ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಸಾಸಲು ಗ್ರಾಮದ ಮುಜರಾಯಿ ದೇಗುಲಗಳಾದ ಶ್ರೀಸೋಮೇಶ್ವರ, ಶ್ರೀಶಂಭುಲಿಂಗೇಶ್ವರ ದೇಗುಲ ಅಭಿವೃದ್ಧಿಗಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಎರಡು ದೇಗುಲಗಳ ಜೀರ್ಣೋದ್ಧಾರ ನೆಪದಲ್ಲಿ ದೇಗುಲ ಕೆಡವಿ ಎರಡು ವರ್ಷವಾಗಿದೆ. ಗ್ರಾಮಸ್ಥರು ದೇವರನ್ನು ಪೂಜಿಸಲು ಸ್ವಂತ ಹಣದಿಂದ ದೇವಾಲಯ ನಿರ್ಮಿಸಿ ಭಕ್ತರಿಗೆ ಪೂಜೆ ಸಲ್ಲಿಸಲು ಅನುವು ಮಾಡಿಕೊಡಲಾಗಿದೆ. ದೇಗುಲದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂಷಿಸಿದರು.
ಜೋಡಿರಥ ನಿರ್ಮಾಣದಲ್ಲಿ ಕಳಪೆ ಮರ ಬಳಸಲಾಗಿದ್ದು ಜೊತೆಗೆ ರಥದ ನಿರ್ಮಾಣ ಕಾರ್ಯ ಬಹಳ ವಿಳಂಬವಾಗಿದೆ. ಭಕ್ತರು ತಂಗಲು, ಬಟ್ಟೆ ಬದಲಾಯಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ ಎಂಬ ದೂರುಗಳು ಸಾಕಷ್ಟಿವೆ. ತೋರಿಕೆ ಮಾತು ಬಿಟ್ಟು ಅಧಿಕಾರಿಗಳು ದೇಗುಲ ಅಭಿವೃದ್ಧಿಗೆ ಮುಂದಾಗಬೇಕು ಎಂದರು.ಯುಗಾದಿಯ ತರುವಾಯ ಜಾತ್ರೆ, ರಥೋತ್ಸವ ನಡೆಯಲಿದೆ. ಐದಾರು ವರ್ಷಗಳಿಂದ ರಥೋತ್ಸವಜರುಗಿಲ್ಲ ಎಂಬ ಕೊರಗು ಗ್ರಾಮಸ್ಥರಲ್ಲಿದೆ. ದೇಗುಲದ ಹುಂಡಿಯಲ್ಲಿ ಸುಲಭವಾಗಿ ಹಣ ತೆಗೆಯಬಹುದಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಗ್ರಾಮದ ಜನರ ಸಹನೆಯನ್ನು ಪರೀಕ್ಷಿಸುವ ಕೆಲಸವಾಗಬಾರದು. ಗ್ರಾಮಸ್ಥರಿಗೆ ಈ ದೇಗುಲ ಆರಾಧ್ಯ ದೈವ್ಯವಾಗಿದೆ ಎಂಬುದನ್ನು ಮರೆಯದೆ ತ್ವರಿತವಾಗಿ ಆಗಬೇಕಿರುವ ಕೆಲಸ ಮುಗಿಸಿ ಎಂದು ತಾಕೀತು ಮಾಡಿದರು.
ಕನ್ನಡಪ್ರಭ ವಾರ್ತೆ ಹಲಗೂರು
ಫೆ.10ರಂದು ಸಂಜೆ 6 ಗಂಟೆಗೆ ಪುಣ್ಯಾಹ, ಗಣಪತಿ ಪೂಜೆ, ಹೋಮ-ಹವನ ಇನ್ನಿತರೆ ಪೂಜಾ ಕಾರ್ಯಕ್ರಮಗಳು ನಡೆದವು. ಶ್ರೀ ಉರಿಗಣ್ಣೇಶ್ವರಿ ನೂತನ ವಿಗ್ರಹಗಳನ್ನು ಗಂಗೆ ತಡಿಯಿಂದ ತಂದು ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಮಹಾ ಮಂಗಳಾರತಿ, ರಾತ್ರಿ 7 ಗಂಟೆಗೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಶಿವಕುಮಾರ್, ಸಿದ್ದರಾಜು, ನಟರಾಜು, ಬಸವರಾಜು, ಸತೀಶ್, ಮಹದೇವಸ್ವಾಮಿ ಸೇರಿದಂತೆ ಹಲವರು ಇದ್ದರು.