ನಂಬಿದ ಭಕ್ತರಿಗೆ ಸಾಯಿಬಾಬಾನೇ ಅಭಯ ಹಸ್ತ

KannadaprabhaNewsNetwork |  
Published : Jul 18, 2024, 01:40 AM IST
ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಸಕಲರ ಒಳಿತಿಗಾಗಿ ಸಾಯಿಬಾಬಾ ಅಂದು ಶಿರಡಿಯಲ್ಲಿ ಹೊತ್ತಿಸಿದ ಧುನಿ ಇಂದಿಗೂ ಪ್ರಜ್ವಲಿಸುತ್ತಿದೆ

ಗದಗ: ನಂಬಿದ ಭಕ್ತರನ್ನು ಕೈ ಬಿಡದ ಸಾಯಿಬಾಬಾ ಸಕಲ ಜೀವಿಗಳಲ್ಲೂ ನಾನಿದ್ದೇನೆ ಎಂದು ಹೇಳುವ ಮೂಲಕ ಮಾನವ ಸಂಕುಲ ಸೇರಿದಂತೆ ಸಕಲ ಜೀವಿಗಳನ್ನು ಸಂರಕ್ಷಿಸಿದವರು ಎಂದು ಡಾ. ಎಸ್.ಬಿ.ಶೆಟ್ಟರ ಹೇಳಿದರು.

ಅವರು ಮಂಗಳವಾರ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ಜು. 20ರವರೆಗೆ ನಡೆಯಲಿರುವ ಸಾಯಿ ಸಚ್ಛರಿತ್ರೆ ಪ್ರವಚನ ಮಾಲಿಕೆ 5 ರಲ್ಲಿ ಮಾತನಾಡಿದರು.

ಸಕಲರ ಒಳಿತಿಗಾಗಿ ಸಾಯಿಬಾಬಾ ಅಂದು ಶಿರಡಿಯಲ್ಲಿ ಹೊತ್ತಿಸಿದ ಧುನಿ ಇಂದಿಗೂ ಪ್ರಜ್ವಲಿಸುತ್ತಿದೆ. ಜ್ಞಾನ, ಆಶೀರ್ವಾದದ ಪ್ರತೀಕವಾಗಿ ನೆಲೆ ನಿಂತಿರುವ ಧುನಿಯನ್ನು ಇಂದಿನವರೆಗೂ ಸಂರಕ್ಷಿಸಿಕೊಂಡು ಬರಲಾಗಿದೆ ಅದರೆ ಮಾದರಿಯ ಧುನಿಯನ್ನು ಗದುಗಿನ ಸಾಯಿಬಾಬಾ ಮಂದಿರದ ಬಳಿ ನಿರ್ಮಾಣಕ್ಕೆ ಸಂಕಲ್ಪಿಸಲಾಗಿದ್ದು ಈಗಾಗಲೇ ಭೂಮಿಪೂಜೆ ಆಗಿದೆ ಎಂದರು.

ದೇಣಿಗೆ ನೀಡಿದ ಡಾ. ಟಿ.ಎನ್. ಗೋಡಿ, ಪ್ರವಚನದ ಪ್ರಸಾದ ಸೇವೆ ವಹಿಸಿಕೊಂಡಿದ್ದ ಡಾ. ಸೌಭಾಗ್ಯಲಕ್ಷ್ಮೀ ಸುನೀಲಗೌಡ ಪೊಲೀಸ್‌ಪಾಟೀಲ, ಶರಣಪ್ಪಗೌಡ್ರ ಗುರುಬಸಪ್ಪ ಯಾದವಾಡ, ಗೋಪಾಲಕೃಷ್ಣ ಟಿ. ಹೇಮಾದ್ರಿ, ಎಸ್.ಬಿ. ಕಣವಿ ಪರಿವಾರವನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಮಹೇಶ ತಲೇಗೌಡ್ರ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಚಿಂಚಲಿ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ