ಉಜ್ವಲ ಭಾರತವನ್ನು ರಕ್ಷಿಸಿ ರೂಪಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ

KannadaprabhaNewsNetwork |  
Published : Aug 16, 2024, 12:49 AM IST
106 | Kannada Prabha

ಸಾರಾಂಶ

ನಮ್ಮ ದೇಶ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ, ದಕ್ಷಿಣ ಏಷ್ಯಾದ ಪ್ರಮುಖ ರಾಷ್ಟ್ರವಾಗಿ ನಾವು ಮುಂಚೂಣಿಯಲ್ಲಿದ್ದೇವೆ.

ಕನ್ನಡಪ್ರಭ ವಾರ್ತೆ ಮೈಸೂರುನಮ್ಮ ದೇಶ, ನಮ್ಮ ನೆಲದ ಬಗ್ಗೆ ಜಾಗೃತಿ ಮೂಡಿಸಬೇಕು. ಎಲ್ಲಾ ಸಮಸ್ಯೆಗಳನ್ನೂ ಮೆಟ್ಟಿ ನಿಂತು ಉಜ್ವಲ ಭಾರತವನ್ನು ರಕ್ಷಿಸಿ ರೂಪಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಆಗಿದೆ ಎಂದು ಮೈಸೂರು ಕಿವುಡರ ಸಂಘದ ಅಧ್ಯಕ್ಷ ಎಸ್. ಮೂರ್ತಿ ತಿಳಿಸಿದರು.ವಿಜಯನಗರ 2ನೇ ಹಂತದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ, ದಕ್ಷಿಣ ಏಷ್ಯಾದ ಪ್ರಮುಖ ರಾಷ್ಟ್ರವಾಗಿ ನಾವು ಮುಂಚೂಣಿಯಲ್ಲಿದ್ದೇವೆ. ಆದರೂ ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳು ತಾಂಡವ ಆಡುತ್ತಿದ್ದೆ. ಮುಖ್ಯವಾಗಿ ಉದ್ಯೋಗದ ಸಮಸ್ಯೆ, ಜಾತಿ ಆಧಾರದ ಮೇಲೆ ಬೇಧ ಭಾವ, ಸ್ತ್ರೀ ಅಸಮಾನತೆ ಇತರೆ ಸಮಸ್ಯೆ ಎದುರಿಸುತ್ತಿದ್ದೇವೆ. ಇವುಗಳ ಎಲ್ಲದರ ಪರಿಹಾರ ನಮ್ಮಿಂದಲೇ ಆಗಬೇಕು ಎಂದರು.ಯುವ ರಂಗಕರ್ಮಿ ಪ್ರಜ್ವಲ್ ಮೈಸೂರು, ಲಯನ್ಸ್ ಕ್ಲಬ್ ಶ್ರೀನಿವಾಸ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು, ಶಾಲೆಯ ಮುಖ್ಯೋಪಧಾಯರಾದ ಭ್ರಮಾರಂಬ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಶ್ರೀಧರ್, ವಿಶೇಷ ಶಿಕ್ಷಕರಾದ ಪಿ. ಪದ್ಮಾ, ವಿದ್ಯಾವತಿ, ಬೃಂದಾ ಬಾಯಿ, ಕೋಟ್ರೇಶಪ್ಪ, ಸ್ಪರ್ಶಾ, ಮಂಜುಳಾ, ಶಿವಮ್ಮ, ಶರಿಫ, ಮಹೇಶ ಹೊಸಮನೆ ಮೊದಲಾದಲರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ