- ಧ್ರುವ ಎಜುಕೇಷನ್ ಟ್ರಸ್ಟ್ನಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಪ್ರೊ. ವೈ.ವೃಷಭೇಂದ್ರಪ್ಪ ಸಲಹೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಹೊರವಲಯದಲ್ಲಿರುವ ಧ್ರುವ ಎಜುಕೇಷನ್ ಟ್ರಸ್ಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದ ವಿಜ್ಞಾನ ಮೇಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಪ್ರಕೃತಿಯಲ್ಲಿ ಅನೇಕ ವಿಸ್ಮಯಗಳು ಅಡಕವಾಗಿವೆ. ಅಂತಹ ನಿಗೂಢತೆಗಳನ್ನು ಸಂಶೋಧನೆಗಳ ಮೂಲಕ ವಿಜ್ಞಾನಿಗಳು ಪತ್ತೆಹಚ್ಚಿ ಜನಸಾಮಾನ್ಯರ ಉಪಯೋಗಕ್ಕೆ ತರುತ್ತಿದ್ದಾರೆ ಎಂದರು.
ವಿಜ್ಞಾನ ಎನ್ನುವುದು ಕಣ್ಣಿಗೆ ಕಾಣದಂತಹ ನಿಗೂಢತೆಯಲ್ಲಿದೆ. ಅದರ ಸಂಶೋಧನೆಗಳನ್ನು ಪ್ರಪಂಚದಲ್ಲಿರುವ ವಿಜ್ಞಾನಿಗಳು ಸಂಶೋಧನೆಗಳ ಮಾಡುತ್ತಾ ಬಂದಿದ್ದಾರೆ. ಇದರಿಂದಾಗಿಯೇ ನಾವೀಗ ಮೊಬೈಲ್, ದೂರದರ್ಶನ, ಕಂಪ್ಯೂಟರ್, ಇಂಟರ್ನೆಟ್ ಸೇರಿದಂತೆ ಇನ್ನಿತರೆ ಆಧುನಿಕ ಸೌಲಭ್ಯಗಳನ್ನು ಬಳಸುವಂತಾಗಿದೆ ಎಂದರು.ಶಾಲೆಗಳಲ್ಲಿ ನಡೆಯುವಂತಹ ಇಂತಹ ವಿಜ್ಞಾನ ಮೇಳಗಳು ವಿದ್ಯಾರ್ಥಿಗಳಾದ ನಿಮಗೆ ಸ್ಫೂರ್ತಿಯನ್ನು ನೀಡಲಿದೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಾದ ನಿಮ್ಮಲ್ಲಿ ಎಂತೆಂಥ ಪ್ರೌಢಿಮೆಗಳು ಅಡಗಿದೆಯೋ ತಿಳಿದಿಲ್ಲ. ನೀವು ವಿದ್ಯಾಭ್ಯಾಸ ಮಾಡುವ ಸಂದರ್ಭ ಶಿಕ್ಷಕರು ಹೇಳಿಕೊಡುವಂತಹ ಪಠ್ಯ ವಿಷಯಗಳನ್ನು ಅರ್ಥ ಮಾಡಿಕೊಂಡು ಮುನ್ನಡೆದಾಗ ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ, ಅಂತಹ ಕ್ಷೇತ್ರದಲ್ಲಿ ಯಶಸ್ಸು ಪಡೆಯುತ್ತೀರಿ ಎಂದರು.
ಸಂಸ್ಥೆ ಕಾರ್ಯದರ್ಶಿ ಕೆ.ಸಿ.ಪ್ರಶಾಂತ್ ಕುಮಾರ್ ಮಾತನಾಡಿ, ಇಂದು ಮಾನವನು ಬೇರೆ ಗ್ರಹಗಳಲ್ಲಿ ಜೀವಿಸಬಹುದು ಎಂಬ ಅನ್ವೇಷಣೆಯನ್ನು ನಮ್ಮ ವಿಜ್ಞಾನಿಗಳು ಮಾಡುತ್ತಿದ್ದಾರೆ. ಅನ್ಯಗ್ರಹದಲ್ಲಿ ಬೆಳೆಯನ್ನು ಬೆಳೆಯುವ ಸಂಶೋಧನೆಯೂ ಫಲ ನೀಡಿದೆ. ಭಾರತ ದೇಶ ಇಷ್ಟೊಂದು ಪ್ರಗ್ರತಿಯ ಪಥದತ್ತ ಮುನ್ನಡೆಯಲು ವಿಜ್ಞಾನಿಗಳ ಪಾತ್ರ ಮಹತ್ವದಾಗಿದೆ ಎಂದರು.ನಮ್ಮ ಶಾಲೆಯಲ್ಲಿ ಪ್ರತಿವರ್ಷ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳುತ್ತ ವಿದ್ಯಾರ್ಥಿಗಳಿಂದಲೇ ಹೊಸ ಹೊಸ ಪ್ರಯೋಗ, ಅನ್ವೇಷಣೆಗಳನ್ನು ಮಾಡಿಸಿ, ವಿದ್ಯಾರ್ಥಿಗಳ ಬೌದ್ಧಿಕಮಟ್ಟದ ಬೆಳವಣಿಗೆಗೆ ಸಹಕಾರಿ ಆಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ಸಂಸ್ಥೆಯ ಅಧ್ಯಕ್ಷೆ ಬಿ.ಸೌಭಾಗ್ಯ, ಆಡಳಿತಾಧಿಕಾರಿ ನಟರಾಜ್, ಪ್ರಾಚಾರ್ಯೆ ಶಾಂತ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು. ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳನ್ನು ಚಿಂತನೆ ಹಚ್ಚುವಲ್ಲಿ ಯಶಸ್ವಿಯಾಯಿತು.- - - -12ಕೆಸಿಎನ್ಜಿ1:
ಚನ್ನಗಿರಿ ಪಟ್ಟಣದ ಧ್ರುವ ಎಜುಕೇಷನ್ ಟ್ರಸ್ಟ್ನಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ಮೇಳದ ಉದ್ಘಾಟನೆಯನ್ನು ದಾವಣಗೆರೆಯ ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪ ಉದ್ಘಾಟಿಸಿದರು.