ಜಿಲ್ಲಾ ತಾಲೂಕು ಆಡಳಿತ ವೈಫಲ್ಯ ಖಂಡಿಸಿ ಅರೆ ಬೆತ್ತಲೆ ಮೆರವಣಿಗೆ

KannadaprabhaNewsNetwork |  
Published : Sep 04, 2026, 03:15 AM IST
ಫೋಟೋ ೩ಡಿಎಚಪಿ೫ | Kannada Prabha

ಸಾರಾಂಶ

ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ವಿವಿಧ ಇಲಾಖೆಗಳಲ್ಲಿ ನಡೆದಿರುವ ಅವ್ಯವಹಾರ ಮತ್ತು ಅನುದಾನ ಹಂಚಿಕೆ, ಕಾಮಗಾರಿಗಳ ಅನುಷ್ಠಾನ ಹಣದ ಬಳಿಕೆಯ ಬಗ್ಗೆ ಕೂಲಂಕುಶ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಸಂಸ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಧರಣಿ ನಿಮಿತ್ತ ಗುರುವಾರ ಪಟ್ಟಣದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ವಿವಿಧ ಇಲಾಖೆಗಳಲ್ಲಿ ನಡೆದಿರುವ ಅವ್ಯವಹಾರ ಮತ್ತು ಅನುದಾನ ಹಂಚಿಕೆ, ಕಾಮಗಾರಿಗಳ ಅನುಷ್ಠಾನ ಹಣದ ಬಳಿಕೆಯ ಬಗ್ಗೆ ಕೂಲಂಕುಶ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಸಂಸ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಧರಣಿ ನಿಮಿತ್ತ ಗುರುವಾರ ಪಟ್ಟಣದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮೊಹರೆ ವೃತ್ತದವರೆಗೆ ಪಾದಯಾತ್ರೆ ಮೂಲಕ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ದಸಂಸ ಜಿಲ್ಲಾ ಸಂಚಾಲಕ ಪ್ರಕಾಶ ಗುಡಿಮನಿ ಅವರ ನೇತೃತ್ವದಲ್ಲಿ ಅರ ಬೆತ್ತಲೆ ಮೆರವಣಿಗೆ ನಡೆಸಿದರು.

ಇದೇ ವೇಳೆ ಮುಖಂಡರಾದ ಜಿಲ್ಲಾ ಸಂಘಟನಾ ಸಂಚಾಲಕ ಶರಣು ಶಿಂಧೆ, ಲಕ್ಕಪ್ಪ ಬಡಿಗೇರ, ಪರಶುರಾಮ ದಿಂಡವಾರ, ಸುರೇಶ ನಡೆಗಡ್ಡಿ, ಸುಭದ್ರ ಮೇಲಿಕೇರಿ, ಮಂಜುನಾಥ ಎಂಟಮಾನ, ಮಲ್ಕಪ್ಪ ಬಾಗೇವಾಡಿ, ನಜೀರ್ ಬೀಳಗಿ, ಬಸವರಾಜ ಇಂಗಳಗಿ, ಪರಸಪ್ಪ ಬಡಿಗೇರ, ಯಮನಪ್ಪ ಭೂತಾಳಿ, ಅಶೋಕ ಗುಡಿಸುಲಮನಿ, ಯಮುನೇಶ ಬೊಮ್ಮನಜೂಗಿ, ರಾಘವೇಂದ್ರ ಗುಡಿಮನಿ, ಮಹೇಶ ಗುಡಿಮನಿ, ಮಾಂತೇಶ ಛಲವಾದಿ, ಪ್ರಕಾಶ ಮನೂರ, ದಾದಾ ಶಹಾಪುರ,ದೇವೇಂದ್ರ ಹಡಪದ, ಕಿರಣ್ ಸಿಂದೆ, ಆಕಾಶ ಕೊಂಬಿನ್, ಬಾಬು ಬಿಸನಾಳ, ಕಾಶೀನಾಥ ಕಟ್ಟಿಮನಿ, ಕಾಳಪ್ಪ ಕಡಕೋಳ,ರವಿ ತಲಕೇರಿ, ಮುತ್ತು ಸುಲ್ಪಿ, ದೇವು ಕಲ್ಲೂರ, ಸಾಹಿಬಣ್ಣ ದಳಪತಿ, ಪ್ರಶಾಂತ ದೊಡಮನಿ, ದಯಾನಂದ ರಾಠೋಡ,ಶಿವು ರಾಂಪುರ, ಮಾಂತೇಶ ವಂದಾಲ, ಕಾಶೀನಾಥ ವಾಡೆದಮನಿ, ಮಾಂತೇಶ ಗುಡಿಮನಿ,ರಮೇಶ ಬನಸೋಡೆ,ಪಿಂಟು ಭಾಸೂತ್ಕರ ಸೇರಿದಂತೆ ಹಲವಾರು ಜನ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕೃಷ್ಣಾರತಿಗೆ ರೈತರಿಂದ ಸಕಲ ಸಿದ್ಧತೆ
ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಇಂದು ಮನವಿ