ಕನ್ನಡಪ್ರಭ ವಾರ್ತೆ ಅರಸೀಕೆರೆ
ಈ ಸಂದರ್ಭದಲ್ಲಿ ಎನ್. ಆರ್. ಸಂತೋಷ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಸಲಾಗಿದೆ. ಅಷ್ಟೊಂದು ದುಡ್ಡು ಎಲ್ಲಿಂದ ಬಂತು ಎನ್ನುವ ಕುರಿತು ತನಿಖೆ ಮಾಡಬೇಕು. ರೈತರ ಜಮೀನು ಕಬಳಿಸಲು ಹೊರಟಿರುವ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರನ್ನು ವಜಾಗೊಳಿಸಿ, ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ. ಮೂರು ಗ್ರಾಮಗಳ ರೈತರ ಭೂಮಿ ವಶಕ್ಕೆ ಪಡೆಯುವುದಿಲ್ಲ ಎಂದು ಡಿಸಿ ಘೋಷಣೆ ಮಾಡಬೇಕು. ಅಲ್ಲಿಯವರೆಗೆ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಗುಡುಗಿದರು.
ಲೋಕಸಭಾ ಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವುದನ್ನು ಶಾಸಕರೇ ಒಪ್ಪಿಕೊಂಡ ಆಡಿಯೋ ಎಲ್ಲೆಡೆ ಹರಿದಾಡಿದ್ದು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ದೂರು ಕೇಳಿಬಂದ ಕೂಡಲೇ ಶಾಸಕ ಮುನಿರತ್ನ ಅವರನ್ನು ಬಂಧಿಸಿದೆ. ಆದರೆ ಕೋಟಿ ಕೋಟಿ ಹಣದ ವರ್ಗಾವಣೆ ನಡೆದಿದ್ದು ಇಡಿ. ಚುನಾವಣಾ ಆಯೋಗ, ಸುಮ್ಮನಿರುವುದು ಸರಿಯಲ್ಲ. ತಕ್ಷಣವೇ ಪ್ರಕರಣ ದಾಖಲಿಸಿ ಸಂಸದ, ಶಾಸಕರನ್ನು ವಜಾ ಮಾಡಿ ಎಂದು ಸಂತೋಷ್ ಆಗ್ರಹಿಸಿದರು.ನಾವು ನಡೆಸುತ್ತಿರುವ ರೈತರ ನ್ಯಾಯಯುತ ಹೋರಾಟದಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಸೇರಿದಂತೆ ಎಚ್. ಡಿ.ರೇವಣ್ಣ, ಜೆಡಿಎಸ್ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂಬುದನ್ನು ಅಧಿಕಾರಿಗಳು ನೆನಪಿನಲ್ಲಿ ಇರಿಸಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಸರ್ಕಾರ ಬರುತ್ತದೆ, ಹೋಗುತ್ತದೆ, ಅನ್ನದಾತರಿಗೆ ಅನ್ಯಾಯ ಮಾಡಬಾರದು ಎಂದು ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಗಮನ ಸೆಳೆದರು.
ರೈತಸಂಘದ ಜಿಲ್ಲಾಧ್ಯಕ್ಷ ದಯಾನಂದ್ ಮಾತನಾಡಿ, ಸಮೃದ್ಧ ಕೃಷಿ ಭೂಮಿ ಕಬಳಿಕೆ ಮಾಡಿ ನಿವೇಶನ ಕೊಡಿ ಎಂದು ಯಾರಾದರೂ ನಿಮ್ಮನ್ನು ಕೇಳಿದ್ದಾರೆಯೇ? ಹಣ ಲೂಟಿ ಹೊಡೆಯಲು ಉಪ ನಗರ ಮಾಡಲು ಸ್ಕೆಚ್ ಹಾಕಿರುವುದು ನಮಗೆ ಗೊತ್ತಿದೆ. ಸಹಮತ, ಬಲವಂತ ಶಬ್ಧಗಳು ನಡೆಯುವುದಿಲ್ಲ. ಜಿಲ್ಲಾಧಿಕಾರಿ ಕೂಡಲೇ ಭೂಮಿ ಪಡೆಯುವುದಿಲ್ಲ ಎಂದು ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಡಾಬಾ ರಘು, ರಂಗನಾಥ್, ಲೋಕೇಶ್, ಶಿವಕುಮಾರ್, ಪ್ರಭಣ್ಣ, ಬೆಳಗುಂಬ ಚಂದ್ರಶೇಖರ್, ಗಗನ್, ಓಂಕಾರ ಮೂರ್ತಿ, ರಾಜಣ್ಣ, ರವಿ, ಇನ್ನಿತರರು ಹಾಜರಿದ್ದರು.