- ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲು ನನ್ನನ್ನು ಗೆಲ್ಲಿಸಿ: ಗಾಯತ್ರಿ ಸಿದ್ದೇಶ್ವರ ಮನವಿ । ಹೊನ್ನಾಳಿ ತಾಲೂಕಿನಲ್ಲಿ ಪ್ರಚಾರ
ಆರು ದಶಕ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರಗಳು ಹಾಗೂ ಕಳೆದೊಂದು ದಶಕದಲ್ಲಿ ದೇಶವನ್ನು ಮುನ್ನಡೆಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ತುಲನೆ ಮಾಡಿರುವ ದಾವಣಗೆರೆ, ಕರ್ನಾಟಕ ರಾಜ್ಯಹಾ ಗೂ ದೇಶದ ಜನತೆ ಮತ್ತೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನಿಶ್ಚಿತ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ಹೊನ್ನಾಳಿ ಕ್ಷೇತ್ರದ ಹನುಮಸಾಗರ, ಎಚ್.ಗೋಪಗೊಂಡನಹಳ್ಳಿ, ಹತ್ತೂರು ಇನ್ನಿತರೆ ಗ್ರಾಮದಳಲ್ಲಿ ಸೋಮವಾರ ಪ್ರಚಾರ ಕೈಗೊಂಡು, ಮತಯಾಚಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಆಂತರಿಕ, ಬಾಹ್ಯವಾಗಿ ಸದೃಢ ರಾಷ್ಟ್ರವಾಗಿ ಹೊಮ್ಮಿದೆ. ಮೋದಿ ಆಳ್ವಿಕೆ ಅವಧಿಯ 10 ವರ್ಷಗಳ ಅಭಿವೃದ್ಧಿ ನೋಡಿ ಜನತೆ ಮತ್ತೆ ಮೋದಿ ಕೈಗೆ ಅಧಿಕಾರ ನೀಡುತ್ತಿದ್ದಾರೆ ಎಂದರು.ಈಗಾಗಲೇ ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿಗೆ ಆಶೀರ್ವದಿಸಿದ್ದಾರೆ. ಮೇ 7ರಂದು ನಡೆಯುವ ಚುನಾವಣೆಯಲ್ಲಿ ದಾವಣಗೆರೆ ಸೇರಿದಂತೆ 2ನೇ ಹಂತದ 14 ಕ್ಷೇತ್ರಗಳಲ್ಲೂ ಬಿಜೆಪಿಗೆ ಮತದಾರರು ಆಶೀರ್ವದಿಸಲಿದ್ದಾರೆ. ಇಡೀ ದೇಶವೇ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ. ನರೇಂದ್ರ ಮೋದಿ ಪರ, ಅಭಿವೃದ್ಧಿ ಪರ ಅಲೆ ಇದೆ ಎಂದರು.
ದೇಶದ ಅಭಿವೃದ್ಧಿ, ದಾವಣಗೆರೆ ಅಭಿವೃದ್ಧಿಗಾಗಿ ಬಿಜೆಪಿಯನ್ನೇ ಅಧಿಕಾರಕ್ಕೆ ತರಲು ಜನ ಸಂಕಲ್ಪ ಮಾಡಿದ್ದಾರೆ. ಮತದಾರರು ಮೇ 7ರವರೆಗೂ ನರೇಂದ್ರ ಮೋದಿ ಅವರ ಧ್ಯೇಯೋದ್ದೇಶ, ಸಿದ್ದೇಶ್ವರ ಸೇರಿದಂತೆ ಬಿಜೆಪಿಯ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ಮುಟ್ಟಿಸಿ, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಬೇಕು ಎಂದು ತಿಳಿಸಿದರು.
ಮುಖಂಡರಾದ ಸುರೇಶ್, ದಾಕ್ಷಾಯಣಿ ಸಂಗಮೇಶ್ ನಿರಾಣಿ, ಋತು, ಮಹೇಶ, ಶಾಂತರಾಜ ಪಾಟೀಲ್, ಕುಬೇರಪ್ಪ, ಸಂತೋಷಕುಮಾರ, ಎಲ್.ಕೆ.ಮಂಜಪ್ಪ, ಹನುಮಂತಪ್ಪ, ಅರೆಕೆರೆ ನಾಗರಾಜ, ರಂಗನಾಥ, ಸುರೇಂದ್ರ, ಯೋಗೇಶ, ಮಂಡಲ ಸದಸ್ಯರು, ಗ್ರಾಪಂ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮುಖಂಡರು ಇದ್ದರು.
ಹೊನ್ನಾಳಿ ಕ್ಷೇತ್ರದಲ್ಲಿ ಸೋಮವಾರ ಪ್ರಚಾರ ಸಭೆ, ಮತಯಾಚಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲೂ ತೀವ್ರ ಬರ ಬಂದಿದ್ದರೂ, ಉಸ್ತುವಾರಿ ಸಚಿವ ಮಲ್ಲಿಕಾರ್ಜುನರಿಗೆ ಗ್ರಾಮೀಣ ಪ್ರದೇಶಕ್ಕೆ ಹೋಗಿ, ಜನರು, ರೈತರ ಸಂಕಷ್ಟ ಆಲಿಸಿಲ್ಲ. ಈಗ ಸಚಿವರ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹಳ್ಳಿಹಳ್ಳಿ ಸುತ್ತುತ್ತಿದ್ದಾರೆ. ರಾಜಕೀಯಕ್ಕಾಗಿ ಮತಯಾಚಿಸುತ್ತಿದ್ದಾರೆ ಹೊರತು, ಗ್ರಾಮೀಣ ಸಮಸ್ಯೆಗಳ ಆಲಿಸಿ, ಪರಿಹರಿಸಲು ಅಲ್ಲ ಎಂದು ಟೀಕಿಸಿದರು.
- - - ಟಾಪ್ ಕೋಟ್ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಆತಂಕವಾದಿಗಳಿಗೆ ದೇಶದಲ್ಲಿ ಅವಕಾಶ ಇಲ್ಲದಂತಾಗಿದೆ. ಪಿಎಫ್ಐ ಸೇರಿದಂತೆ ನಿಷೇಧಿತ ಸಂಘಟನೆಗಳೊಂದಿಗೆ ಈಗ ಕಾಂಗ್ರೆಸ್ ಪಕ್ಷ ಸೇರಿ, ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಆತಂಕವಾದಿಗಳು ಮತ್ತೆ ಮುನ್ನೆಲೆಗೆ ಬಂದರೆ ಭಯೋತ್ಪಾದಕರು, ಮಾನವ ಬಾಂಬ್ಗಳು, ಜಿಹಾದಿಗಳ ಅಟ್ಟಹಾಸವೂ ಹೆಚ್ಚುತ್ತದೆ
- - - -29ಕೆಡಿವಿಜಿ12, 13: