ಸಂಚಾರ ನಿಯಮಗಳು- ವಿಜಯವಿಠ್ಠಲ ಪಿಯು ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

KannadaprabhaNewsNetwork |  
Published : Jan 17, 2024, 01:45 AM IST
34 | Kannada Prabha

ಸಾರಾಂಶ

ಮನುಷ್ಯನ ಜೀವ ಅತ್ಯಮೂಲ್ಯ. ವಾಹನ ಚಾಲಕರು ಸಂಚಾರ ನಿಯಮವನ್ನು ತಪ್ಪದೇ ಪಾಲಿಸಬೇಕು. ಸಂಚಾರ ನಿಯಮದ ಉಲ್ಲಂಘನೆಯಿಂದ ಪ್ರಾಣಾಪಾಯ ಸಂಭವಿಸುತ್ತದೆ. ಆದ್ದರಿಂದ ಸಂಚಾರ ನಿಯಮವನ್ನು ಅರಿತು ಇತರರಿಗೂ ಅದರ ಅರಿವನ್ನು ನೀಡಬೇಕು. ಚಾಲನೆ ರಹದಾರಿ ಪತ್ರ ಇಲ್ಲದೆ ಹಾಗೂ ಹೆಲ್ಮೆಟ್ ರಹಿತ ಚಾಲನೆ ಸರ್ವಥಾ ಅಪರಾಧ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಸರಸ್ವತಿಪುರಂ ವಿಜಯವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ಸಂಚಾರ ಪೊಲೀಸ್ ವತಿಯಿಂದ ಸಂಚಾರ ನಿಯಮಗಳು ಕುರಿತು ನಡೆದ ಜಾಗೃತಿ ಕಾರ್ಯಕ್ರಮ ನಡೆಯಿತು.

ಕುವೆಂಪುನಗರ ಸಂಚಾರ ಪೊಲೀಸ್ ಠಾಣೆಯ ಎಸ್ಐ ಮದನ್ ಕುಮಾರ್ ಉದ್ಘಾಟನೆ ಮಾತನಾಡಿ, ಮನುಷ್ಯನ ಜೀವ ಅತ್ಯಮೂಲ್ಯ. ವಾಹನ ಚಾಲಕರು ಸಂಚಾರ ನಿಯಮವನ್ನು ತಪ್ಪದೇ ಪಾಲಿಸಬೇಕು. ಸಂಚಾರ ನಿಯಮದ ಉಲ್ಲಂಘನೆಯಿಂದ ಪ್ರಾಣಾಪಾಯ ಸಂಭವಿಸುತ್ತದೆ. ಆದ್ದರಿಂದ ಸಂಚಾರ ನಿಯಮವನ್ನು ಅರಿತು ಇತರರಿಗೂ ಅದರ ಅರಿವನ್ನು ನೀಡಬೇಕು. ಚಾಲನೆ ರಹದಾರಿ ಪತ್ರ ಇಲ್ಲದೆ ಹಾಗೂ ಹೆಲ್ಮೆಟ್ ರಹಿತ ಚಾಲನೆ ಸರ್ವಥಾ ಅಪರಾಧ ಎಂದು ಎಚ್ಚರಿಕೆ ನೀಡಿದರು.

ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದಾಗ ನಿಮ್ಮ ಸಹಾಯ ಹಸ್ತವನ್ನು ಚಾಚಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಕಡ್ಡಾಯವಾಗಿ ಸೀಟ್ ಬೆಲ್ಟನ್ನು ಧರಿಸುವುದರಿಂದ ಆಗುವ ಅನಾಹುತವನ್ನು ತಪ್ಪಿಸಬಹುದು. ಸುರಕ್ಷಿತ ಚಾಲನೆ ಜೀವದ ಸಂರಕ್ಷಣೆ ಎಂಬುದು ನಿಮ್ಮ ಗಮನದಲ್ಲಿರಲಿ. 18 ವರ್ಷ ವಯೋಮಿತಿ ದಾಟಿದ ವಾಹನ ಪರವಾನಗಿಯನ್ನು ಹೊಂದಿದ ಸವಾರರು ನಗರ ಪ್ರದೇಶಗಳಲ್ಲಿ ವೇಗಮಿತಿಯನ್ನು ಗಮನಿಸಿ ವಾಹನವನ್ನು ಚಲಾಯಿಸಬೇಕು. ರಸ್ತೆ ನಿಯಮಗಳನ್ನು ಮತ್ತು ಸಂಚಾರಿ ಪೊಲೀಸ್ ಸೂಚನೆಗಳನ್ನು ತಪ್ಪದೇ ಪಾಲಿಸಬೇಕೆಂದು ತಿಳಿಸಿದರು.

ಪ್ರಾತ್ಯಕ್ಷಿಕೆಯ ಮೂಲಕ ಸಂಚಾರ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ವಿಜಯವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯ. ಸಂಚಾರಿ ನಿಯಮಗಳ ಅರಿವಿನೊಂದಿಗೆ ಇಂದಿನ ವಿದ್ಯಾರ್ಥಿಗಳು ರಸ್ತೆಯಲ್ಲಿ ಉಂಟಾಗುವ ಅಪಘಾತಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ಬೇಜವಾಬ್ದಾರಿತನದಿಂದ ಉಂಟಾಗುವ ಭೀಕರ ಅಪಘಾತಗಳನ್ನು ಕುರಿತು ನಿದರ್ಶನಗಳೊಂದಿಗೆ ಅರಿವು ಮೂಡಿಸಿದರು.

ಸಂಚಾರ ಸಹಾಯಕ ಉಪ ಪೋಲೀಸ್ ನಿರೀಕ್ಷಕ ಆನಂದ್, ಭಜಂತ್ರಿ, ಮನೋರಂಜನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?
ಸಂಸ್ಕೃತಿಯ ಸಂರಕ್ಷಣೆ ಹೊಣೆ ಯುವಶಕ್ತಿ ಮೇಲಿದೆ: ಸಂಜೀವ ಚವ್ಹಾಣ