ಹರಿಹರ: ಪರಿಶಿಷ್ಟರ ಕಾಲೋನಿಯ ಭಜನಾ ಮಂದಿರದಲ್ಲಿ ಮಾದಿಗ ಸಮಾಜ ನೂತನ ಅಧ್ಯಕ್ಷ ಎನ್.ರಜನಿಕಾಂತ್ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಚಾಲಕರಾಗಿ ಪರಶುರಾಮ್, ಖಜಂಚಿಯಾಗಿ ಸಂತೋಷ್ ದೊಡ್ಮನಿ, ಸುರೇಂದ್ರ ನುಂಕೋಳ್ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಶ್ರೀಕಾಂತ್ ಜುಂಜಪ್ಪ, ಮಂಜಣ್ಣ ಪೂಜಾರಿ, ಹುಲುಗಪ್ಪ, ಸದಾಶಿವ ಬೆಳ್ಳೂಡಿ, ಕೇಶವ ಕಂಚಿಕೇರಿ, ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಎನ್.ರಜನಿಕಾಂತ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಒಳ ಮೀಸಲಾತಿ ವರ್ಗಿಕರಣದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪನ್ನು ಸಮುದಾಯ ಸ್ವಾಗತಿಸಿದೆ. ಸಮಾಜದ ಪರವಾಗಿ ಸಾಕಷ್ಟು ಹಿರಿಯ ಮುಖಂಡರು ನಾಯಕರು ಹಲವು ದಶಕಗಳ ಧರಣಿ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಅಧ್ಯಕ್ಷರು ಒಳಗೊಂಡಂತೆ ನೂತನ ಪದಾಧಿಕಾರಿಗಳು ಸಮಾಜದ ಹಿರಿಯ, ಕಿರಿಯ ಮುಖಂಡರು ಶೈಕ್ಷಣಿಕವಾಗಿ ರಾಜಕೀಯವಾಗಿ ನಾಗರೀಕರ ಸಮಾಜ ನಿರ್ಮಾಣ ಮಾಡಲು ತಾಲೂಕು, ನಗರ ಘಟಕದ ಸಮಾಜದ ಬಂಧುಗಳು ಪಣತೊಡೋಣ ಎಂದು ಪದಾಧಿಕಾರಿಗಳಿಗೆ, ಸಮಾಜದ ಮುಖಂಡರಿಗೆ ಶುಭ ಹಾರೈಸಿದರು.
ಹರಿಹರದ ಪರಿಶಿಷ್ಟರ ಕಾಲೋನಿಯ ಭಜನಾ ಮಂದಿರದಲ್ಲಿ ಮಾದಿಗ ಸಮಾಜದ ನೂತನ ಅಧ್ಯಕ್ಷ ಎನ್.ರಜನಿಕಾಂತ್ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.