ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿರುವ ಶ್ರೀವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ನಡೆದ ನೂತನ ವರ್ಷದ ಶುಭಾರಂಭ ಹಾಗೂ ಸಾಹಿತಿ ಡಾ.ಶಂಕರ ಹಲ್ಲೇಗೆರೆ ರಚಿತ ಕವನ ಸಂಕಲನ ಬಿಡುಗಡೆ ಮತ್ತು ಸಾಂಸ್ಕೃತಿಕ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಿಟಷರ ಆಗಮನದಿಂದ ಭಾರತದಲ್ಲಿ ವಿದೇಶಿ ದಿನದರ್ಶಿಕೆಯಲ್ಲಿ ಜ.೧ರಂದು ಹೊಸ ವರ್ಷ ಎಂದು ಕ್ಯಾಲೆಂಡರ್ ಬದಲಿಸುವ ದಿನವಾಗಿದೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಜನವರಿ ಒಂದು ನಮಗೆ ಹೊಸ ವರ್ಷವೇನೂ ಅಲ್ಲ. ಅದು ನಾವೂ ಸರ್ಕಾರಿ ಕಚೇರಿಗಳು, ಬ್ಯಾಂಕಿಂಗ್ ವಹಿವಟಿನಲ್ಲಿ ಅನುಸರಿಸುವ ಕ್ಯಾಲೇಂಡರ್ ಮಾತ್ರವಾಗಿದೆ. ಆದರೆ, ಭಾರತೀಯ ಸಂಸ್ಕೃತಿ ಬಿಂಬಿಸುವ ಪಾಕೃತಿಕ ಹಬ್ಬ-ಆಚರಣೆಗಳಲ್ಲಿ ವೈಜ್ಞಾನಿಕ ತಳಹದಿ, ಸತ್ವವಿದೆ. ಪ್ರಾಕೃತಿಕ ಬದಲಾವಣೆಯೊಂದಿಗೆ ಆರೋಗ್ಯಕರ ಮಾಹಿತಿಯಿದೆ ಎಂದರು.ಪ್ರಾಕೃತಿಕ ಬದಲಾವಣೆಯಲ್ಲಿ ಬರುವ ಯುಗಾದಿ ನಮಗೆ ಹೊಸ ವರ್ಷವಾಗಿದೆ. ಸೂರ್ಯ ತನ್ನ ದಿಕ್ಕನ್ನು ಬದಲಿಸುವ ಸಂಕ್ರಾಂತಿ, ಮಹಾಶಿವರಾತ್ರಿ, ದೀಪಾವಳಿ, ರಾಷ್ಟ್ರೀಯ ಹಬ್ಬಗಳು, ನಾಡಹಬ್ಬಗಳು, ಶ್ರೀರಾಮ, ಶ್ರೀಕೃಷ್ಣ ಸೇರಿದಂತೆ ಮಹಾ ಪುರುಷರ ಜಯಂತಿಗಳು, ಗ್ರಾಮೀಣ ಸೊಗಡಿನಿಂದ ಕೂಡಿದ ಹಬ್ಬಗಳು, ಮನೆ ಮಂದಿಯನ್ನು ಸಂಭ್ರಮದಿಂದ ಇರುವಂತೆ ಆಚರಿಸುವ ಹಬ್ಬಗಳಲ್ಲಿ ನಮ್ಮ ಸಂಸ್ಕೃಂತಿ ಸಂಪ್ರದಾಯದ ಜೊತೆ ವೈಜ್ಞಾನಿಕತೆಯ ಮಹತ್ವವಿದೆ ಎಂದರು.
ಸಾಹಿತಿ ಡಾ.ಶಂಕರ ಹಲ್ಲೇಗೆರೆ ರಚಿತ ಗೆಲುವು ನಗಬೇಕು ಮತ್ತು ಚಿಣ್ಣರ ಲೋಕ ಎಂಬ ಎರಡು ಕವನ ಸಂಕಲನಗಳನ್ನು ಲೋಕಾರ್ಪಣೆಗೊಳಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. ಗಮಕ ವಿಧುಷಿ ಧರಿತ್ರಿ ಅನಂತರಾವ್ ಮತ್ತು ತಂಡದಿಂದ ಭಕ್ತಿಸುಧಾ ಕಾರ್ಯಕ್ರಮ ನಡೆಯಿತು.