ಕಟೀಲು ದೇವಸ್ಥಾನದಲ್ಲಿ ಸೆ.೨೨ರಿಂದ ಅ.೨ರ ತನಕ ನವರಾತ್ರಿ ಪ್ರಯುಕ್ತ ಪ್ರತಿದಿನ ಬೆಳಗ್ಗೆ 9.30ರಿಂದ ಸಂಜೆ 4 ರ ತನಕ ವಿವಿಧ ತಂಡಗಳಿಂದ ಭಜನೆ, ಸಂಜೆ 4 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 7 ರಿಂದ ಸರಸ್ವತಿ ಸದನದಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ.
ಪ್ರತಿದಿನ ಭಜನೆ, ಸಾಂಸ್ಕೃತಿಕ ವೈಭವ, ಯಕ್ಷಗಾನ ಪ್ರಸಂಗಗಳ ಸರಣಿ ಪ್ರದರ್ಶನ
ಕನ್ನಡಪ್ರಭ ವಾರ್ತೆ ಮೂಲ್ಕಿಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರೀ ಪೂಜಾ ಮಹೋತ್ಸವ 22ರಿಂದ ಅ.2ರ ವರೆಗೆ ಜರುಗಲಿದೆ. ಪ್ರತಿದಿನ ಬೆಳಗ್ಗೆ 9.30ರಿಂದ ಸಂಜೆ 4 ರ ತನಕ ವಿವಿಧ ತಂಡಗಳಿಂದ ಭಜನೆ, ಸಂಜೆ 4 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 7 ರಿಂದ ಸರಸ್ವತಿ ಸದನದಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ.22ರಂದು ತುಳು ತಾಳಮದ್ದಲೆ ‘ಶನೇಶ್ವರ ಮಹಾತ್ಮಂ’, ಕವಿ: ಗಣೇಶ ಕೊಲಕಾಡಿ, ಯಕ್ಷಗಾನ-‘ಕೃಷ್ಣ ಸಂಧಾನ-ಕರ್ಣಭೇದನ’, 23 ರಂದು ಭರತನಾಟ್ಯ ವಿದುಷಿ ರಾಧಿಕಾ ಅಯ್ಯಂಗಾರ್ ನಾದನರ್ತನ ಸ್ಕೂಲ್ ಡ್ಯಾನ್ಸ್ ಮತ್ತು ಮ್ಯೂಸಿಕ್, ಬೆಂಗಳೂರು, ಕೊಳಲುವಾದನ ; ವಾಣಿ ಮಂಜುನಾಥ, ಬೆಂಗಳೂರು, ಯಕ್ಷಗಾನ : ಭೀಷ್ಮಪರ್ವ ನಡೆಯಲಿದೆ.24 ರಂದು ತೃತೀಯ ದಿನದ ಮೆರವಣಿಗೆ ಸಮಿತಿಯ 40ನೇ ವರ್ಷದ ವರ್ಷಾಚರಣೆ ಮತ್ತು ತೆಂಕು-ಬಡಗು ಯಕ್ಷಗಾನ ಕಲಾವಿದರಿಂದ ಯಕ್ಷಗಾನ ‘ದಾಕ್ಷಾಯಿಣಿ-ಶಶಿಪ್ರಭೆ’, 25ರಂದು ಭಕ್ತಿ ಸಂಗೀತ ಎಂ.ಎಸ್. ಗಿರಿಧರ ಮತ್ತು ವಸುಂದರ ಗಿರಿಧರ ಮಂಗಳೂರು, ಭರತನಾಟ್ಯ ಬಿಲ್ವ ಕಲಾಶಾಲೆ, ಕಿನ್ನಿಗೋಳಿ ಅವರಿಂದ, ಯಕ್ಷಗಾನ: ದ್ರೋಣಸೇನಾಧಿಪತ್ಯ-ಅಭಿಮನ್ಯು ಕಾಳಗ, 26ರಂದು ನೃತ್ಯ ನಾಟ್ಯಧಾರ ತಂಡ, ಗಿರಿನಗರ, ಬೆಂಗಳೂರು ಇವರಿಂದ ಭರತನಾಟ್ಯ, ವಿಭಾ ರಾಘವೇಂದ್ರ, ಬೆಂಗಳೂರು, ಯಕ್ಷಗಾನ ‘ಸೈಂಧವ ವಧೆ’ ನಡೆಯಲಿದೆ.ಲಲಿತಾ ಪಂಚಮಿ: 27ರಂದು ಲಲಿತಾಪಂಚಮೀ ಪ್ರಯುಕ್ತ ಶಾಸ್ತ್ರೀಯ/ಭಕ್ತಿಗಾಯನ : ಸ್ವಾತಿ ರೈ ಅಮೃತವರ್ಷಿಣಿ ಸಂಗೀತ ಅಕಾಡೆಮಿ ಮಂಗಳೂರು, ಶಾಸ್ತ್ರೀಯ ಸಂಗೀತ ಚಿರಶ್ರೀ ಯು. ಕಾವೂರು, ಯಕ್ಷಗಾನ ‘ಘಟೋತ್ಕಚ ಕಾಳಗ-ದ್ರೋಣಪರ್ವ’, 28 ರಂದು ಶಾಸ್ತ್ರೀಯ ಸಂಗೀತ ಹಾಗೂ ನೃತ್ಯಸೇವೆ, ಅಖಿಲ ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯ ಕಲಾವಿದರ ತಂಡ (ದ.ಕ. ಮತ್ತು ಉಡುಪಿ) ಅವರಿಂದ, ಬಡಗತಿಟ್ಟು ಯಕ್ಷಗಾನ ‘ದ್ರೌಪದಿ ಪ್ರತಾಪ’, ಯಕ್ಷಗಾನ ‘ಕರ್ಣಸೇನಾಧಿಪತ್ಯ - ಗಾಂಢೀವ ನಿಂದನೆ’ ನಡೆಯಲಿದೆ.29ರಂದು ಸಪ್ತಮೀ ಮೂಲಾನಕ್ಷತ್ರ, ಶಾರದಾಪೂಜೆ ,ಭರತನಾಟ್ಯ ವಿ. ಡಿ. ನಾಗವೇಣಿ ಲಲಿತ ನೃತ್ಯಕಲಾಮಂದಿರ ರಾಮನಗರ, ಬೆಂಗಳೂರು, ಭರತನಾಟ್ಯ; ನಾಟ್ಯ ವಿದುಷಿ ಸುನೀತಾ ಜಯಂತ ತಂಡದಿಂದ, ನಾಟ್ಯಾಲಯ ಉಳ್ಳಾಲ, ಯಕ್ಷಗಾನ: ‘ದುಶ್ಯಾಸನ ವಧೆ-ಕರ್ಣಪರ್ವ’, 30 ರಂದು ದುರ್ಗಾಷ್ಟಮೀ; ಭರತನಾಟ್ಯ ವಿ. ಶ್ರಾವ್ಯ ಕಿಶೋರ್, ನಾಟ್ಯಕಲಾಂಜಲಿ ನೃತ್ಯ ಅಕಾಡೆಮಿ, ಮುಚ್ಚೂರು, ಕರ್ನಾಟಕ ಸಂಗೀತ ಪ್ರಜ್ಞಾ ಅಡಿಗ, ಉಡುಪಿ, ಯಕ್ಷಗಾನ ‘ಶಲ್ಯಪರ್ವ’ ನಡೆಯಲಿದೆ.ಅ.1ರಂದು ಮಹಾನವಮೀ ಪ್ರಯುಕ್ತ ಆಯುಧಪೂಜೆ, ಭರತನಾಟ್ಯ ಅನಘಶ್ರೀ ನೃತ್ತ ನಿಕೇತನ, ಉಡುಪಿ, ಭರತನಾಟ್ಯ; ವಿ.ಭಾರತಿ ಸುರೇಶ್, ಶ್ರೀ ಶಾರದಾ ನಾಟ್ಯಾಲಯ, ಹೊಸಬೆಟ್ಟು, ಮಂಗಳೂರು,ಯಕ್ಷಗಾನ ‘ಗದಾಯುದ್ಧ’ ನಡೆಯಲಿದೆ.2ರಂದು ವಿಜಯದಶಮೀ ಹಾಗೂ ಮಧ್ವಜಯಂತೀ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ; ಅದಿತಿ ಕೊಂಕೋಡಿ, ಅಕ್ಷಯನಗರ, ಬೆಂಗಳೂರು ಅವರಿಂದ ಜರಗಲಿದೆಯೆಂದು ದೇವಳದ ಪ್ರಕಟಣೆ ತಿಳಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.