ಸಂಸ್ಕೃತ ವಿಶ್ವ ಭಾಷೆಯಾಗಬೇಕು

KannadaprabhaNewsNetwork |  
Published : Dec 20, 2023, 01:15 AM IST
 19ಜಿಎಲ್‌ ಡಿ 1- ಗುಳೇದಗುಡ್ಡದಲ್ಲಿ  ಸೋಮವಾರ  8 ದಿನಗಳ ಸಂಸ್ಕೃತ ಸಂಭಾಷಣಾ  ಶಿಬಿರ ಉದ್ಘಾಟಿಸಿ ಶ್ರೀ ಗುರು ಬಸವ ದೇವರು ಮಾತನಾಡಿದರು.  | Kannada Prabha

ಸಾರಾಂಶ

ಗುಳೇದಗುಡ್ಡದಲ್ಲಿ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬ್ರಹ್ಮಠದಲ್ಲಿ ಶ್ರೀ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 38ನೇ ವಾರ್ಷಿಕ ಪುಣ್ಯಾರಾಧನೆ ಶರಣ ಸಂಗಮ ಸಮಾರಂಭದಲ್ಲಿ ಶಾರದಾ ಸಂಸ್ಕೃತ ಪಾಠಶಾಲೆ ಕೋಟೆಕಲ್ ಹಾಗೂ ಶ್ರೀ ಗುರುಸಿದ್ದೇಶ್ವರ ಸಂಸ್ಕೃತ ಪಾಠಶಾಲೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ 8 ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರ ಉದ್ಘಾಟಿಸಿ ಶ್ರೀ ಗುರುಬಸವ ದೇವರು ಮಾತನಾಡಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಸಂಸ್ಕೃತ ಅತ್ಯಂತ ಪುರಾತನ ಭಾಷೆ. ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಾಚೀನ ಭಾಷೆ ಸಂಸ್ಕೃತ. ಹೀಗಾಗಿ ಎಲ್ಲ ಭಾಷೆಗಳಿಗೆ ಸಂಸ್ಕೃತ ತಾಯಿ ಇದ್ದಂತೆ ಎಂದು ಗುರುಸಿದ್ದೇಶ್ವರ ಮಠದ ಶ್ರೀ ಗುರುಬಸವ ದೇವರು ಹೇಳಿದರು.

ಅವರು ಸೋಮವಾರ ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬ್ರಹ್ಮಠದಲ್ಲಿ ಶ್ರೀ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳ 38ನೇ ವಾರ್ಷಿಕ ಪುಣ್ಯಾರಾಧನೆ ಶರಣ ಸಂಗಮ ಸಮಾರಂಭದಲ್ಲಿ ಶಾರದಾ ಸಂಸ್ಕೃತ ಪಾಠಶಾಲೆ ಕೋಟೆಕಲ್ ಹಾಗೂ ಶ್ರೀ ಗುರುಸಿದ್ದೇಶ್ವರ ಸಂಸ್ಕೃತ ಪಾಠಶಾಲೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ 8 ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಎಲ್ಲ ಭಾಷೆಗಳಲ್ಲಿ ಸಂಸ್ಕೃತ ಭಾಷೆಯ ಪದಗಳಿರುವುದು ಕಾಣುತ್ತೇವೆ. ಎಲ್ಲ ಭಾಷೆಗಳು ಸಂಸ್ಕೃತದ ಆಧಾರದ ಮೇಲೆಯೇ ಜನ್ಮ ತಾಳಿವೆ. ಹೀಗಾಗಿ ಸಂಸ್ಕೃತ ಭಾಷೆ ಕಲಿಕೆಯುವುದರಿಂದ ಶಬ್ದ ಉಚ್ಚಾರ ಶುದ್ಧವಾಗುತ್ತದೆ. ಪ್ರತಿಯೊಬ್ಬರು ಸಂಸ್ಕೃತ ಕಲಿಯುವ ಮೂಲಕ ಈ ಭಾಷೆ ಉಳಿಸಿ, ಬೆಳೆಸಬೇಕಿದೆ. ಸಂಸ್ಕೃತ ವಿಶ್ವಭಾಷೆಯಾಗಬೇಕಿದೆ ಎಂದು ಹೇಳಿದರು.

ಶ್ರೀ ಶಾರದಾ ಸಂಸ್ಕೃತ ಪಾಠಶಾಲೆಯ ನಿವೃತ್ತ ಮುಖ್ಯ ಗುರುಮಾತೆ ನಾಗವೇಣಿ ಬಂಕಾಪುರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸುನಂದಾ ರಾಸನಕರ, ಮುಖ್ಯ ಶಿಕ್ಷಕ ಬಸವರಾಜ ಯಂಡಿಗೇರಿ, ಗೀತಾ ಬಂಕಾಪೂರ, ಎಂ.ಎಸ್.ತಾಂಡೂರ, ರುದ್ರಪ್ಪ ಲಮಾಣಿ ಸೇರಿದಂತೆ ಅನೇಕರು ಇದ್ದರು . ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!