ಅವಧಿ ಮುಗಿದ ಆಹಾರ ಮಾರಾಟ: ತರಾಟೆ

KannadaprabhaNewsNetwork |  
Published : Dec 13, 2024, 12:50 AM IST
12ಕೆಪಿಎಲ್‌ಎನ್‌ಜಿ05  | Kannada Prabha

ಸಾರಾಂಶ

Sale of Expired Food: Tarate

-ರಿಲಯನ್ಸ್ ಬಹುರಾಷ್ಟ್ರೀಯ ಕಂಪನಿಯ ಸ್ಮಾರ್ಟ್‌ ಬಜಾರ ಮಳಿಗೆಯಲ್ಲಿ ಅವಧಿ ಮೀರಿದ ಆಹಾರ ಮಾರಾಟ

-ಮಳಿಗೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡ ಗ್ರಾಹಕರು । ಕಠಿಣ ಕ್ರಮಕ್ಕೆ ಆಗ್ರಹ

-----

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಗ್ರಾಹಕರಿಗೆ ಜೀವನಾಶ್ಯಕ ವಸ್ತುಗಳನ್ನು ಮಾರಾಟ ಮಾಡಲು ಲಿಂಗಸುಗೂರು ಪಟ್ಟಣದಲ್ಲಿ ತೆಲೆ ಎತ್ತಿರುವ ರಿಲಯನ್ಸ್ ಬಹುರಾಷ್ಟ್ರೀಯ ಕಂಪನಿಯ ಸ್ಮಾರ್ಟ ಬಜಾರ ಮಳಿಗೆಯಲ್ಲಿ ಗ್ರಾಹಕರಿಗೆ ವಿಷಪೂರಿತ, ಅವಧಿ ಮುಗಿದ ಆಹಾರ ಪದಾರ್ಥಗಳ ಮಾರಾಟ ಕಂಡು ಗ್ರಾಹಕರು ಬೆಚ್ಚಿ ಬಿದ್ದ ಘಟನೆ ಗುರುವಾರ ನಡೆದಿದೆ.

ಕಲಬುರಗಿ ಮುಖ್ಯ ರಸ್ತೆಯಲ್ಲಿ ಕೆಲವೇ ದಿನಗಳ ಹಿಂದೆ ರಿಲಯನ್ಸ್ ಕಂಪನಿಯ ಸ್ಮಾರ್ಟ್‌ ಬಜಾರ ಹೆಸರಲ್ಲಿ ಬೃಹತ್ ಮಾರಾಟ ಮಳಿಗೆ ಆರಂಭಿಸಲಾಗಿದೆ. ಮಳಿಗೆಯೊಳಗೆ ಕಾಲಿಟ್ಟ ಕೂಡಲೇ ಗ್ರಾಹಕರನ್ನು ಸೆಳೆಯಲು ವಸ್ತುಗಳ ಆಕರ್ಷಕ ಜೋಡಣೆ ಕಾಣಬಹುದಾಗಿದೆ. ಆರಂಭದ ದಿನ ಅನೇಕ ವಸ್ತುಗಳನ್ನು ರಿಯಾಯತಿ ದರದಲ್ಲಿ, ಒಂದು ಖರೀದಿಸಿದರೆ ಮತ್ತೊಂದು ಉಚಿತ ಕೊಡುಗೆ ಇದ್ದುದ್ದರಿಂದ ವಹಿವಾಟು ಜೋರಾಗಿ ನಡೆಯಿತು.

ಗುರುವಾರ ಪಟ್ಟಣದ ನ್ಯಾಯವಾದಿಯೊಬ್ಬರು ಸ್ಮಾರ್ಟ್‌ ಬಜಾರ್ ಗೆ ಹೋಗಿ ಪನೀರ್‌ ಪಾಕೀಟ್ ಖರೀದಿಸಿದ್ದಾರೆ. ಅದು ದುರ್ವಾಸನೆ ಮೂಗಿಗೆ ರಾಚಿದೆ ಇದರಿಂದ ಗಾಬರಿಗೊಂಡ ಗ್ರಾಹಕ ಖರೀದಿಸಿ ಪಾಕೀಟ್ ಬಿಚ್ಚಿ ನೋಡಿದಾಗ ಅದರಲ್ಲಿ ಪನೀರ್‌ ತಯಾರಿಸುವ ಪೌಡರ್ ಗಟ್ಟಿಯಾಗಿ, ಅದರಿಂದ ದುರ್ವಾಸನೆ ಬಂದಿದೆ. ಸಿದ್ಧಪಡಿಸಿದ ಚಪಾತಿ ತಿಂದು ನೋಡಿದಾಗ, ಅದು ಕೂಡಾ ವಿಷವಾಗಿದೆ. ಇದರಿಂದ ಬೆಚ್ಚಿಬಿದ್ದ ಗ್ರಾಹಕರು ಮಳಿಗೆ ವ್ಯವಸ್ಥಾಪಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವಿಷಾಹಾರ ಮಾರಾಟ ಮಾಡಿದ ಮಳಿಗೆಯ ನಿರ್ವಾಹಕರನ್ನು ಗ್ರಾಹಕರು ತರಾಟಗೆ ತೆಗೆದುಕೊಂಡಾಗ ಮಳಿಗೆ ವ್ಯವಸ್ಥಾಪಕ ಕೈ ಮುಗಿದು ತಪ್ಪಾಗಿದೆ ಎಂದು ಅಂಗಲಾಚಿ, ಇದೊಂದು ಸಲ ಕ್ಷಮಿಸಿ, ಮಳಿಗೆಯ ಎಲ್ಲ ಸಿಬ್ಬಂದಿ ಪರವಾಗಿ ಕ್ಷಮೆ ಕೇಳುವೆ ಎಂದರು.

ಮಳಿಗೆ ವ್ಯವಸ್ಥಾಪಕರು ಗ್ರಾಹಕರಿಗೆ ಸಮಜಾಯಿಸಿ ನೀಡಲು ಮುಂದಾದಾಗ ಮಳಿಗೆ ನಿರ್ವಾಹಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಗ್ರಾಹಕರು ಬೃಹತ್ ಮಳಿಗೆ ನಿರ್ಮಿಸಿ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದೀರಿ. ದೊಡ್ಡ ಮಳಿಗೆಯಲ್ಲಿ ನಿಗದಿತ ಅವಧಿ ಮುಗಿದ ಆಹಾರ ಪದಾರ್ಥಗಳು ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಮಾರ್ಟ್ ಬಜಾರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ದೊಡ್ಡ ಮಳಿಗೆ ಗುಣಮಟ್ಟದ ಆಹಾರ ಪದಾರ್ಥ, ಇತರೇ ಸಾಮಾಗ್ರಿಗಳು ಮಾರಾಟ ಮಾಡುತ್ತಾರೆ ಎಂದು ತಿಳಿದು ಸ್ಮಾರ್ಟ್ ಬಜಾರ್‌ಗೆ ತೆರಳಿದ್ದೆ. ಆದರೆ ಅದರಲ್ಲಿ ಪದಾರ್ಥಗಳು ಖರೀದಿಸಿ ಅಲ್ಲಿಯೇ ತೆರೆದು ನೋಡಿದಾಗ ದುರ್ವಾಸನೆ ಹಾಗೂ ನಿಗದಿತ ಅವಧಿ ಮುಗಿದ ಪದಾರ್ಥಗಳ ಮಾರಾಟ ಕಂಡು ಬಂದಿತು. ಇದರಿಂದ ನಮ್ಮ ಜೊತೆಗೆ ಬಂದಿದ್ದ ಗ್ರಾಹಕರು. ಮಳಿಗೆಯಲ್ಲಿನ ವಿಷಾಹಾರ ಮಾರಾಟದ ಕುರಿತು ತೀವ್ರ ತರಾಟಗೆ ತೆಗೆದುಕೊಂಡರು. ಮಳಿಗೆ ಮಾಲೀಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಲಿಂಗಸುಗೂರಿನ ಹೆಸರು ಹೇಳಲು ಇಚ್ಚಸದ ಗ್ರಾಹಕ ತಿಳಿಸಿದರು.

------------

....ಕೋಟ್.....

ಗ್ರಾಹಕರು ಮೊಬೈಲ್ ಕರೆ ಮಾಡಿ ವಿಷ ಆಹಾರ, ಅವಧಿ ಮೀರಿದ ವಸ್ತುಗಳನ್ನು ಮಾರಾಟ ಮಾಡಿದ ಬಗ್ಗೆ ತಿಳಿದು ಬಂದಿದೆ. ಅದರಂತೆ ಸ್ಮಾರ್ಟ್ ಬಜಾರ ಮಳಿಗೆಗೆ ಭೇಟಿ ನೀಡಿದಾಗ, ಅವಧಿ ಮೀರಿದ ವಸ್ತುಗಳ ಮಾರಾಟ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಕಂಡು ಬಂದರೆ ಅವರ ವಿರುದ್ಧ ಕ್ರಮ ವಹಿಸಿ ಮಳಿಗೆಗೆ ಬೀಗ ಜಡಿಯಲಾಗುವುದು. ಮಾರಾಟ ಮಳಿಗೆಯವರು ಸೂಕ್ತ ಎಚ್ಚರಿಕೆ ವಹಿಸಬೇಕು.

-ಸುಜಾತ, ಆಹಾರ ಆರೋಗ್ಯ ನಿರೀಕ್ಷಕರು, ಪುರಸಭೆ ಲಿಂಗಸುಗೂರು.

-----------------

12ಕೆಪಿಎಲ್‌ಎನ್‌ಜಿ05 : ಲಿಂಗಸುಗೂರ ಸ್ಮಾರ್ಟ್ ಬಜಾರನಲ್ಲಿ ವಿಷಪೂರಿತ ಪನೀರ ಪಾಕೀಟ್ ಮಾರಾಟ ಮಾಡಿರುವುದು.

12ಕೆಪಿಎಲ್‌ಎನ್‌ಜಿ06 : ಲಿಂಗಸುಗೂರು ಸ್ಮಾರ್ಟ್ ಬಜಾರನಲ್ಲಿ ಅವಧಿ ಮೀರಿದ ವಸ್ತುಗಳ ಮಾರಾಟ ಮಾಡಲಾಗಿದೆ ಎಂದು ಮಳಿಗೆಯವನರನು ತರಾಟೆಗೆ ತೆಗೆದುಕೊಂಡಿರುವ ಗ್ರಾಹಕರು.

--------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ