ಕನ್ನಡಪ್ರಭ ವಾರ್ತೆ ಮಂಗಳೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಿಆರ್ಝಡ್ನಲ್ಲಿ ಮರಳು ತೆಗೆಯಲು ಅವಕಾಶವಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಈ ಕುರಿತು ತಡೆಯಾಜ್ಞೆ ಇದೆ ಎಂದು ಹೇಳಿದರು.
ಮಂಗಳವಾರವೇ ಸ್ಯಾಂಡ್ ಬಝಾರ್ ಶುರು:ಈ ಹಿಂದೆ ಯು.ಟಿ. ಖಾದರ್ ಸಚಿವರಾಗಿದ್ದಾಗ ಸ್ಯಾಂಡ್ ಬಜಾರ್ ಆಪ್ ಮಾಡಿ ಅದರ ಮೂಲಕ ಜನರಿಗೆ ನಿಗದಿತ ಸಮಯಕ್ಕೆ ನಿಗದಿತ ದರಕ್ಕೆ ಮರಳು ನೀಡುವ ಕೆಲಸ ಆಗಿತ್ತು. ಸರ್ಕಾರ ಬದಲಾದ ಬಳಿಕ ಸ್ಯಾಂಡ್ ಬಜಾರ್ ಆಪ್ ಬಂದ್ ಆಗಿತ್ತು. ಇದೀಗ ಮುಂಬರುವ ಮಂಗಳವಾರವೇ ಈ ಆಪ್ನ್ನು ಮರಳಿ ಜಾರಿಗೆ ತರಲಾಗುವುದು. ಈ ವ್ಯವಸ್ಥೆ ಬಂದ ಬಳಿಕ ಜಿಲ್ಲೆಯಲ್ಲಿ ಮರಳು ಅಭಾವ ನೀಗಲಿದೆ ಎಂದು ಐವನ್ ಡಿಸೋಜ ಹೇಳಿದರು.
ಪ್ರಮುಖರಾದ ಗುಲಾಂ ಅಹ್ಮದ್ ಹೆಜಮಾಡಿ, ನಾಗೇಂದ್ರ ಕುಮಾರ್, ಮನುರಾಜ್, ಸತೀಶ್ ಪೆಂಗಲ್, ಸಿರಾಜ್ ಅಹ್ಮದ್, ಪ್ರೇಮ್ ಬಳ್ಳಾಲ್ಬಾಗ್ ಇದ್ದರು.