ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಚೆಕ್ ಪೋಸ್ಟ್ ಬಳಿಯ ಶ್ರೀಸಾಯಿ ಮಂದಿರ ಆಶ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಹಾಗೂ ಆಶ್ರಮದ ಮುಖ್ಯಸ್ಥ ಸಾಯಿಕುಮಾರ್ ಅವರು, ಸಾಯಿಬಾಬಾ ಅವರ ಹುಟ್ಟುಹಬ್ಬದ ಅಂಗವಾಗಿ 99 ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಜೊತೆಗೆ ಶಾಲಾ ಶುಲ್ಕ 1 ಲಕ್ಷದ 99 ಸಾವಿರ ರು. ಪಾವತಿದರು.
ಸರ್ಕಾರಿ ಶಾಲೆ 200, ಬಿಜಿಎಸ್ ಶಾಲೆ 99 ಹಾಗೂ ಪೂರ್ಣಯ್ಯ ಬೀದಿಯಲ್ಲಿನ 98 ಶಾಲೆಯ 1 ರಿಂದ 10ನೇ ತರಗತಿಯ ಒಟ್ಟು 397 ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ಪುಸ್ತಕ, ಜ್ಯಾಮಿಟ್ರಿ ಬಾಕ್ಸ್ ಸೇರಿದಂತೆ ಇನ್ನಿತರೆ ಶಾಲಾ ಸಲಕರಣೆ ನೀಡಿದರು.ಪ್ರತೀ ವರ್ಷದಂತೆ ಈ ಬಾರಿಯೂ ಸಹ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳಲಾಗಿದೆ. ಮುಂದಿನ ವರ್ಷ ಮತ್ತಷ್ಟು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ಸಾಯಿಕುಮಾರ್ ತಿಳಿಸಿದರು.
ಈ ವೇಳೆ ವೇದ ಬ್ರಹ್ಮ ಡಾ.ಭಾನುಪ್ರಕಾಶ್ಶರ್ಮಾ, ಪುರಸಭೆ ಸದಸ್ಯ ಎಸ್.ಪ್ರಕಾಶ್, ಶೀಲಾ ನಂಜುಂಡಯ್ಯ, ಡಾ. ಸಾಯಿವೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.