ್ದಾಳ ಮಾತನಾಡಿ, ಸಮ್ಮೇಳನದ ಮೆರವಣಿಗೆಯಲ್ಲಿ ಶಹಾಪುರ ತಾಲೂಕಿನ ಜಾನಪದ ಕಲೆಗಳು ಅನಾವರಣಗೊಳ್ಳಬೇಕು ಎಂದು ಸಲಹೆ ನೀಡಿದರು.ದಲಿತಪರ ಸಂಘಟಕ ನಾಗಣ್ಣ ಬಡಿಗೇರ, ಶ್ರೀಶೈಲ ಬಿರಾದಾರ್, ಬಿ.ಆರ್.ಸಿ. ಅಧಿಕಾರಿ ಮಷಾಕ್ ಇನಾಂದಾರ, ಬಸವರಾಜ ಹಿರೇಮಠ, ಭೀಮಣ್ಣಗೌಡ ಎನ್. ಪಾಟೀಲ್ ಮುಂತಾದವರು ಸಮ್ಮೇಳನದ ಸ್ವರೂಪದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಶಾಂತರಡ್ಡಿ, ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಗುರುಲಿಂಗಪ್ಪ ಸಾಗರ, ಭೀಮರಾಯನಗುಡಿ ವಲಯ ಕಸಾಪ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ್, ಸಗರ ವಲಯ ಕಸಾಪ ಅಧ್ಯಕ್ಷ ಡಾ. ದೇವಿಂದ್ರಪ್ಪ ಹಡಪದ, ತಾಲೂಕು ಕಸಾಪ ಕೋಶಾಧ್ಯಕ್ಷ ಶಂಕರ ಹುಲ್ಕಲ್, ಗೌರವ ಕಾರ್ಯದರ್ಶಿಗಳಾದ ಸುರೇಶಬಾಬು ಅರುಣಿ, ರಾಘವೇಂದ್ರ ಹಾರಣಗೇರಾ, ಮಾಳಪ್ಪ ಪೂಜಾರಿ, ಮರೆಪ್ಪ ಇನಾಂದಾರ, ಸುಭಾಷ್ ಹೋತಪೇಟ, ಮಲ್ಲಿನಾಥ ಬಡಿಗೇರ, ಹೊನ್ನಪ್ಪ ಗಂಗನಾಳ, ರಾಮಚಂದ್ರಪ್ಪ ಸಗರ, ಕಾಶಿಂಸಾಬ ನಡಿಗೇರಿ ಇತರರಿದ್ದರು.