ಕನ್ನಡಪ್ರಭ ವಾರ್ತೆ ಮಣಿಪಾಲ
ರಕ್ತಸ್ರಾವ ನಿರ್ವಹಣೆಯಲ್ಲಿ ಅತ್ಯಾಧುನಿಕ ತಂತ್ರಗಳ ಬಳಕೆ, ರೋಗಿಯ ರಕ್ತ ನಿರ್ವಹಣೆ (ಪಿಬಿಎಂ) ಮತ್ತು ರೊಟೇಶನಲ್ ಥ್ರಂಬೋಎಲಾಸ್ಟೊಮೆಟ್ರಿ (ರೋಟಮ್) ಕುರಿತು ವಿಚಾರಸಂಕಿರಣವು ವಿಶೇಷ ಬೆಳಕು ಚೆಲ್ಲಿತು.
ವಿಚಾರ ಸಂಕಿರಣವನ್ನು ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆಎಂಸಿಯ ಅಸೋಸಿಯೇಟ್ ಡೀನ್ ಡಾ. ಅನಿಲ್ ಭಟ್, ವೆರ್ಫೆನ್ ಅಕಾಡೆಮಿಯ ಡಾ. ಅಜಯ್ ಗಾಂಧಿ, ಐಎಚ್ಬಿಟಿ ಪ್ರಾಧ್ಯಾಪಕ ಡಾ. ಶಮೀ ಶಾಸ್ತ್ರಿ ಮತ್ತು ಮುಖ್ಯಸ್ಥ ಡಾ. ಗಣೇಶ್ ಮೋಹನ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಸಂವಾದ, ಚರ್ಚೆಗಳು, ಪ್ರೇಕ್ಷಕರ ಸಮೀಕ್ಷೆಗಳ ಮೂಲಕ ನೈಜ- ಕ್ಲಿನಿಕಲ್ ಸನ್ನಿವೇಶಗಳನ್ನು ವಿಶ್ಲೇಷಿಸಲು ಅವಕಾಶ ಮಾಡಿಕೊಡವಾಯಿತು. ರೋಗಿಗಳ ಅನಾರೋಗ್ಯ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವಾಗ, ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವ ಪಿಬಿಎಂ ಸಾಮರ್ಥ್ಯದ ಕುರಿತು ವಿಚಾರ ವಿನಿಮಯ ಮಾಡಲಾಯಿತು.